ತಿಂಗಳು ಕಳೆದರೂ ಮುಂದುವರಿದ ಅನಿಶ್ಚಿತತೆ!
Team Udayavani, Apr 4, 2022, 10:17 AM IST
ಲಾಲ್ಬಾಗ್: ಮಂಗಳೂರು ಮಹಾನಗರ ಪಾಲಿಕೆ ಬಿಜೆಪಿ ಆಡಳಿತದ ಎರಡನೇ ಅವಧಿಯ ಮೇಯರ್ ಅಧಿಕಾರಾವಧಿ ಮುಗಿದು 1 ತಿಂಗಳಾದರೂ ಮೂರನೇ ಅವಧಿಯ ಮೇಯರ್ ಚುನಾವಣೆ ಬಗ್ಗೆ ಇನ್ನೂ ಅನಿಶ್ಚಿತತೆ ಮುಂದುವರಿದಿದೆ.
ಪ್ರೇಮಾನಂದ ಶೆಟ್ಟಿ ಅವರ ಮೇಯರ್ ಅಧಿಕಾರಾವಧಿ ಕಳೆದ ತಿಂಗಳು 2ನೇ ದಿನಾಂಕಕ್ಕೆ ಕೊನೆಗೊಂಡಿತ್ತು. ಆದರೆ ಕಾನೂನಾತ್ಮಕ ಕಾರಣಗಳ ಹಿನ್ನೆಲೆಯಲ್ಲಿ ಪ್ರೇಮಾನಂದ ಶೆಟ್ಟಿ ಅವರ ಮೇಯರ್ ಅಧಿಕಾರಾವಧಿಯನ್ನು ಸರಕಾರದ ಮುಂದಿನ ಆದೇಶ ಬರುವವರೆಗೆ ವಿಸ್ತರಣೆಗೊಳಿಸಲಾಗಿದೆ. ಸದ್ಯ 1 ತಿಂಗಳು ಕಳೆದರೂ ಮುಂದಿನ ಮೇಯರ್ ಚುನಾವಣೆ ಬಗ್ಗೆ ಇನ್ನೂ ಸರಕಾರದಿಂದ ಅಂತಿಮ ತೀರ್ಮಾನ/ಸೂಚನೆ ಬಂದಿಲ್ಲ.
ನೂತನ ಮೇಯರ್ ಆಯ್ಕೆ ಆಗದೆ ಹಾಲಿ ಮೇಯರ್ ನೆಲೆಯಲ್ಲಿ ಪಾಲಿಕೆ ಸಾಮಾನ್ಯ ಸಭೆ ನಡೆಸಬಹುದೇ? ಎಂಬ ಜಿಜ್ಞಾಸೆಗೂ ಇನ್ನೂ ಉತ್ತರ ಸಿಕ್ಕಿಲ್ಲ. ಪಾಲಿಕೆ ಸಾಮಾನ್ಯ ಸಭೆ ನಡೆಸಬಹುದು ಎಂದು ಮೌಖೀಕವಾಗಿ ಕಾನೂನು ತಜ್ಞರು ಹೇಳಿದ್ದರೂ ಸರಕಾರದಿಂದ ಈ ಕುರಿತು ನಿರ್ದೇಶನ ನಿರೀಕ್ಷಿಸಿ ಮುಂದಿನ ತೀರ್ಮಾನ ಮಾಡಲು ಪಾಲಿಕೆ ನಿರ್ಧರಿಸಿದೆ.
ಈ ಹಿಂದೆ 2005ರಲ್ಲಿ ಕಾನೂನಾತ್ಮಕ ಕಾರಣದಿಂದಾಗಿ ಮೇಯರ್ ಅಧಿಕಾರಾ ವಧಿ ವಿಸ್ತರಣೆಗೊಂಡಿತ್ತು. ಆಗ ಮೇಯರ್ ಆಗಿದ್ದ ಅಶ್ರಫ್ ಅವರು 25-07-2005ಕ್ಕೆ ಅಧಿಕಾರ ಸ್ವೀಕರಿಸಿದ್ದರು. ನಿಯಮ ಪ್ರಕಾರ ಅವರ ಅಧಿಕಾರ ಅವಧಿ 25-07-2006ಕ್ಕೆ ಕೊನೆಗೊಂಡು ನೂತನ ಮೇಯರ್ ಆಯ್ಕೆ ಯಾಗಬೇಕಿತ್ತು. ಆದರೆ ಆ ವೇಳೆಯ ಲ್ಲಿಯೂ ಕಾನೂನಾತ್ಮಕ ಕಾರಣದ ಹಿನ್ನೆಲೆ ಯಲ್ಲಿ ಅಂದಿನ ಮೇಯರ್ ಅಧಿಕಾರ ಅವಧಿ ವಿಸ್ತರಣೆಗೊಂಡಿತ್ತು. ಈ ಮೂಲಕ 25-10-2006ರ ವರೆಗೆ (1 ವರ್ಷ 3 ತಿಂಗಳು)ಅಶ್ರಫ್ ಮೇಯರ್ ಆಗಿದ್ದರು.
