Rohan Corporation: ಸ್ವಂತ ಮನೆಯ ಕನಸು ನನಸಾಗಿಸಲು “ರೋಹನ್ ಎಸ್ಟೇಟ್’
ನೀರುಮಾರ್ಗದಲ್ಲಿ ರೋಹನ್ ಕಾರ್ಪೊರೇಷನ್ನ ಅತ್ಯಾಧುನಿಕ ಎಸ್ಟೇಟ್
Team Udayavani, Mar 15, 2024, 10:11 AM IST
ಮಂಗಳೂರು: ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ರೋಹನ್ ಕಾರ್ಪೊರೇಷನ್ ನೇತೃತ್ವದಲ್ಲಿ ಆಧುನಿಕ ಜೀವನ ಶೈಲಿಗೆ ಅಗತ್ಯವಾದ ಅತ್ಯಾಧುನಿಕ ಸಕಲ ಸೌಕರ್ಯಗಳೊಂದಿಗೆ “ರೋಹನ್ ಎಸ್ಟೇಟ್-ನೀರುಮಾರ್ಗಹಿಲ್ಸ್’ ರೂಪುಗೊಂಡಿದೆ. ಸ್ವಂತ ಮನೆಯ ನಿರೀಕ್ಷೆ ಇರುವವರಿಗೆ 96 ನಿವೇಶನಗಳ ಸುಂದರ “ರೋಹನ್ ಎಸ್ಟೇಟ್’ ಗ್ರಾಹಕರ ಬುಕ್ಕಿಂಗ್ಗೆ ತೆರೆದುಕೊಂಡಿದೆ.
ಯೋಜನೆಯ ಬಗ್ಗೆ ರೋಹನ್ ಕಾರ್ಪೊರೇಷನ್ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೇರೊ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಗರಕ್ಕೆ ಹತ್ತಿರದಲ್ಲಿರುವ ನೀರುಮಾರ್ಗದ 9.48 ಎಕರೆ ಪ್ರದೇಶದಲ್ಲಿ, ರೋಹನ್ ಎಸ್ಟೇಟ್ ವಸತಿ ಬಡಾವಣೆ ನಿರ್ಮಾಣ ಗೊಳ್ಳುತ್ತಿದೆ. ಸುಂದರವಾಗಿ ಅಭಿವೃದ್ಧಿ ಪಡಿಸಿದ 96 ನಿವೇಶನಗಳು ಅತ್ಯುತ್ತಮ ಅನುಭವ ನೀಡಲಿವೆ. ಅಗಲವಾದ ಕಾಂಕ್ರೀಟ್ ರಸ್ತೆಗಳು, ಸರಾಗವಾಗಿ ಮಳೆ ನೀರಿನ ಹರಿವು ಹಾಗೂ ಮಳೆನೀರು ಕೊçಲಿನ ವ್ಯವಸ್ಥೆಯೊಂದಿಗೆ ಅತ್ಯಾಧುನಿಕ ಸೌಲಭ್ಯಗಳು, ವಾಸ್ತು ಪ್ರಕಾರದ ನಿವೇಶನಗಳು ಲಭ್ಯವಿವೆ. ಕ್ಲಬ್ ಹೌಸ್ ಸಹಿತ ಸಕಲ ಸೌಕರ್ಯಗಳೊಂದಿಗೆ ಅತ್ಯಾಧುನಿಕ ಜಿಮ್, ಸುಸಜ್ಜಿತ ಫುಟ್ಪಾತ್, ಬ್ಯಾಡ್ಮಿಂಟನ್ ಕೋರ್ಟ್, ಆಧುನಿಕ ಈಜುಕೊಳ, ಕೆಫೆ, ಮಿನಿ ಸೂಪರ್ ಮಾರ್ಕೆಟ್, ಮಕ್ಕಳಿಗಾಗಿ ಆಟದ ಮೈದಾನ ಹೀಗೆ ಹಲವು ವೈಶಿಷ್ಟéಗಳು ಇರಲಿವೆ ಎಂದರು.
