ಕಾಸರಗೋಡಿನ ರ್ಯಾಂಕ್ ವಿಜೇತ ಶ್ರೀಕೃಷ್ಣ ಶರ್ಮರಿಗೆ ನಿವೇದಿತಾ ವತಿಯಿಂದ ಸನ್ಮಾನ
Team Udayavani, Apr 18, 2019, 5:06 PM IST
ಬದಿಯಡ್ಕ : ಕರ್ನಾಟಕ ಪಿ.ಯು.ಸಿ. ವಾಣಿಜ್ಯ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದ ಬದಿಯಡ್ಕ ಸಮೀಪದ ಪೆರಡಾಲ ಕಡಪ್ಪು ನಿವಾಸಿ ಕೃಷಿಕ ಸುಬ್ರಹ್ಮಣ್ಯ ಭಟ್ – ಶಾರದಾ ದಂಪತಿಗಳ ಪುತ್ರ ಶ್ರೀಕೃಷ್ಣ ಶರ್ಮನನ್ನು ನೀರ್ಚಾಲು ನಿವೇದಿತಾ ಸೇವಾಮಿಶನ್ ವತಿಯಿಂದ ಸನ್ಮಾನಿಸಿ, ಗೌರವಧನವನ್ನು ನೀಡಲಾಯಿತು.
ನೀರ್ಚಾಲು ನಿವೇದಿತಾ ಸೇವಾ ಮಿಷನ್ನ ಅಧ್ಯಕ್ಷ ಜಯದೇವ ಖಂಡಿಗೆ ಪದಾಧಿಕಾರಿಗಳೊಂದಿಗೆ ಸನ್ಮಾನಿಸಿದರು.