ಉದುಮ ಮಂಡಲ: ಯೂತ್ ಲೀಗ್ ಸದಸ್ಯತ್ವ ಅಭಿಯಾನ
Team Udayavani, Jun 29, 2019, 5:10 AM IST
ವಿದ್ಯಾನಗರ: ಒಳ್ಳೆಯ ಕಾರ್ಯಗಳಿಗಾಗಿ ಒಂದಾಗಿ ನೀತಿ ಗಳಿಸಲು ಹೋರಾಡಿ ಎಂಬ ಸಂದೇಶ ದೊಂದಿಗೆ ಜುಲೆ„ ಒಂದರಂದು ಪ್ರಾರಂಭವಾಗುವ ಸದಸ್ಯತ್ವ ಅಭಿಯಾನ ವನ್ನು ಯಶಸ್ವಿ ಗೊಳಿಸು ವಂತೆ ಉದುಮ ಮಂಡಲ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಮಿತಿಯ ಅಧ್ಯಕ್ಷ ಹಾರಿಸ್ ತೊಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಬೀರ್ ತೆಕ್ಕಿಲ್ ಮಂಡಲದ ಪದಾಧಿಕಾರಿಗಳಿಗೆ 15,000 ಸದಸ್ಯತ್ವ ಚೀಟಿಗಳನ್ನು ಹಸ್ತಾಂತರಿಸಿದರು. ಜಿಲ್ಲಾ ಕಾರ್ಯದರ್ಶಿ ನೆಜೀಬ್ ಸದಸ್ಯತ್ವ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು.
ಅಬ್ಟಾಸ್ ಕೊಳಚ್ಚಪ್ಪ್, ಸಿದ್ಧಿಕ್ ಬೋವಿಕ್ಕಾನ, ಟಿ.ಡಿ. ಹಸನ್ ಬಸರಿ, ಅಸ್ಲಾಂ ಕಿಯೂರ್, ಹಾರೀಸ್ ಅಂಕಕಳರಿ, ರಂಸೀರ್ ಪಳ್ಳಕ್ಕೋಡ್ ಮುಂತಾದವರು ಪಂಚಾಯತುಗಳಲ್ಲಿ ಸದಸ್ಯತ್ವ ಅಭಿಯಾನದ ಜವಾಬ್ದಾರಿಯನ್ನು ವಹಿಸಿಕೊಂಡರು.
ಎಂ.ಬಿ. ಶಾನವಾಸ್, ಆಶಿಫ್, ರಹ್ಮಾನ್ ಕಾಚ್ಚಿಲ್, ಶೆಫೀಕ್, ಟಿ.ಕೆ. ಹಸೀಬ್, ಹೆ„ದರ್ ಪಡುಪ್ಪ್, ನಶಾತ್ ಪರುವನಡ್ಕ, ನೌಷಾದ್ ಬಿ.ಕೆ., ಮೊಯ್ದು ಮುಂತಾದವರು ಉಪಸ್ಥಿತರಿದ್ದರು. ಮಂಡಲದ ಪ್ರಧಾನ ಕಾರ್ಯದರ್ಶಿ ರಲೌಫ್ ಬಾಯಿಕ್ಕೆರೆ ಸ್ವಾಗತಿಸಿ ವಂದಿಸಿದರು.