ರಾಜಕಾಲುವೆಯ ಒತ್ತುವರಿಯೇ ಇಲ್ಲಿನ ಸಮಸ್ಯೆ

ವಾರ್ಡ್‌: ದೇರೆಬೈಲು ಪೂರ್ವ, ದೇರೆಬೈಲ್‌ ಉತ್ತರ, ಬಂಗ್ರಕೂಳೂರು

Team Udayavani, Mar 29, 2022, 11:57 AM IST

raja

ಕೊಟ್ಟಾರಚೌಕಿ: ಪ್ರತೀ ಬಾರಿ ಸಣ್ಣ ಮಳೆ ಬಂದಲೂ ಕೊಟ್ಟಾರಚೌಕಿ ಪ್ರದೇಶ ಮುಳುಗಡೆಯಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ. ಇದಕ್ಕೆ ಪ್ರಧಾನ ಕಾರಣ 21 ಅಡಿಗಳಷ್ಟು ವಿಸ್ತಾರವಾಗಿದ್ದ ರಾಜಕಾಲುವೆ ಈಗ ಐದಾರು ಅಡಿಗಳಿಗೆ ಸೀಮಿತವಾಗಿರುವುದು.

ದೇರೆಬೈಲ್‌ ಉತ್ತರ (17), ಬಂಗ್ರ ಕೂಳೂರು (16) ವಾರ್ಡ್‌ಗಳ ಎತ್ತರದ ಪ್ರದೇಶವಾದ ಶ್ರೀ ರಾಜರಾಜೇಶ್ವರೀ ಸುಬ್ರಹ್ಮಣ್ಯ ದೇವಸ್ಥಾನ ಭಾಗದಿಂದ ಇಳಿದು ಬರುವ ಮಳೆನೀರು ಕೊಟ್ಟಾರ ಚೌಕಿಯ ಜೆ.ಬಿ. ಲೋಬೋ ಪ್ರದೇಶದ ಮೂಲಕ ಹರಿದು ಫೋರ್ತ್‌ ಮೈಲ್‌ ಹೊಳೆಗೆ ಹೋಗಬೇಕಿದೆ. ಆದರೆ ಈ ಭಾಗದಲ್ಲಿ ಕೆಲವು ಕಡೆ ರಾಜಕಾಲುವೆ ಎಲ್ಲಿದೆ ಎಂಬುದೇ ತಿಳಿಯುವುದಿಲ್ಲ.

ಕೆಲವೆಡೆ ರಾಜಕಾಲುವೆ ಮೇಲೆಯೇ ಮಣ್ಣು ತುಂಬಿಸಿ ಕಟ್ಟಡ ಕಟ್ಟಲಾಗಿದೆ. ನೇರವಾಗಿರಬೇಕಿದ್ದ ರಾಜಕಾಲುವೆ ಓರೆಕೋರೆಯಾಗಿದ್ದು, ಮಳೆನೀರು ಸರಿಯಾಗಿ ಹರಿಯುತ್ತಿಲ್ಲ. ಕೂಳೂರು ಫೋರ್ತ್‌ ಮೈಲ್‌ನ ರಾಜಕಾಲುವೆಗಳಲ್ಲಿ ಹೂಳು, ಗಿಡಗಂಟಿ ತುಂಬಿದೆ. ಪೂರ್ವ ಭಾಗದಲ್ಲಿ ಕಾವೂರು, ಮುಲ್ಲಕಾಡು, ಕೂಳೂರು ಪ್ರದೇಶದಿಂದ ಬರುವ ಮಳೆ ನೀರು ಫೋರ್ತ್‌ ಮೈಲ್‌ ಬಳಿ ಒಟ್ಟು ಸೇರುವಲ್ಲಿ ಖಾಸಗಿ ಜಾಗದ ಜತೆಗೆ ಸರಕಾರಿ ಜಾಗದಲ್ಲೂ ಮಣ್ಣು ತುಂಬಿ ಸಮತಟ್ಟುಗೊಳಿಸಲಾಗಿದೆ. ಹೀಗಾಗಿ ರಾಜಕಾಲುವೆ ಕಿರಿದಾಗಿದೆ.

