Road mishap; ವಾಹನ ಅಪಘಾತ: ಗಾಯಾಳು ಸಾವು
Team Udayavani, Oct 3, 2023, 11:41 PM IST
ಕುಂಬಳೆ: ನಾರಾಯಣ ಮಂಗಲದಲ್ಲಿ ಬಸ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟರ್ ಸವಾರ ಸೋಂಕಾಲು ಕೊಡಂಗೆ ರಸ್ತೆಯ ಬದ್ರಿಯಾ ಜುಮ್ಮಾ ಮಸೀದಿ ಬಳಿಯ ನಿವಾಸಿ ಮಹಮೂದ್ ಅವರ ಪುತ್ರ ಇಬ್ರಾಹಿಂ ಖಲೀಲ್ (20) ಅ. 2ರಂದು ರಾತ್ರಿ ಸಾವಿಗೀಡಾದರು.
ಇನ್ನೋರ್ವ ಸವಾರ ಉಪ್ಪಳ ಬಳಿಯ ಮಣಿಮುಂಡ ನಿವಾಸಿ ಮಂಗಲ್ಪಾಡಿ ಪಂಚಾಯತ್ ಸದಸ್ಯ ಮಹಮೂದ್ ಅವರ ಪುತ್ರ ಮೊಹಮ್ಮದ್ ಮಾಝಿನ್(24) ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.