ಜ್ಞಾನದೊಂದಿಗೆ ಜೀವನ ಮೌಲ್ಯ ಗಳಿಕೆ ಶಿಕ್ಷಣದ ಗುರಿ


Team Udayavani, Aug 7, 2017, 6:40 AM IST

jnana.jpg

ಕಾಸರಗೋಡು: ಶಿಕ್ಷಣದ ಗುರಿ ಜ್ಞಾನಗಳಿಸುವುದರೊಂದಿಗೆ ಜೀವನ ಮೌಲ್ಯವನ್ನು ಗಳಿಸುವುದು ಆಗಿದೆ ಎಂದು ಇಸ್ರೋದ ಹಿರಿಯ ವಿಜ್ಞಾನಿ ಗಣೇಶ್‌ ರಾಜ್‌ ಹೇಳಿದರು.

ಅವರು ನಗರದಲ್ಲಿರುವ ಬಿ.ಇ.ಎಂ. ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಪ್ರತಿಭಾನ್ವಿತರಿಗೆ ಸತತ 10 ವರ್ಷಗಳಿಂದ ತಮ್ಮ ಮಾತೃಶ್ರೀ ದಿವಂಗತ ಕಲ್ಯಾಣಿ ಬಾಯ್‌ ಅವರ ಸ್ಮರಣಾರ್ಥವಾಗಿ ನಗದು ಬಹುಮಾನ ವನ್ನು ನೀಡಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಈ ಸಲ ಅವರೇ ಆಗಮಿಸಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿದ್ದು ಸಭೆಗೆ ಹೆಚ್ಚಿನ ಮೆರುಗನ್ನು ನೀಡಿತು. 

ಅವರು ತಮ್ಮ ಅತಿಥಿ ಭಾಷಣದಲ್ಲಿ ತಾವು ಐದರಿಂದ ಹತ್ತನೇ ತರಗತಿಯವರೆಗ ಈ ಶಾಲೆಯಲ್ಲಿ ಗಳಿಸಿದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರಲ್ಲದೆ ಗುರು ವೃಂದದವರಿಗೆ ನಮನಗಳನ್ನು ಸಲ್ಲಿಸಿದರು. 

ಕಲಿಕೆಯಲ್ಲಿ ಚಿಂತನೆಯಿದ್ದರೆ ಯಶಸ್ಸು
ಯುವ ಶಕ್ತಿಗಳು ದೇಶದ ಬೆನ್ನೆಲುಬು, ಕಲಿಕೆಯಲ್ಲಿ ಚಿಂತನೆ, ಲೆಕ್ಕಾಚಾರ, ಪ್ರಾಯೋಗಿಕತೆ, ಸಂಶೋಧನೆ ಮತ್ತು ಉದ್ದೇಶವಿದ್ದರೆ ಯಶಸ್ಸು ಖಂಡಿತ. ನಾವು ಪಡೆದುದರಿಂದ ಸ್ವಲ್ಪ ಭಾಗ ಸಮಾಜಕ್ಕೆ ನೀಡಿದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು. ಅನಂತರ ವಿದ್ಯಾರ್ಥಿಗಳೊಂದಿಗೆ ಪ್ರಶ್ನೋ ತ್ತರಗಳನ್ನು ನಡೆಸಿದರು.
ಸಭೆಯಲ್ಲಿ ಗಣೇಶ್‌ರಾಜ್‌ ಅವರನ್ನು ಪಿಟಿಎ ಮತ್ತು ಶಾಲೆಯ ವತಿಯಿಂದ ಶಾಲು ಹೊದೆಸಿ ಸಮ್ಮಾನಿಸ ಲಾಯಿತು.

ಅನಂತರ 2017 ಮಾರ್ಚ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹತ್ತು ವಿಷಯಗಳಲ್ಲಿ ಎ ಪ್ಲಸ್‌ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಯಶವಂತ್‌ ವಿಜೇತರ ಹೆಸರನ್ನು ಓದಿದರು. ರಕ್ಷಿತಾ ಕೆ. ಮತ್ತು ವೈಷ್ಣವಿ ಎಸ್‌.ರೈ ಅವರಿಗೆ ಅಶೋಕ್‌ ಕಿಣಿ ತಮ್ಮ ಹೆತ್ತವರಾದ ಶಂಕರ ನಾರಾಯಣ ಕಿಣಿ ಮತ್ತು ಉಮಾ ಕಿಣಿ ಸ್ಮರಣಾರ್ಥ ನೀಡುವ ತಲಾ 10 ಸಾವಿರ ರೂ. ನಗದು ಬಹುಮಾನಗಳನ್ನು ಗಣೇಶ್‌ರಾಜ್‌ ಅವರು ವಿತರಿಸಿದರು.

ಗಣೇಶ್‌ ರಾಜ್‌ ನೀಡುವ ತಲಾ 4 ಸಾವಿರದಂತೆ ಐವರು ವಿದ್ಯಾರ್ಥಿಗಳು,  ಪಿ.ಆರ್‌.ಅನುಶ್ರೀ, ಜೇಷ್ಮ ಮೋಹನ, ನಿರೀಕ್ಷಾ ಆರ್‌.ವಿ., ಸೃಜನ್‌ ಎಸ್‌. ಐಲ್‌, ಅವರಿಗೆ ಕಲ್ಯಾಣಿ ಬಾಯಿ ಪುರಸ್ಕಾರವನ್ನು ವಸಂತ ಕುಮಾರ್‌ ವಿತರಿಸಿ ವಿಜೇತರನ್ನು ಅಭಿನಂದಿಸಿದರು.

ಯಜ್ಞೆàಶ್‌ ಮತ್ತು ಹರಿ ಅವರಿಗೆ ಪಿಟಿಎ ವತಿಯಿಂದ ತಲಾ ನಾಲ್ಕು ಸಾವಿರ ರೂ. ನೀಡಲಾಯಿತು. 2017 ರಲ್ಲಿ 10 ಹಾಗು 9 ವಿಷಯಗಳಲ್ಲಿ ಎ ಪ್ಲಸ್‌ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಪಿಟಿಎ ವತಿಯಿಂದ ನಗದು ಬಹುಮಾನವನ್ನು ನೀಡಲಾಯಿತು. 

ರವಿಚಂದ್ರ ಕೇಳುಗುಡ್ಡೆ ವೈಯಕ್ತಿವಾಗಿ ವಿಜೇತರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಪಿಟಿಎ ಉಪಾಧ್ಯಕ್ಷ ಕೃಷ್ಣ ಭಟ್‌ ವಿಜೇತರನ್ನು ಅಭಿನಂದಿಸಿದರು.

ಸಭೆಯಲ್ಲಿ ವಿದ್ಯಾರ್ಥಿಗಳು, ಹೆತ್ತವರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾ ಧ್ಯಾಯ ಕೆ.ಪಿ. ರಾಜೇಶ್ಚಂದ್ರ ಸ್ವಾಗತಿಸಿದರು. ಶರ್ಲಿ ಮೆರೊಸ್‌ ಕಾರ್ಯಕ್ರಮ ನಿರೂಪಿಸಿದರು. ಕನಕರಾಜ ಅವರು ವಂದಿಸಿದರು.

ಟಾಪ್ ನ್ಯೂಸ್

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Electric shock: ಯುವಕನ ಸಾವು

Electric shock: ಯುವಕನ ಸಾವು

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.