ದಕ್ಷಿಣ ಕನ್ನಡ.: 6 ಸಾವು, 271 ಕೋವಿಡ್ ಪಾಸಿಟಿವ್; ಮೃತರ ಸಂಖ್ಯೆ 262
Team Udayavani, Aug 16, 2020, 1:43 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 271 ಮಂದಿಗೆ ಕೋವಿಡ್ ದೃಢಪಟ್ಟಿದೆ. 6 ಮಂದಿ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 262ಕ್ಕೇರಿದೆ. ಶನಿವಾರ 202 ಮಂದಿ ಗುಣಮುಖರಾಗಿದ್ದಾರೆ. 39 ಮಂದಿಗೆ ಸೋಂಕಿತರ ಸಂಪರ್ಕ ದಿಂದ, 128 ಮಂದಿ ಇನ್ಫ್ಲೂಯೆನ್ಜ್ ಲೈಕ್ ಇಲ್ನೆಸ್, 10 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ, ನಾಲ್ವರಿಗೆ ಪ್ರಯಾಣ ದಿಂದ ಕೊರೊನಾ ದೃಢಪಟ್ಟಿದೆ. 90 ಮಂದಿಯ ಸಂಪರ್ಕ ಪತ್ತೆಹಚ್ಚಲಾಗುತ್ತಿದೆ.
ಸೋಂಕಿತರಲ್ಲಿ 177 ಮಂದಿ ಮಂಗಳೂರು, 47 ಮಂದಿ ಬಂಟ್ವಾಳ, 23 ಮಂದಿ ಪುತ್ತೂರು, ಓರ್ವ ಸುಳ್ಯ, 14 ಮಂದಿ ಬೆಳ್ತಂಗಡಿ ಹಾಗೂ 9 ಮಂದಿ ಹೊರ ಜಿಲ್ಲೆಯವವರು. ಇವರಲ್ಲಿ 92 ಪುರುಷರು, 60 ಮಹಿಳೆಯರು ರೋಗ ಲಕ್ಷಣಗಳನ್ನು ಹೊಂದಿ ದ್ದಾರೆ. 74 ಮಂದಿ ಪುರುಷರು, 45 ಮಂದಿ ಮಹಿಳೆಯರು ರೋಗ ಲಕ್ಷಣ ಹೊಂದಿಲ್ಲ.
ಮೃತ ಅಪರಿಚಿತ ವ್ಯಕ್ತಿಗೆ ಸೋಂಕು
ಮಂಗಳೂರು ನೆಹರೂ ಮೈದಾನದ ಬಳಿ ಆ. 13 ರಂದು ಅನಾರೋಗ್ಯದಿಂದ ಬಿದ್ದಿದ್ದ 70ರ ಪುರುಷ ಆ. 14ರಂದು ಆಸ್ಪತ್ರೆ ಯಲ್ಲಿ ಮೃತಪಟ್ಟಿದ್ದು ಅವರಿಗೆ ಕೋವಿಡ್ ದೃಢಪಟ್ಟಿದೆ. ವಾರಸು ದಾರರಿದ್ದರೆ ದಕ್ಷಿಣ ಪೊಲೀಸ್ ಠಾಣೆ (0824-2220518)ಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