ಕಡಲ್ಕೊರೆತಕ್ಕೆ ಕೊಚ್ಚಿ ಹೋಗುತ್ತಿರುವ ತೀರ ಪ್ರದೇಶ

ಅವೈಜ್ಞಾನಿಕ ಕಾಮಗಾರಿ: ಮೀನಕಳಿಯದಲ್ಲಿ ಸಮುದ್ರ ಒಳ ನುಗ್ಗಿ ಅವಾಂತರ

Team Udayavani, Jul 19, 2022, 2:04 PM IST

11

ಪಣಂಬೂರು: ಅವೈಜ್ಞಾನಿಕ ಕಾಮಗಾರಿ, ಸ್ಥಳೀಯರ ಮಾಹಿತಿ ಪಡೆಯದೆ ಅಧಿಕಾರಿಗಳ ಏಕಪಕ್ಷೀಯ ನಿರ್ಧಾರಗಳಿಂದ ಸಮುದ್ರಕ್ಕೆ ಕಲ್ಲು ಹಾಕುವ ಪ್ರಕ್ರಿಯೆ ವಿಫಲವಾಗುತ್ತಿದ್ದು, ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಓಷಿಯನ್‌ ಟೆಕ್ನಾಲಜಿ (ಎನ್‌ಐಒಟಿ)ಸಲಹೆ ಸೂಚನೆ ಪಾಲಿಸುವ ಆವಶ್ಯಕತೆ ಎದುರಾಗಿದೆ.

ಸದ್ಯ ಪಣಂಬೂರು ಬಳಿಯ ಕೂರಿಕಟ್ಟ ಪ್ರದೇಶದಲ್ಲಿನ ಒಂದು ಸಣ್ಣ ಭಾಗಕ್ಕೆ ಕಡಲ್ಕೊರೆತ ಆಗದಂತೆ ಕಲ್ಲು ಹಾಕಿದ ಪರಿಣಾಮ ಇಂದು ಮೀನಕಳಿಯ ಪ್ರದೇಶದಲ್ಲಿ ಸಮುದ್ರ ಒಳ ನುಗ್ಗಿ ಅವಾಂತರ ಸೃಷ್ಟಿಸಿದೆ. ಸುರತ್ಕಲ್‌ನಿಂದ ಪಣಂಬೂರು ವರೆಗೆ ವಿವಿಧ ಭಾಗದಲ್ಲಿ ಕಡಲ್ಕೊರೆತ ಆದ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ಗೋಡೆಯಂತೆ ಕಪ್ಪು ಕಲ್ಲು ಪೇರಿಸಿ ಇಡುವ ಕಾಮಗಾರಿ ಹೊಸಬೆಟ್ಟು, ಸುರತ್ಕಲ್‌ ಪ್ರದೇಶದಲ್ಲಿ ಯಶಸ್ವಿಯಾದರೆ ಇತ್ತ ಕುಳಾಯಿ ಬಳಿ, ಚಿತ್ರಾಪುರ ಬಳಿ ತಡೆಗೋಡೆ ನಿರ್ಮಾಣ ಕಾರ್ಯದಲ್ಲಿ ರಾಜ್ಯ ಬಂದರು ಇಲಾಖೆ ಎಡವಿದಂತೆ ಕಾಣುತ್ತಿದೆ. ಈ ಭಾಗದಲ್ಲಿ ಭಾರೀ ಗಾತ್ರದ ಕೆಲವೊಂದು ಕಲ್ಲುಗಳನ್ನು ಸಮುದ್ರದ ತೆರೆಗಳು ಎಳೆದುಕೊಂಡು ಹೋಗಿವೆ.

ಇನ್ನೊಂದೆಡೆ ಮೀನಕಳಿಯ ಭಾಗದಲ್ಲಿ ಮೂರು ಮನೆ ಭಾಗಶಃ ಹಾನಿಗೊಳಗಾದರೆ, ರಸ್ತೆ ಸಮುದ್ರ ಪಾಲಾಗಿದೆ. ಹಲವಾರು ತೆಂಗಿನ ಮರಗಳು, ಬಾದಾಮ್‌ ಮರಗಳು ಸಮುದ್ರದಲ್ಲಿ ಕೊಚ್ಚಿಹೋಗಿವೆ.

ಪಣಂಬೂರು ಬೀಚ್‌ ಭಾಗದಲ್ಲೂ ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ಜಾಗವನ್ನು ಸಮುದ್ರ ಆಕ್ರಮಿಸಿ ಕೊಂಡಿದೆ. ಇಲಾಖೆಯು ಸಮರ್ಪಕ ಯೋಜನೆಯಿಲ್ಲದೆ ಕಾಮ ಗಾರಿ ಮಾಡಿದ ಪರಿಣಾಮ ಈ ಪ್ರದೇಶದಲ್ಲಿ ಕಡಲ್ಕೊರೆತ ಉಂಟಾಗಿದೆ ಎಂಬುದು ಹಿರಿಯ ಮೀನುಗಾರರ ಅನಿಸಿಕೆ. ಕಡಲ್ಕೊರೆತ ತಡೆಗೆ ತೋಚಿದಂತೆ ಕಲ್ಲು ಹಾಕುವ ಪ್ರಕ್ರಿಯೆಗೆ ದೇಶದ ಹಸಿರು ಪೀಠ ತಡೆ ನೀಡಿ ಎನ್‌ಐಒಟಿಯ ಸೂಕ್ತ ಸಲಹೆ ಸೂಚನೆ ಪಡೆದು ಹಾಕುವಂತೆ ನಿರ್ದೇಶನವನ್ನು ಎಪ್ರಿಲ್‌ 2022ರ ಆದೇಶದಲ್ಲಿ ಸೂಚಿಸಿದ್ದು ಅದರಂತೆ ನಡೆಸಬೇಕಿದೆ.

