ಸುರತ್ಕಲ್: 6 ಗಂಟೆಗೆ ಬೀಚ್ ಗೆ ಬೀಗ!
Team Udayavani, Jan 7, 2021, 11:04 PM IST
ಸುರತ್ಕಲ್: ನೂತನ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಗಾಂಜಾ, ಅಮಲು ಪದಾರ್ಥ ಸೇವನೆ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಅದೇ ಬಿಗಿ ಕ್ರಮ ಬೀಚ್ ಗಳಲ್ಲಿ ಬರುವ ಪ್ರವಾಸಿಗರಿಗೆ ಬಿಸಿ ಮುಟ್ಟಿಸಿದೆ.
ಶನಿವಾರ ರವಿವಾರ ಜನರಿಂದ ಸದಾ ಗಿಜಿಗುಡುವ ಬೀಚ್ ನಲ್ಲಿ ಇನ್ನು 6 ಗಂಟೆಯ ಬಳಿಕ ಜನ ಇರದಂತೆ ನೋಡಿಕೊಳ್ಳಿ. ಎಲ್ಲರನ್ನೂ ಬೇಗ ಕಳಿಸಬೇಕು ಎಂಬ ಆದೇಶ ಹೊರ ಬಿದ್ದಿದೆ. ಸಂಜೆಯಾದೊಡನೆ ಜನ ಬೀಚ್ ಖಾಲಿ ಮಾಡಬೇಕೆಂದು ಇಲ್ಲಿನ ಉಸ್ತುವಾರಿ ನೋಡಿಕೊಳ್ಳುವ ಯೋಜಕ ಸಂಸ್ಥೆಗೆ ಪೊಲೀಸ್ ಇಲಾಖೆಯಿಂದ ಮೌಕಿಕ ಆದೇಶವಾಗಿದೆ. ಪಣಂಬೂರು, ಸುರತ್ಕಲ್ ಬೀಚ್ ನಲ್ಲೂ ಪೊಲೀಸ್ ವಾಹನಗಳು ರೌಂಡ್ಸ್ ಹೊಡೆಯುತ್ತಿದ್ದು, ಜನರನ್ನು ಹಿಂದೆ ಕಳಿಸುತ್ತಿದ್ದರು ಎಂಬ ಮಾಹಿತಿ ಲಭಿಸಿದೆ.
ಯಾಕೆ ಏನು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಕರಾವಳಿಯಲ್ಲಿ ಪ್ರವಾಸಿಗರನ್ನು ಸೆಳೆಯುವ ಸ್ಥಳ ಬೀಚ್. ಸ್ಥಳೀಯ ಜನರ ಸಹಿತ ಪ್ರವಾಸಿಗರು 8-9 ಗಂಟೆಯವರೆಗೆ ಇರುವುದು ಸಾಮಾನ್ಯ. ಆದರೆ ಇದೀಗ 6 ಗಂಟೆಗೆ ಜನರನ್ನು ವಾಪಾಸು ಕಳಿಸಿ ಎಂಬ ಮೌಕಿಕ ಆದೇಶ ಪೊಲೀಸ್ ಇಲಾಖೆಯಿಂದ ಹೊರ ಬಿದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