ಕೊನೆಯ ಮೇಯರ್ ಅವಧಿ ಕಡಿತ
ಪಾಲಿಕೆಯ ಅಧಿಕಾರಾವಧಿ 5 ವರ್ಷಗಳಾಗಿದ್ದು, ಮೇಯರ್ ಅವರ ಅಧಿಕಾರಾವಧಿ 1 ವರ್ಷವಾಗಿರುತ್ತದೆ. ಈ ಮಧ್ಯೆ ಯಾವುದೇ ಮೇಯರ್ ಅವರ ಅಧಿಕಾರಾವಧಿ ವಿಸ್ತರಣೆಯಾದರೆ ಕೊನೆಯ ಮೇಯರ್ ಅವರ ಅಧಿಕಾರ ಅವಧಿ ಕಡಿತಗೊಳ್ಳುತ್ತದೆ. ಪಾಲಿಕೆ ಪ್ರಸಕ್ತ ಆಡಳಿತಾವಧಿ 28-02-2020ಕ್ಕೆ ಆರಂಭವಾಗಿದ್ದು, 27-02-2025ರ ವರೆಗೆ ಇರಲಿದೆ. ಮೂರನೇ, ನಾಲ್ಕನೇ ಮೇಯರ್ ಅವಧಿ ಪೂರ್ಣ 1 ವರ್ಷ ದೊರಕಿದರೂ ಕೊನೆಯ ಮೇಯರ್ ಅವಧಿ ಮಾತ್ರ ಕಡಿತವಾಗಲಿದೆ.
ಅನಿಶ್ಚಿತತೆಗೆ ಕಾರಣವೇನು?
ಮಂಗಳೂರು ಪಾಲಿಕೆಯ 23ನೇ ಅವಧಿಗೆ ಮೇಯರ್ ಹಾಗೂ ಉಪಮೇಯರ್ ಆಯ್ಕೆಗಾಗಿ ಮೇಯರ್ ಸ್ಥಾನವನ್ನು ಸಾಮಾನ್ಯ (ಜಿ) ಹಾಗೂ ಉಪಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ ಎ ಮಹಿಳೆ (ಬಿಸಿಎಡ ಬ್ಲ್ಯು) ವರ್ಗಕ್ಕೆ ಮೀಸಲಿರಿಸಿದ್ದು, ಅದರಂತೆ ಚುನಾವಣೆ ಮಾ. 2ರಂದು ನಿಗದಿಯಾಗಿತ್ತು. ಆದರೆ ಮಹಾರಾಷ್ಟ್ರದ ರಾಹುಲ್ ರಮೇಶ್ ಅವರು ಸುಪ್ರಿಂಕೋರ್ಟ್ನಲ್ಲಿ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿ ದೂರು ಸಲ್ಲಿಸಿದ ವೇಳೆ ನ್ಯಾಯಾಲಯವು ಸ್ಥಳೀಯ ಸಂಸ್ಥೆಯ ಮೀಸಲಾತಿ ವಿಚಾರವಾಗಿ ಬೊಟ್ಟು ಮಾಡಿ ಆದೇಶ ನೀಡಿದೆ. ಹೀಗಾಗಿ, “ನ್ಯಾಯಾಲಯದ ಈ ಆದೇಶದ ಬಗ್ಗೆ ಮಂಗಳೂರು ಪಾಲಿಕೆಯ 23ನೇ ಅವಧಿಯ ಮೇಯರ್, ಉಪ ಮೇಯರ್, 4 ಸ್ಥಾಯೀ ಸಮಿತಿ ಚುನಾವಣೆ ಮಾ. 2ರಂದು ನಿಗದಿಪಡಿಸಿರುವುದರಿಂದ ಈ ಚುನಾವಣೆಗೆ ಅನ್ವಯವಾಗುವುದೇ?’ ಎಂಬ ಬಗ್ಗೆ ದ.ಕ. ಜಿಲ್ಲಾಧಿಕಾರಿಯವರು ರಾಜ್ಯ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದರು. ಆದರೆ ಈವರೆಗೂ ಸರಕಾರದಿಂದ ಇದಕ್ಕೆ ಯಾವುದೇ ಸ್ಪಷ್ಟೀಕರಣ ಸ್ವೀಕೃತವಾಗಿಲ್ಲ. ಹಾಗಾಗಿ ಚುನಾವಣೆಯನ್ನು ಮುಂದೂಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ
MUST WATCH
ಹೊಸ ಸೇರ್ಪಡೆ
BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
Gangolli: ಸ್ವಯಂ ಪ್ರೇರಣೆಯಿಂದ ಚಿತ್ರ ಕಲಾವಿದೆಯಾದ ತುಳಸಿ
ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ
ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