ಮೂಡಬಿದಿರೆ ಪುರಸಭೆ: 50.32 ಲಕ್ಷ ರೂ. ಮಿಗತೆ ಬಜೆಟ್
ನಿರೀಕ್ಷಿತ ಆದಾಯ 30.75 ಕೋಟಿ ರೂ
Team Udayavani, Mar 24, 2022, 1:36 PM IST
ಮೂಡಬಿದಿರೆ: ಬುಧವಾರ ನಡೆದ ಪುರಸಭಾ ಅಯವ್ಯಯ ಅಧಿವೇಶನದಲ್ಲಿ ಅಧ್ಯಕ್ಷ ಪ್ರಸಾದ್ ಕುಮಾರ್ ಅವರು 30.75 ಕೋ.ರೂ. ನಿರೀಕ್ಷಿತ ಆದಾಯ, 30.25 ಕೋಟಿ ವೆಚ್ಚದೊಂದಿಗೆ 50.32 ಲಕ್ಷದ ಮಿಗತೆ ಬಜೆಟ್ ಅನ್ನು ಮಂಡಿಸಿದರು.
ಆರಂಭಿಕ ಶಿಲ್ಕು 3.76 ಕೋಟಿ ರೂ. ಇದ್ದು 2022-23ರಲ್ಲಿ 26.99 ಕೋ. ರೂ ಜಮೆಯಾಗುವ ನಿರೀಕ್ಷೆ ಇದೆ. ಯಾವುದೇ ಹೊಸ ಯೋಜನೆಯನ್ನು ಘೋಷಿಸಿಲ್ಲ.
ಪ್ರಮುಖ ಆದಾಯ ವಿವರ
ಕಟ್ಟಡ ತೆರಿಗೆಯಿಂದ 257.95 ಲಕ್ಷ ರೂ., ಕಟ್ಟಡಗಳ ಬಾಡಿಗೆಯಿಂದ 80 ಲಕ್ಷ ರೂ., ನೀರಿನ ಶುಲ್ಕದಿಂದ 80 ಲಕ್ಷ, ಮನೆ ಮನೆ ಕಸದ ಶುಲ್ಕ ವಸೂಲಿಯಿಂದ 65 ಲಕ್ಷ, ಖಾತೆ ಬದಲಾವಣೆಯಿಂದ 50 ಲಕ್ಷ, ಪರವಾನಿಗೆಗಳಿಂದ 40 ಲಕ್ಷ, ಕಟ್ಟಡ ಅಭಿವೃದ್ಧಿ ಶುಲ್ಕದಿಂದ 35 ಲಕ್ಷ, ಉದ್ಯಮ ಪರವಾನಿಗೆಯಿಂದ 15 ಲಕ್ಷ, ಮಾರ್ಕೆಟ್ ವರಿ ವಸೂಲಿಯಿಂದ 75 ಲಕ್ಷ, ದಂಡ ಮತ್ತು ಜುಲ್ಮಾನೆಗಳಿಂದ 21 ಲಕ್ಷ ರೂ. ಅದಾಯ ನಿರೀಕ್ಷಿಸಲಾಗಿದೆ. ಇತರ ಪ್ರತಿಗಳ ಶುಲ್ಕದಿಂದ 7.5ಲಕ್ಷ, ಜಾಹೀರಾತು ತೆರಿಗೆಗಳಿಂದ 7 ಲಕ್ಷ, ನೀರಿನ ಸಂಪರ್ಕ ಶುಲ್ಕದಿಂದ 6 ಲಕ್ಷ, ಖಾತೆ ಪ್ರತಿ ಶುಲ್ಕದಿಂದ 5 ಲಕ್ಷ, ಬಸ್ನಿಲ್ದಾಣ ಶುಲ್ಕ 2 ಲಕ್ಷ, ಇನ್ನು ರಸ್ತೆ ಅಗೆತ ಶುಲ್ಕ, ಟೆಂಡರ್ ನಮೂನೆ ಶುಲ್ಕದಿಂದ ತಲಾ 1 ಲಕ್ಷ ರೂ. ಆದಾಯ ಬರಬಹುದೆಂದು ಅಂದಾಜಿಸಲಾಗಿದೆ.
