ಮೂಡುಬಿದಿರೆ: ಸೌಂದರ್ಯ ಕಳೆದುಕೊಳ್ಳುತ್ತಿವೆ ಉದ್ಯಾನವನಗಳು

ಕಾಯಕಲ್ಪಕ್ಕಾಗಿ ಕೇಳಿ ಬರುತ್ತಿದೆ ಕೂಗು

Team Udayavani, Oct 9, 2022, 11:00 AM IST

6

ಮೂಡುಬಿದಿರೆ: ಶುದ್ಧ ಹವೆಗಾಗಿ ಬಹಳ ಹಿಂದಿನಿಂದಲೂ ಹೆಸರಾಗಿರುವ ಮೂಡುಬಿದಿರೆಯಲ್ಲಿ ಅಲ್ಲಲ್ಲಿ ಪಾರ್ಕ್‌ಗಳನ್ನು ನಿರ್ಮಿಸ ತೊಡಗಿ ಐದು ದಶಕಗಳೇ ಸಂದಿವೆ. ಜ್ಯೋತಿನಗರದ ಗಾಂಧಿ ಜನ್ಮ ಶತಾಬ್ಧ ಪಾರ್ಕ್‌, ಮಹಾವೀರ ಕಾಲೇಜು ಬಳಿಯ ಕೀರ್ತಿ ನಗರದಲ್ಲಿರುವ ರೋಟರಿ ಟೆಂಪಲ್‌ ಟೌನ್‌ ಪಾರ್ಕ್‌ ಇಂತಹ ಉದ್ಯಾನವನಗಳು, ಕಡಲಕೆರೆಯಲ್ಲಿ ಹೊಸದಾಗಿ ತೆರೆದುಕೊಂಡಿರುವ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್‌, ಬದಿಯಲ್ಲೇ ಇರುವ ಬಿದಿರು ವನ ಜನಮನ ಸೆಳೆಯುತ್ತಿವೆ. ಆದರೆ, ಜನವಸತಿ ಪ್ರದೇಶಗಳ ಪರಿಸರದ ಕೆಲವು ಉದ್ಯಾನವನಗಳು ನಿರ್ವಹಣೆಯಿಲ್ಲದೆ ಸೊರಗುತ್ತಿದ್ದು, ಅವುಗಳ ಸೌಂದರ್ಯವನ್ನು ಕಳೆದುಕೊಳ್ಳುತ್ತಿವೆ.

ಹುಡ್ಕೋ ಕಾಲನಿ

ಹುಡ್ಕೋ ಕಾಲನಿಯ ಉದ್ಯಾನವನದಲ್ಲಿ ಹುಲ್ಲು ಬೆಳೆದು ನಿಂತಿದೆ. ಇದರಿಂದ ಸರೀಸೃಪಗಳು ಅಡಗಿರುವ ಭೀತಿಯಿದೆ. ಹೂವಿನಗಿಡಗಳಿದ್ದರೂ, ಆಕರ್ಷಣೀಯವಾಗಿಲ್ಲ. ಜೋಕಾಲಿ, ಜಾರುಬಂಡಿ ಮತ್ತಿತರ ಆಟದ ಪರಿಕರ, ವ್ಯವಸ್ಥೆಗಳು ನಾ ದುರಸ್ತಿಯಾಗಿವೆ. ಪಾರ್ಕ್‌ ಒಂದು ಮೂರು ಬಾಗಿಲು ಎಂಬಂತಿದೆ. ಎರಡು ದ್ವಾರಗಳು ಬಂದ್‌ ಆಗಿ, ಬೀಗಗಳಿಗೆ ತುಕ್ಕು ಹಿಡಿದಿದೆ. ಇಡೀ ಪಾರ್ಕ್‌ ನಿರ್ವಹಣೆಯಿಲ್ಲದೇ ಸೊರಗುತ್ತಿವೆ.

ಜ್ಯೋತಿ ನಗರ ಸಂಗಮ ಸ್ಥಾನ ವೃತ್ತ

ಜ್ಯೋತಿ ನಗರದಲ್ಲಿ ಮೂರು ಮಾರ್ಗಗಳ ಸಂಗಮ ಸ್ಥಾನದ ವೃತ್ತದ ಬಳಿ ಇರುವ ಪುಟ್ಟ ಪಾರ್ಕ್‌ ಹಲವರ ಪೋಷಣೆಯ ಶಿಶುವಾಗಿ ಬೆಳೆಯುತ್ತ ಬಂದಿದ್ದು ಕೆಲವರು ಹೊಸವರ್ಷಾಚರಣೆ ಮಾಡುವ, ಕೆಲವರು ಗಿಡಮೂಲಿಕೆ ಗಳನ್ನು ನೆಡುವುದೇ ಮೊದಲಾದ ಕಾರ್ಯಗಳನ್ನು ನಡೆಸಿ ಗಮನ ಸೆಳೆದಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಒಂದಷ್ಟು ತರಗೆಲೆ ರಾಶಿ ಬಿದ್ದಿದೆ. ಜಾರು ಬಂಡಿಯಲ್ಲೂ ತರಗೆಲೆ ರಾಶಿ. ಮಕ್ಕಳ ಜೋಕಾಲಿಯ ಹಲಗೆ ಕುಂಬಾಗಿ ಜೀರ್ಣವಾಗಿ ಅಪಾಯಕಾರಿಯಾಗಿದೆ.

