ಮಂಗಳೂರು ವೈದ್ಯರ ವೀಡಿಯೋ ಮೆಚ್ಚಿದ ಲತಾ ಮಂಗೇಶ್ಕರ್
Team Udayavani, Jul 7, 2020, 8:52 AM IST
ಮಂಗಳೂರು: ವೈದ್ಯರ ದಿನಾಚರಣೆಯಂದು ಕೋವಿಡ್ ವಾರಿಯರ್ಗಳಿಗೆ ನಮನ ಸಲ್ಲಿಸಲೆಂದು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಗಾಯನವನ್ನು ಬಳಸಿಕೊಂಡು ವೈದ್ಯ ಡಾ| ಗೌತಮ್ ಕುಳಮರ್ವ ರಚಿಸಿದ ವೀಡಿಯೋವೊಂದು ವೈರಲ್ ಆಗಿದೆ. ಸ್ವತಃ ಲತಾ ಮಂಗೇಶ್ಕರ್ ಅವರೇ ವೀಡಿಯೋ ಮೆಚ್ಚಿ ಡಾ| ಕುಳಮರ್ವ ಅವರನ್ನು ಸಂಪರ್ಕಿಸಿ ಮೆಚ್ಚುಗೆ ಸೂಚಿಸಿದ್ದಾರೆ.
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಹಾಡಿದ “ಯೇ ಮೇರೇ ವತನ್ ಕೇ ಲೋಗೋಂ’ ಎಂಬ ದೇಶಭಕ್ತಿ ಗೀತೆಯ ತುಣುಕನ್ನು ಅವರು ತಮ್ಮ ವೀಡಿಯೋದಲ್ಲಿ ಬಳಸಿಕೊಂಡಿದ್ದು, ವೈದ್ಯಕೀಯ ವಲಯದಲ್ಲಿ ಹಂಚಿಕೊಳ್ಳುವುದಕ್ಕಾಗಿ ವೀಡಿಯೋ ಮಾಡಿದ್ದರು. ಆದರೆ ಭಾರತೀಯ ವೈದ್ಯವಿಜ್ಞಾನ ಸಂಸ್ಥೆ (ಐಎಂಎ) ಸದಸ್ಯರೊಂದಿಗೆ ವಾಟ್ಸ್ಆ್ಯಪ್ ಮೂಲಕ ಹಂಚಿಕೊಂಡಿದ್ದ ವೀಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡಿತ್ತು. ಇದು ಪದ್ಮಭೂಷಣ ಲತಾ ಮಂಗೇಶ್ಕರ್ ಅವರಿಗೂ ತಲುಪಿದೆ. ವೀಡಿಯೋ ನೋಡಿದ ಮಂಗೇಶ್ಕರ್ ತಮ್ಮ ಪರಿಚಯದ ವೈದ್ಯರ ಮೂಲಕ ಡಾ| ಕುಳಮರ್ವ ಅವರನ್ನು ಸಂಪರ್ಕಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಹಾಡು ಭಾರತ-ಚೀನ ನಡುವೆ 1962ರಲ್ಲಿ ನಡೆದ ಯುದ್ಧದ ಸಂದರ್ಭದಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲು ರಚನೆಯಾಗಿತ್ತು. ಕವಿ ಪ್ರದೀಪ್ ಅವರು ರಚಿಸಿದ್ದ ಹಾಡನ್ನು ಲತಾ ಹಾಡಿದ್ದರು. ಮೂಲತಃ ಕಾಸರಗೋಡಿನವರಾಗಿರುವ ಡಾ| ಕುಳಮರ್ವ ಅವರು ಇಎನ್ಟಿ ತಜ್ಞರಾಗಿದ್ದು, ಕಾಸರಗೋಡು / ಮಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದೇರೆಬೈಲ್ ಕೊಂಚಾಡಿಯ ಲ್ಯಾಂಡ್ಲಿಂಕ್ಸ್ ಟೌನ್ಶಿಪ್ನಲ್ಲಿ ನೆಲೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