ಪಿಣರಾಯಿ ವಿಜಯನ್‌ಗೆ ಮತ್ತೆ ಲಾವ್ಲಿನ್ ಸಂಕಷ್ಟ


Team Udayavani, Mar 16, 2017, 2:53 PM IST

vijayan.jpg

ಕೊಚ್ಚಿ : 20 ವರ್ಷ ಹಿಂದಿನ ಲಾವ್ಲಿನ್ ಹಗರಣ ಮತ್ತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಕಾಡಲಾರಂಭಿಸಿದೆ. ಕೆನಡದ ಎಸ್‌ಎನ್‌ಸಿ ಲಾವ್ಲಿನ್ ಕಂಪೆನಿ ಜತೆಗೆ ಜಲ ವಿದ್ಯುತ್‌ ಸ್ಥಾವರಗಳನ್ನು ನವೀಕರಿಸಲು ಒಪ್ಪಂದ ಮಾಡಿಕೊಳ್ಳುವಾಗ ಪಿಣರಾಯಿ ಮಾಡಿದ ತಪ್ಪುಗಳನ್ನು ಸಿಬಿಐ ಪಟ್ಟಿ ಮಾಡಿದ್ದು, ರಾಜ್ಯ ರಾಜಕೀಯದಲ್ಲಿ ಈ ಹಗರಣ ಮತ್ತೆ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಗೋಚರಿಸಿದೆ. 

ಲಾವ್ಲಿನ್ ಕೇಸಿಗೆ ಸಂಬಂಧಿಸಿದಂತೆ ಪಿಣರಾಯಿ ವಿಜಯನ್‌ ಮತ್ತಿತರ ಆರೋಪಿಗಳನ್ನು ಖುಲಾಸೆಗೊಳಿಸಿರುವ ತೀರ್ಪಿನ ವಿರುದ್ಧ ಸಿಬಿಐ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ಹೈಕೋರ್ಟಿನಲ್ಲಿ ನಡೆಯುತ್ತಿದೆ. ಲಾವ್ಲಿನ್ ಕಂಪೆನಿ ಜತೆಗೆ ಒಪ್ಪಂದ ಮಾಡಿಕೊಳ್ಳುವಾಗ ಎಲ್‌ಡಿಎಫ್ ಸರಕಾರದಲ್ಲಿ ವಿದ್ಯುತ್‌ ಸಚಿವರಾಗಿದ್ದ ಪಿಣರಾಯಿ ವಿಜಯನ್‌ ಕೆಲವು ಮಹತ್ವದ ಅಂಶಗಳನ್ನು ಸಂಪುಟದಲ್ಲಿ ಬಹಿರಂಗಪಡಿಸದೆ ಮುಚ್ಚಿ ಹಾಕಿದ್ದರು  ಎಂದು ಸಿಬಿಐ ಆರೋಪಿಸಿದೆ.

ವಿದ್ಯುತ್‌ ವಿತರಣೆಗೆ ಸಂಬಂಧಿಸಿದಂತೆ ಕಂಪೆನಿ ಜತೆಗೆ ಮಾಡಿಕೊಂಡ ಒಪ್ಪಂದ ಸಂಪುಟ ಸದಸ್ಯರಿಗೆ ಗೊತ್ತಿರಲಿಲ್ಲ. ವಿದ್ಯುತ್‌ ಮಂಡಳಿಯ ಉನ್ನತಾಧಿಕಾರಿಗಳು ಈ ಯೋಜನೆಯ ವಿರುದ್ಧ ಎತ್ತಿದ ಆಕ್ಷೇಪಗಳನ್ನು ವಿಜಯನ್‌ ತನ್ನ ಅಧಿಕಾರ ಬಳಸಿ ದಮನಿಸಿದ್ದರು. ಕಂಪೆನಿ ಜತೆಗೆ ಮಾಡಿಕೊಂಡ ವಿದ್ಯುತ್‌ ವಿತರಣೆ ಒಪ್ಪಂದ ಕಾನೂನು ಪ್ರಕಾರ ಅಸಿಂಧುವಾಗಿತ್ತು ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.

ಲಾವ್ಲಿನ್ ಕಂಪೆನಿಯ ಅಧಿಕಾರಿಗಳ ಕುರಿತು ವಿಜಯನ್‌ ವಿಶೇಷ ಕಾಳಜಿ ವಹಿಸಿದ್ದರು. ಮಲಬಾರ್‌ ಕ್ಯಾನ್ಸರ್‌ ಸೆಂಟರ್‌ ಅವರದ್ದೇ ಯೋಜನೆಯಾಗಿತ್ತು. ಜಲ ವಿದ್ಯುತ್‌ ಯೋಜನೆಗಳನ್ನು ಸಂಪೂರ್ಣವಾಗಿ ನವೀಕರಿಸುವುದು ಅಗತ್ಯವಿಲ್ಲ ಎನ್ನುವುದು ವಿಜಯನ್‌ಗೆ ಗೊತ್ತಿತ್ತು. ಇದಕ್ಕೆ ಸಂಬಂಧಿಸಿದ ವರದಿಯೂ ಅವರ ಬಳಿಯಿತ್ತು. ಆದರೂ ನವೀಕರಣ ಒಪ್ಪಂದಕ್ಕೆ ಅಂಕಿತ ಹಾಕಿದ್ದರು. ಇಡೀ ಯೋಜನೆಯೇ ಪಿತೂರಿಯ ಒಂದು ಭಾಗವಾಗಿತ್ತು ಎಂದು ಸಿಬಿಐ ಹೇಳಿದೆ.
ಹರೀಶ್‌ ಸಾಳ್ವೆ ವಕೀಲ