ಸೌಲಭ್ಯ ಒದಗಿಸಿ

ಬೆಳೆದ ಹುಲ್ಲನ್ನೇನೋ ಕತ್ತರಿಸಿ ಹಾಕಿದ್ದಾರೆ. ಉಳಿದಂತೆ ಉದ್ಯಾನವನ ಅನಾಕರ್ಷಕಣೀಯವಾಗಿದೆ. ಪುರಸಭೆಯ ಕಡೆಯಿಂದ ನೀರು ಹಾಯಿಸಲಾಗುತ್ತಿದೆ. ಉಳಿದಂತೆ ಈ ಪಾರ್ಕ್‌ನಲ್ಲಿ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಸಂಬಂಧಪಟ್ಟವರು ಮುಂದಾಗಬೇಕಿದೆ.

ಇಂತಹ ಪಾರ್ಕ್‌ಗಳಿಗೆ ಪುರಸಭೆಯಾಗಲೀ, ಸ್ಥಳೀಯ ಸಂಘಟನೆಗಳಾಗಲೀ ನಡೆಸಬಹುದಾದ ಕಾಯಕಲ್ಪ ಪ್ರಕ್ರಿಯೆಯಲ್ಲಿ ಸ್ಥಳೀಯ ಯುವಮನಸ್ಸುಗಳೂ ಕೈಜೋಡಿಸಲು ಮುಂದೆ ಬರಬೇಕಾಗಿದೆ.

13 ಲಕ್ಷ ರೂ. ವೆಚ್ಚದ ಪಾರ್ಕ್‌ಗಿಲ್ಲ ಪೋಷಣೆ!

ಹುಡ್ಕೋ ಪ್ರಾಂತ್ಯ ಶಾಲೆಯ ಉತ್ತರಕ್ಕೆ ಹುಡ್ಕೋ ಕಾಲನಿಯ ಇನ್ನೊಂದು ಭಾಗದಲ್ಲಿ 2016ರಲ್ಲಿ ಪುರಸಭೆಯಿಂದ 13ನೇ ಹಣಕಾಸು ಯೋಜನೆಯಡಿ 13 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಉದ್ಯಾನವನವು ದಿನೇ ದಿನೇ ತನ್ನ ಸೌಂದರ್ಯವನ್ನು ಕಳೇದುಕೊಳ್ಳುತ್ತಿದೆ. ಗಿಡಗಳ ಪೋಷಣೆಗೆ ನೀರೊಂದು ಬಿಟ್ಟು ಬೇರೇನೂ ವ್ಯವಸ್ಥೆ ಇರುವಂತೆ ಕಾಣುವುದಿಲ್ಲ. ಅಲ್ಲದೇ, ಈ ಪಾರ್ಕ್‌ಗೆ ನಿಗದಿತ ವೇಳಾ ಪಟ್ಟಿ ಇಲ್ಲ. ಕಬ್ಬಿಣದ ಈಟಿಗಳಂತಿರುವ ಗ್ರಿಲ್‌ಗ‌ಳ ಸಾಲುಹೊತ್ತ ಆವರಣ ಗೋಡೆಯನ್ನು ಹಾರಿ ಬಂದು ಪಾರ್ಕ್‌ ಪ್ರವೇಶ ಮಾಡಿ ರಾತ್ರಿ ಹತ್ತಾದರೂ ಹೊರಡದೆ, ಪರಿಸರದ ಪ್ರಶಾಂತತೆಗೆ ಧಕ್ಕೆ ತರುವ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪ ಈ ಪಾರ್ಕ್‌ನ ಸುತ್ತ ಸುಳಿದಾಡುತ್ತಿದೆ. ಈ ಬಗ್ಗೆ ವಾರ್ಡ್‌ ಸದಸ್ಯರ ಗಮನಕ್ಕೂ ಬಂದಿದ್ದರೂ, ಪಾರ್ಕ್‌ನ್ನು ಸುಸ್ಥಿತಿಗೆ ತರುವ, ಅಭಿವೃದ್ಧಿಗೊಳಿಸುವ ಸಂಗತಿಗಳು ಪ್ರಗತಿ ಕಂಡಿಲ್ಲ

„ಧನಂಜಯ ಮೂಡುಬಿದಿರೆ

 

ಟಾಪ್ ನ್ಯೂಸ್

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.