ತೆರಿಗೆ: ಅಡೂರಿನಲ್ಲಿ ವ್ಯಾಪಾರಿಗಳಿಂದ ಪ್ರತಿಭಟನೆ
Team Udayavani, Jul 13, 2017, 3:45 AM IST
ಅಡೂರು: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಅಡೂರು ಘಟಕದ ಆಶ್ರಯದಲ್ಲಿ ಜಿಎಸ್ಟಿ ವಿರುದ್ಧ ಪ್ರತಿಭಟನೆ ನಡೆಯಿತು.
ವಸ್ತು ಸೇವಾ ತೆರಿಗೆಯ ಹೆಸರಲ್ಲಿ ವ್ಯಾಪಾರಿಗಳಿಗೆ ದ್ರೋಹ ಮಾಡುವ ಉದ್ಯೋಗಿಗಳು ಮತ್ತು ತೆರಿಗೆ ಜಾರಿ ಗೊಳಿಸುವ ಕ್ರಮದ ವಿರುದ್ಧ ಘಟಕ ಪ್ರತಿಭಟಿಸಿದೆ. ಪ್ರತಿ ಭಟನೆಗೆ ಘಟಕ ಅಧ್ಯಕ್ಷ ಮೊಯ್ದಿàನ್ ಕುಂಞಿ, ಕಾರ್ಯದರ್ಶಿ ಮೊಹಮ್ಮದ್ ಇಕ್ಬಾಲ್, ಕೋಶಾಧಿಕಾರಿ ಎ.ಸಿ. ಚಂದ್ರಶೇಖರನ್ ನೇತೃತ್ವ ನೀಡಿದರು.