ಪುರಸಭೆ ನಿಧಿಯಿಂದ ವೆಚ್ಚಗಳು
ರಸ್ತೆಗಳ ರಚನೆ, ಅಭಿವೃದ್ಧಿಗಾಗಿ 125 ಲಕ್ಷ, ಚರಂಡಿ ರಚನೆಗೆ 50 ಲಕ್ಷ, ಕೊಳವೆ ಬಾವಿ ಪಂಪ್, ನೀರಿನ ಪೈಪ್ ಸೋರಿಕೆ ದುರಸ್ತಿ ಬಗ್ಗೆ 50 ಲಕ್ಷ, ಹೊರಗುತ್ತಿಗೆಯಡಿ ತಾತ್ಕಾಲಿಕ ಪಂಪು ಚಾಲಕರ ವೇತನಕ್ಕಾಗಿ 20 ಲಕ್ಷ, 8 ಮಂದಿ ಪಂಪ್ ಚಾಲಕರ ವೇತನಕ್ಕಾಗಿ 20 ಲಕ್ಷ, ಹೊರಗುತ್ತಿಗೆಯಡಿ ದಾರಿದೀಪ ದುರಸ್ತಿ, ನಿರ್ವಹಣೆಗೆ 30 ಲಕ್ಷ, ದಾರಿದೀಪ ವಿಸ್ತರಣೆಗೆ 30 ಲಕ್ಷ, ಕೊಳವೆ ಬಾವಿ, ಪೈಪ್ಲೈನ್ ರಚನೆಗೆ 30 ಲಕ್ಷ, ಆಡಿಟ್, 3ನೇ ಪಾರ್ಟಿ ತಪಾಸಣೆ, ಕಾನೂನು ವೆಚ್ಚಗಳಿಗಾಗಿ 25 ಲಕ್ಷ, ಜಂಗಲ್ ಕಟ್ಟಿಂಗ್, ಚರಂಡಿ ಹೂಳು ತೆಗೆಯಲು 23 ಲಕ್ಷ, ಕಸ ಸಂಗ್ರಹದ ವಾಹನ, ಚಾಲಕರ ನಿರ್ವಹಣೆಗೆ 20 ಲಕ್ಷ, ದಾರಿ ದೀಪ ಸಾಮಗ್ರಿ ಬಗ್ಗೆ 10 ಲಕ್ಷ, ನೈರ್ಮಲ್ಯ ಘಟಕಕ್ಕೆ ಸಾಮಗ್ರಿ ಬಗ್ಗೆ 10 ಲಕ್ಷ, ಬ್ಲೀಚಿಂಗ್, ಕ್ಲೋರಿನೇಟರ್ ಗ್ಯಾಸ್ಗೆ 8 ಲಕ್ಷ, ಪಾರ್ಕ್ ನಿರ್ವಹಣೆಗೆ 2 ಲಕ್ಷ, ಮಳೆ ನೀರಿನ ಚರಂಡಿ ದುರಸ್ತಿಗೆ 5 ಲಕ್ಷ, ರೇಚಕ ಸ್ಥಾವರಗಳ ದುರಸ್ತಿ, ನಿರ್ವಹಣೆಗೆ 4.75 ಲಕ್ಷ, ಜೆಸಿಬಿ ಕಾರ್ಯಾಚರಣೆ, ಘನತ್ಯಾಜ್ಯ ಸಂಬಂಧಿತ ವೆಚ್ಚ 5 ಲಕ್ಷ, ಕಚೇರಿಯ ಲೇಖನ ಸಾಮಗ್ರಿಗೆ 5 ಲಕ್ಷ, ಕಂಪ್ಯೂಟರ್ ನಿರ್ವಹಣೆ, ಪೀಠೊಪಕರಣ ಬಗ್ಗೆ 15 ಲಕ್ಷ, ವಾಹನ ಇಂಧನದ ಬಗ್ಗೆ 20 ಲಕ್ಷ, ವಿಮೆ ಕಂತು 5 ಲಕ್ಷ, ದುರಸ್ತಿಗೆ 5 ಲಕ್ಷ ವೆಚ್ಚವಾಗಲಿದೆ ಎಂದು ಆಂದಾಜಿಸಲಾಗಿದೆ.