ಕುಳಾಯಿ, ಚಿತ್ರಾಪುರ ಭಾಗದಲ್ಲಿ ಸಮುದ್ರದ ದಡಕ್ಕೆ ನೇರವಾಗಿ ಕಲ್ಲು ಹಾಕಲಾಗಿದ್ದು ಅವೈಜ್ಞಾಕಿವಾಗಿ ಹಾಕಲಾಗಿದೆ ಎಂದು ಸಿಆರ್‌ಝಡ್‌ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ್ದು, ಹಸಿರು ಪೀಠ ಆದೇಶದಂತೆಯೇ ಹಾಕಬೇಕು ಎಂಬ ಸೂಚನೆ ನೀಡಿದೆ. ಇದರಿಂದ ಹಾಕಲಾದ ಬೃಹತ್‌ ಕಲ್ಲುಗಳನ್ನು ತೆರವು ಮಾಡಿ ಕಾಸರಗೋಡು ನೆಲ್ಲಿಕುನ್ನು ಮಾದರಿಯಲ್ಲಿ ಹಾಕಲಾಗುತ್ತದೆಯೆ ಅಥವಾ ಎನ್‌ಐಒಟಿ ನಿರ್ದೇಶನದಂತೆ ನಕ್ಷೆ ಮಾಡಿ ಮುಂದಿನ ಕಡಲ್ಕೊರೆತ ಪ್ರದೇಶದಲ್ಲಿ ಕಾಮಗಾರಿ ನಡೆಸಲು ಬಂದು ಇಲಾಖೆ ಕ್ರಮ ಕೈಗೊಳ್ಳಲಿದೆಯೆ ಎಂಬುದನ್ನು ಕಾದು ನೋಡಬೇಕಿದೆ.

ಸೂಕ್ತ ಪುನರ್‌ ವ್ಯವಸ್ಥೆ ಕೈಗೊಳ್ಳಲು ನೋಟಿಸ್‌: ಕಡಲ್ಕೊರೆತ ತಡೆಗಟ್ಟಲು ಸಮರ್ಪಕ ಕಾಮಗಾರಿ ನಡೆಸುವ ಬಗ್ಗೆ ಹಸಿರು ಪೀಠ ಎಪ್ರಿಲ್‌ನಲ್ಲಿ ತೀರ್ಪು ನೀಡಿದ್ದು, ಅದರಂತೆ ವೈಜ್ಞಾನಿಕವಾಗಿ ಮಾಡಬೇಕು. ಈ ಬಗ್ಗೆ ಚಿತ್ರಾಪುರ ಭಾಗದಲ್ಲಿ ಕಡಲ್ಕೊರೆತ ತಡೆಗೆ ಮಾಡಿದ ಕಾಮಗಾರಿ ಸಮರ್ಪಕವಾಗಿಲ್ಲ. ನ್ಯಾಯಲಯದ ಆದೇಶದಂತೆ ಈ ಬಗ್ಗೆ ಸೂಕ್ತ ಪುನರ್‌ವ್ಯವಸ್ಥೆ ಕೈಗೊಳ್ಳಿ ಎಂದು ಸಂಬಂಧಪಟ್ಟ ಇಲಾಖೆಗೆ ನೋಟಿಸ್‌ ನೀಡಿದ್ದೇವೆ. – ಡಾ| ದಿನೇಶ್‌ ಕುಮಾರ್‌ ವೈ., ಪ್ರಾದೇಶಿಕ ನಿರ್ದೇಶಕರು, ಅರಣ್ಯ, ಜೀವಿ ಪರಿಸ್ಥಿತಿ, ಪರಿಸರ ಇಲಾಖೆ

ಟಾಪ್ ನ್ಯೂಸ್

1-wqeqwqe

IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್‌ಗಳ ಜಯ

voter

Pen Drive ಹಗರಣದ ನಡುವೆ ರಾಜ್ಯದ ಎರಡನೇ ಹಂತದ ಬಹಿರಂಗ ಪ್ರಚಾರ ಅಂತ್ಯ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

ಯತ್ನಾಳ್ ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್

Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್

Pralhad Joshi ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು

Pralhad Joshi ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

ಮಂಗಳೂರಿನಲ್ಲಿ ಜನಾಕರ್ಷಣೆ ಕೇಂದ್ರವಾದ ರ್‍ಯಾಂಬೊ ಸರ್ಕಸ್‌

mangalore international airport

Mangaluru; ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸ್ ಭದ್ರತೆ

CRZ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

ಸಿಆರ್‌ಝಡ್‌ ಮರಳು ಇನ್ನು ಸದ್ಯಕ್ಕೆ ಮರೀಚಿಕೆ

Kinnigoli: ಕಾಂತಬಾರೆ-ಬೂದಬಾರೆಯರ ತೊಟ್ಟಿಲು ಕಟ್ಟಿದ್ದ ಮರ ಇನ್ನಿಲ್ಲ!

Kinnigoli: ಕಾಂತಬಾರೆ-ಬೂದಬಾರೆಯರ ತೊಟ್ಟಿಲು ಕಟ್ಟಿದ್ದ ಮರ ಇನ್ನಿಲ್ಲ!

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqwqe

IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್‌ಗಳ ಜಯ

voter

Pen Drive ಹಗರಣದ ನಡುವೆ ರಾಜ್ಯದ ಎರಡನೇ ಹಂತದ ಬಹಿರಂಗ ಪ್ರಚಾರ ಅಂತ್ಯ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

ಯತ್ನಾಳ್ ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್

Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.