ಇಲ್ಲಿಂದ ಮಳೆ ನೀರು ದೂರದ ಪಡ್ಡೋಡಿ ಅಣೆಕಟ್ಟು ಸಮೀಪ ಫಲ್ಗುಣಿ ನದಿಗೆ ಸೇರುತ್ತದೆ. ಕೊಟ್ಟಾರಚೌಕಿ ಪ್ರದೇಶದಲ್ಲಿ ಈ ಹಿಂದೆ ಇದ್ದ ಖಾಸಗಿ ಗದ್ದೆಗಳ ಜಾಗದಲ್ಲಿ ಕಟ್ಟಡಗಳು ತಲೆ ಎತ್ತಿವೆ. ಮಳೆ ನೀರು ಇಂಗಲು ಅವಕಾಶ ಇಲ್ಲ. ಬಡಾವಣೆ ನಿರ್ಮಿಸುವಾಗ ಮಳೆನೀರು ಹರಿಯಲು ಸೂಕ್ತ ಕ್ರಮ ಅನುಸರಿಸಲಾಗಿಲ್ಲ. ರಾಜಕಾಲುವೆಯಲ್ಲಿ ತ್ಯಾಜ್ಯ ನೀರು ಕಾವೂರು ಮುಲ್ಲಕಾಡಿನ ಎಸ್‌ಟಿಪಿ ಸಂಸ್ಕರಣ ಘಟಕದಿಂದ ಕೆಲವು ಬಾರಿ ತ್ಯಾಜ್ಯ ನೀರನ್ನು ವಿವಿಧ ಕಾರಣಗಳಿಗಾಗಿ ಸಂಸ್ಕರಿಸದೆ ರಾಜಕಾಲುವೆಗೆ ಬಿಡಲಾಗುತ್ತದೆ ಎಂಬ ಆರೋಪ ಹಿಂದಿನಿಂದಲೂ ಇದೆ. ಇಲ್ಲೂ ತೋಡುಗಳಲ್ಲಿ ಗಿಡಗಂಟಿ ಬೆಳೆದಿದೆ. ಕೂಳೂರು ರಾಜಕಾಲುವೆಯಲ್ಲಿ ಹೂಳಿನ ಜತೆಗೆ ಕಳೆ ಬೆಳೆದಿದೆ. ಮಳೆಗಾಲಕ್ಕೆ ಮುನ್ನ ಹೂಳು ತೆಗೆದು ಸ್ವಚ್ಛಗೊಳಿಸುವುದು ಮಾತ್ರ ಪರಿಹಾರ ಎಂಬುದು ಸ್ಥಳೀಯ ನಿವಾಸಿಯೊಬ್ಬರ ಅನಿಸಿಕೆ.

ಆದರೆ ಇದಕ್ಕಾಗಿ ಅಂದಾಜು 5 ಕೋ.ರೂ.ಗಳ ಯೋಜನಾ ಪಟ್ಟಿ ತಯಾರಿಸಲಾಗಿತ್ತಾದರೂ ಇದುವರೆಗೆ ಅನುದಾನ ಬಿಡುಗಡೆಯಾಗಿಲ್ಲ. ಮಾಲೆಮಾರ್‌ನಲ್ಲಿ (ದೇರೆಬೈಲ್‌ ಪೂರ್ವ 23) ಹರಿದು ಬರುವ ನೀರು ಹೆದ್ದಾರಿಯ ಪೂರ್ವಕ್ಕಿರುವ ರಾಜ ಕಾಲುವೆಯಲ್ಲಿ ಹರಿದು ಫೋರ್ತ್ ಮೈಲ್‌ ರಾಜಕಾಲುವೆಯ ಸಂಪರ್ಕ ಪಡೆಯುತ್ತದೆ. ಈ ಕಾಲುವೆ ಹೆಚ್ಚುಕಮ್ಮಿ ಸುಸ್ಥಿತಿಯಲ್ಲಿದ್ದರೂ ಕುಡಿಯುವ ನೀರಿನ ಪೈಪ್‌ಲೈನನ್ನು ಈ ರಾಜಕಾಲುವೆ ಮೂಲಕ ಹಾಕಲಾಗಿದೆ. ಹೀಗಾಗಿ ಹೆಚ್ಚಿನ ದುರಸ್ತಿ, ಹೂಳು ತೆಗೆಯಲು ಸಮಸ್ಯೆಯಾಗಿದೆ.

ಟಾಪ್ ನ್ಯೂಸ್

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.