ಇದಲ್ಲದೆ, ಶೇ.24.10 ನಿಧಿಗೆ ಎಸ್ಎಫ್ಸಿ ನಿಧಿಯಿಂದ 25 ಲಕ್ಷ, ಪುರಸಭೆ ನಿಧಿಯಿಂದ 6 ಲಕ್ಷ, ಶೇ.7.25ರ ನಿಧಿಗೆ ಪುರಸಭೆ ನಿಧಿಯಿಂದ 2.35 ಲಕ್ಷ, ಶೇ. 5ರ ನಿಧಿಗೆ ಪುರಸಭೆ ನಿಧಿಯಿಂದ 2 ಲಕ್ಷ ಇವೆಲ್ಲ ವ್ಯಯದ ಪಟ್ಟಿಗೆ ಸೇರುತ್ತವೆ ಎಂದು ಅವರು ವಿವರಿಸಿದರು. ಪುರಸಭಾ ಉಪಾಧ್ಯಕ್ಷೆ ಸುಜಾತಾ ಶಶಿಧರ, ಸ್ಥಾಯೀ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಇಂದು ಎಂ., ಎಂಜಿನಿಯರ್ ಪದ್ಮನಾಭ, ಆರೋಗ್ಯ ನಿರೀಕ್ಷಕ ರಾಜೇಶ್ ಕೆ., ಅಕೌಂಟೆಂಟ್ ಸೀಮಾ ಸಹಿತ ಅಧಿಕಾರಿಗಳಿದ್ದರು. ಪುರಸಭೆ ಸದಸ್ಯರು ಚರ್ಚೆಗಳಲ್ಲಿ ಪಾಲ್ಗೊಂಡಿದ್ದು ಬಜೆಟ್ ಸರ್ವಾನುಮತಿಯೊಂದಿಗೆ ಮಂಜೂರಾಯಿತು.
ಪ್ರಮುಖ ವೆಚ್ಚಗಳು
ಎಸ್ಎಫ್ಸಿ ಮುಕ್ತ ನಿಧಿ ಅನುದಾನದಲ್ಲಿ ಪೌರಕಾರ್ಮಿಕರ ವೇತನಕ್ಕೆ 64 ಲಕ್ಷ, ಶೇ.24.10ರನ್ವಯ ಪ.ಜಾ., ಪ.ಪಂ. ವರ್ಗಕ್ಕೆ 20 ಲಕ್ಷ, 15ನೇ ಹಣಕಾಸು ಸಾಮಾನ್ಯ ಮೂಲ ನಿರೀಕ್ಷಿತ ಅನುದಾನದಲ್ಲಿ ರಸ್ತೆಗೆ 53 ಲಕ್ಷ, ಚರಂಡಿಗೆ 25 ಲಕ್ಷ, ಕುಡಿಯುವ ನೀರು ಕಾಮಗಾರಿಗೆ 58.50 ಲಕ್ಷ , ಘನತ್ಯಾಜ್ಯ ಘಟಕಕ್ಕೆ 58.50 ಲಕ್ಷ ರೂ., ಖಾಯಂ ನೌಕರರ ವೇತನ, ಪಿಂಚಣಿಗಾಗಿ 75 ಲಕ್ಷ ರೂ. ಕಾದಿರಿಸಲಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport; ನಾಲ್ಕು ತಿಂಗಳಲ್ಲಿ 4.45 ಕೋ.ರೂ. ಮೌಲ್ಯದ “ಚಿನ್ನ’ದ ಬೇಟೆ
ಇಂದು ವಿಶ್ವ ಅಸ್ತಮಾ ದಿನ; ದೈಹಿಕ- ಮಾನಸಿಕವಾಗಿ ಕುಗ್ಗಿಸುವ “ಅಸ್ತಮಾ’
D.K ತಾಪಮಾನದಲ್ಲಿ ಏರಿಕೆ; ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್ ನಲ್ಲಿ 6 ಬೆಡ್ ಮೀಸಲು
May 9: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಮೊದಲ ತಂಡದಿಂದ ಹಜ್ ಯಾತ್ರೆ
Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ
MUST WATCH
ಹೊಸ ಸೇರ್ಪಡೆ
Arrested: ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ
Lok Sabha Election: ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು…
ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್ಚಂದ್ರ ಅವರಿಂದ ಚಿಕಿತ್ಸೆ
Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ
Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…