ಲಾವ್ಲಿನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪರವಾಗಿ ಸುಪ್ರೀಂ ಕೋರ್ಟಿನ ಖ್ಯಾತ ವಕೀಲ ಹರೀಶ್‌ ಸಾಳ್ವೆ ವಾದಿಸಲಿದ್ದಾರೆ. ಇಂದು ಹೈಕೋರ್ಟಿನಲ್ಲಿ ಕೇಸ್‌ ವಿಚಾರಣೆಗೆ ಬಂದಾಗ ವಿಜಯನ್‌ ವಕೀಲ ಎನ್‌. ಕೆ. ದಾಮೋದರನ್‌ ಮುಖ್ಯಮಂತ್ರಿಯ ಪರವಾಗಿ ಸಾಳ್ವೆ ವಾದಿಸಲಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಕೇಸಿನ ಕುರಿತು ಅಧ್ಯಯನ ಮಾಡಲು ಸಾಳ್ವೆಗೆ ತುಸು ಕಾಲಾವಶಕಾಶ ಬೇಕೆಂದು ದಾಮೋದರನ್‌ ಹೇಳಿದ ಬಳಿಕ ವಿಚಾರಣೆಯನ್ನು ಮಾ. 17ಕ್ಕೆ ಮುಂದೂಡಲಾಯಿತು.

ಸಾಳ್ವೆ ದೇಶದ ದುಬಾರಿ ವಕೀಲರಲ್ಲಿ ಒಬ್ಬರು. ಅವರು ಒಂದು ಹಿಯರಿಂಗ್‌ಶುಲ್ಕ ಲಕ್ಷದಲ್ಲಿರುತ್ತದೆ. ಸಲ್ಮಾನ್‌ ಖಾನ್‌, ಲಲಿತ್‌ ಮೋದಿ, ಮುಕೇಶ್‌ ಅಂಬಾನಿ, ರತನ್‌ ಟಾಟಾ ಮುಂತಾದ ಕಾರ್ಪೊರೇಟ್‌ ದಿಗ್ಗಜರು ಮತ್ತು ಸೆಲೆಬ್ರಿಟಿಗಳ ಪರವಾಗಿ ಸಾಳ್ವೆ ವಾದಿಸಿದ್ದಾರೆ. 

ಏನಿದು ಲಾವ್ಲಿನ್ ಹಗರಣ ?
ಪಣ್ಣಿಯೂರು, ಚೆಂಗುಲಂ ಮತ್ತು ಪಳ್ಳಿವಸಲ್‌ ಜಲ ವಿದ್ಯುತ್‌ ಸ್ಥಾವರದ ಮೂರು ಜನರೇಟರ್‌ಗಳನ್ನು ದುರಸ್ತಿ ಪಡಿಸಲು ಕೆನಡ ಮೂಲದ ಎಸ್‌ಎನ್‌ಸಿ ಲಾವ್ಲಿನ್ ಕಂಪೆನಿ ಜತೆಗೆ ಆಗ ವಿದ್ಯುತ್‌ ಸಚಿವರಾಗಿದ್ದ ವಿಜಯನ್‌ ಒಪ್ಪಂದ ಮಾಡಿಕೊಂಡಿದ್ದರು. 374.5 ಕೋ. ರೂ. ಒಪ್ಪಂದದಿಂದಾಗಿ ವಿದ್ಯುತ್‌ ಮಂಡಳಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಒಪ್ಪಂದದಲ್ಲಿ ವಿಜಯನ್‌ ಕಿಕ್‌ಬ್ಯಾಕ್‌ ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದ ಬಳಿಕ ಸಿಬಿಐ ತನಿಖೆಗೆ ವಹಿಸಲಾಗಿತ್ತು. ಆದರೆ ಸಿಬಿಐ ಅವರನ್ನು 7ನೇ ಆರೋಪಿ ಎಂದು ಹೆಸರಿಸಿದ್ದು ಭಾರೀ ಟೀಕೆಗೆ ಗುರಿಯಾಗಿತ್ತು. 2013ರಲ್ಲಿ ತಿರುವನಂತಪುರದ ಸಿಬಿಐ ನ್ಯಾಯಾಲಯ ಅವರನ್ನು ದೋಷಮುಕ್ತಿಗೊಳಿಸಿದೆ. ಈ ತೀರ್ಪಿನ ವಿರುದ್ಧ ಸಿಬಿಐ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದೆ. 

ಟಾಪ್ ನ್ಯೂಸ್

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.