ರೋಹನ್ ಎಸ್ಟೇಟ್ ನೀರುಮಾರ್ಗ ಹಿಲ್ಸ್ ಕೇವಲ ವಾಸಸ್ಥಳವಾಗಿರದೆ, ಪ್ರಕೃತಿ ಸೌಂದರ್ಯ, ಪ್ರಶಾಂತತೆ, ನೈಸರ್ಗಿಕ ಪರಿಸರದೊಂದಿಗೆ ರೆಸಾರ್ಟ್ ಭಾವವನ್ನು ನೀಡುತ್ತದೆ. ಅತ್ಯಾಕರ್ಷಕ ಪ್ರವೇಶ ದ್ವಾರ, ಸುಸಜ್ಜಿತ ಒಳ ಚರಂಡಿ, ಬೀದಿದೀಪ, ಪ್ರತ್ಯೇಕ ಕುಡಿಯುವ ನೀರಿನ ಸಂಪರ್ಕ ಇಲ್ಲಿಗಿದೆ. ಮನೆ ಅಥವಾ ಐಷಾರಾಮಿ ಬಂಗಲೆ ನಿರ್ಮಿಸಲು ಯೋಚಿಸುವವರಿಗೆ ಕೂಡಲೇ ಆರಂಭಿಸಲು ಇಲ್ಲಿ ಅವಕಾಶವಿದೆ. ವಿಶೇಷ ರಿಯಾಯಿತಿ ಯೋಜನೆಯೂ ಇದೆ. ಸಂಸ್ಥೆಯ ಅನುಭವಿ ವಿನ್ಯಾಸಗಾರರ ತಂಡವೇ ಮನೆಯನ್ನು ವಿನ್ಯಾಸ ಮಾಡಿಕೊಡಲಿದೆ ಎಂದರು.
ಜನರಲ್ ಮ್ಯಾನೆಜರ್ ಸುಮನ, ಮಾರ್ಕೆಟಿಂಗ್ ಮ್ಯಾನೇಜರ್ ಜಾಯೆಲ್ ಕ್ರಾಸ್ತಾ, ಕೋಆರ್ಡಿನೇಟರ್ ಆಲ್ಸ್ಟನ್ ಸಿಕ್ವೇರ, ಮಾರ್ಕೆಟಿಂಗ್ ಹೆಡ್ ಮ್ಯಾಕ್ಸಿಂ ಲೋಬೋ ಪತ್ರಿಕಾಗೊಷ್ಠಿಯಲ್ಲಿದ್ದರು.
ಗುಣಮಟ್ಟದ ವಸತಿ ಸಮುಚ್ಚಯಗಳು, ವಾಣಿಜ್ಯ ಕಟ್ಟಡಗಳು ಹಾಗೂ ಲೇಔಟ್ಗಳ ನಿರ್ಮಾಣಕ್ಕೆ ಹೆಸರಾಗಿರುವ ರೋಹನ್ ಕಾರ್ಪೊರೇಷನ್, ಮಂಗಳೂರು ಮತ್ತು ಸುತ್ತಮುತ್ತಲ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ವ್ಯವಸ್ಥೆಗಳನ್ನು ಕಲ್ಪಿಸಿಕೊಡುತ್ತಿದೆ. ತನ್ನ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗುವ ಎಲ್ಲ ಸಮುಚ್ಚಯಗಳಲ್ಲಿ ರೋಹನ್ ಮೊಂತೇರೊ ಹೊಸ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದು ಇಲ್ಲಿ ಗ್ರಾಹಕರ ಅಭಿಪ್ರಾಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ROHAN CORPORATION, Rohan City, Main Road, Bejai, Mangalore 575004, www.rohancorporation.in ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ; ನಿರ್ವಹಣೆಯಿಲ್ಲದೆ ಸೊರಗಿದ ಮಲ್ಲಿಕಟ್ಟೆ ಪಾರ್ಕ್
ರಂಗ ಸಂಗಾತಿ 16ನೇ ವಾರ್ಷಿಕೋತ್ಸವ; ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್ ಪಡೀಲ್ ಆಯ್ಕೆ
ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!
Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !
Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!