Alvas Virasat: ಸಪ್ತ ಮೇಳಗಳ ಉದ್ಘಾಟನೆ
Team Udayavani, Dec 15, 2023, 10:28 AM IST
ಮೂಡುಬಿದಿರೆ: ಸರಕಾರ ನಡೆಸುವ ಉತ್ಸವಗಳಲ್ಲಿ ಜೀವಕಳೆ ಇಲ್ಲದೆ ಸಪ್ಪಗಾದ ವಾತಾವರಣ ಕಂಡುಬಂದರೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ನಡೆಸುತ್ತ ಬಂದಿರುವ ವಿರಾಸತ್, ನುಡಿಸಿರಿಯಂಥ ಸಾಹಿತ್ಯ ಸಾಂಸ್ಕೃತಿಕ ಉತ್ಸವಗಳಲ್ಲಿ ಜನತೆ ಸ್ವಸಂತೋಷದಿಂದ ಪಾಲ್ಗೊಳ್ಳುತ್ತ ಇದು ತಮ್ಮದೇ ಉತ್ಸವ ಎಂಬಂತೆ ಸಂಭ್ರಮಿಸುವುದನ್ನು ಕಂಡಾಗ, ಸಂಘಟಕರು ಹಾಗೂ ವೀಕ್ಷಕರ ಹೃದಯ ಶ್ರೀಮಂತಿಕೆ ಎಷ್ಟೊಂದು ಅಗಾಧವಾದುದು ಎಂಬುದು ಅರಿವಾಗುತ್ತದೆ. ಈ ಎಲ್ಲ ಕಾರ್ಯಕ್ರಮಗಳು ನಮ್ಮ ನಿಮ್ಮ ಹೃದಯವನ್ನು ಗೆದ್ದಿವೆ, ಗೆಲ್ಲುತ್ತಿವೆ ಎಂದು ರಾಜ್ಯ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮುಖ್ಯ ಆಯುಕ್ತ, ಮಾಜಿ ಸಚಿವ ಪಿ.ಜಿ.ಆರ್. ಸಿಂಧಿಯಾ ಹೇಳಿದರು.
ವಿದ್ಯಾಗಿರಿಯಲ್ಲಿ ಗುರುವಾರ ಪ್ರಾರಂಭವಾದ 29ನೇ ವರ್ಷದ ಆಳ್ವಾಸ್ ವಿರಾಸತ್ -2023ರಂಗವಾಗಿ ಏರ್ಪಡಿಸಲಾಗಿರುವ ಸಪ್ತ ಮೇಳಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂಥ ಉತ್ಸವ ನೋಡಲು ಅದೃಷ್ಟ ಬೇಕು. ಕೃಷಿಯೊಂದಿಗೆ ನಾಡಿನ ಸಾಂಸ್ಕೃತಿಕ ಬದುಕಿನ ಅನಾವರಣವಾಗುತ್ತಿದೆ. ಹೃದಯದ ಕಣ್ಣುಗಳನ್ನು ತೆರೆಸುವ ಪ್ರದರ್ಶನ ಎಂದು ಶ್ಲಾಘಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವರು ಸ್ವಾಗತಿಸಿ ವಿರಾಸತ್ ಧ್ಯೇಯೋದ್ಧೇಶ, ಸ್ವರೂಪ ವಿವರಿಸಿದರು.
ಮಾಜಿ ಸಚಿವ ಅಭಯಚಂದ್ರ, ಚೌಟರ ಅರಮನೆ ಕುಲದೀಪ ಎಂ., ಶ್ರೀಪತಿ ಭಟ್, ಬಾಹುಬಲಿ ಪ್ರಸಾದ್, ಚಂದ್ರಶೇಖರ ಎಂ. ಎಸಿಎಫ್ ಸತೀಶ್ ಎನ್. , ಕೆವಿಕೆ ವಿಜ್ಞಾನಿ ಡಾ| ಬಿ.ಧನಂಜಯ, ಎಸ್ ಕೆಡಿ ಆರ್ ಡಿಪಿಯ ದುಗ್ಗೇ ಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ಜಯಕುಮಾರ, ಬಾಲಕೃಷ್ಣ ಶೆಟ್ಟಿ ಮೊದಲಾದ ಗಣ್ಯರಿದ್ದರು. ಉಪನ್ಯಾಸಕ ಕೆ. ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.
ಇದು ನಂದನವನ
ಮೂಡುಬಿದಿರೆಯ ಸ್ವಸ್ತಿಶ್ರೀಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನವಿತ್ತರು. ನಮ್ಮೆಲ್ಲರ ಬದುಕಿಗೆ ಆಧಾರವೇ ಕೃಷಿ. ಪಾಳು ಬಿದ್ದಿರುವ ಬರಡುಭೂಮಿಯನ್ನು ನಿರುದ್ಯೋಗಿಗಳೆನ್ನುವ ಯುವಕರಿಗೆ ನೀಡಿ ಅಲ್ಲಿ ಕೃಷಿ ಅರಳಿಸುವ ಕಾರ್ಯ ನಡೆಯಬೇಕಾಗಿದೆ. ಕಾಲೇಜು ಶಿಕ್ಷಣದ ಜತೆಗೆ ಅಥವಾ ಬಳಿಕ ಕನಿಷ್ಠ ಎರಡು ವರ್ಷ ಕೃಷಿಯಲ್ಲಿ ಯುವಜನರು ತೊಡಗಿಸಿಕೊಳ್ಳುವಂತಾದರೆ ಆಹಾರದಲ್ಲಿ ಕೊರತೆ ತಲೆದೋರಲು ಸಾಧ್ಯವೇ ಇಲ್ಲ, ಮಾನವ ಶ್ರಮದ ಗೌರವವೂ ಅವರಿಗೆ ಮನವರಿಕೆ ಆಗಲು ಸಾಧ್ಯ. ವಿದ್ಯಾಗಿರಿ ಎಂಬ ಬರಡು ಭೂಮಿ ಹೇಗೆ ನಂದನವನವಾಗಿ ಬಹುಬಗೆಯಲ್ಲಿ ಅರಳಿಕೊಂಡಿದೆ ಎಂಬುದು ಚೇತೋಹಾರಿ ಸಂಗತಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