ಕ್ಯಾನ್ಸರ್‌ ಚಿಕಿತ್ಸೆಗಾಗಿ 50 ಸಾವಿರ ರೂ. ನೆರವು


Team Udayavani, May 12, 2018, 1:19 PM IST

12-May-13.jpg

ಕೊಟ್ಟಾರಚೌಕಿ : ಫ್ರೆಂಡ್ಸ್‌ ಬಲ್ಲಾಳ್‌ಬಾಗ್‌ ಬಿರುವೆರ್‌ ಕುಡ್ಲದ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಲ್ಲಾಳ್‌ ಬಾಗ್‌ ಅವರ ನೇತೃತ್ವದಲ್ಲಿ, ಕಾರ್‌ ಸ್ಟ್ರೀಟ್‌ ಸೇವಾಂಜಲಿ ಟ್ರಸ್ಟ್‌ ಇದರ ವತಿಯಿಂದ ಕ್ಯಾನ್ಸರ್‌ ಚಿಕಿತ್ಸೆಗಾಗಿ ಕೊಟ್ಟಾರಚೌಕಿ ನಿವಾಸಿ ಜಯರಾಮ್‌ (53) ಅವರಿಗೆ ಸಹಾಯಾರ್ಥವಾಗಿ 50 ಸಾವಿರ ರೂಪಾಯಿ ಚೆಕ್ಕನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕಲಾವಿದ ನವೀನ್‌ ಡಿ. ಪಡೀಲ್‌ ಮಾತನಾಡಿ, ಫ್ರೆಂಡ್ಸ್‌ ಬಲ್ಲಾಳ್‌ ಬಾಗ್‌ ಬಿರುವೆರ್‌ ಕುಡ್ಲ ಮೂರು ವರ್ಷಗಳಲ್ಲಿ ಮಾಡುತ್ತಿರುವ ಸಾಧನೆ ಅದ್ವಿತೀಯ. ಶಿಕ್ಷಣ, ಆರೋಗ್ಯ, ಅಂಗವಿಕಲರಿಗೆ ನೆರವು ಮತ್ತಿತರ ಸಮಾಜಮುಖಿ ಕೆಲಸಗಳಿಂದ ಗುರುತಿಸಿಕೊಂಡಿದೆ. ಯಾವುದೇ ಜಾತಿ, ಧರ್ಮವಿಲ್ಲದೆ ಈ ಸಂಘಟನೆಯಲ್ಲಿ ಯುವಕರು ತೊಡಗಿಸಿಕೊಂಡಿರುವುದು ಶ್ಲಾಘನೀಯ. ಈ ಕುಟುಂಬಕ್ಕೆ ಮತ್ತಷ್ಟು ಸಹಾಯದ ಆವಶ್ಯಕತೆಯಿದ್ದು ಇತರ ಸಂಸ್ಥೆಗಳು ಮುಂದೆ ಬರಬೇಕಿದೆ ಎಂದರು.

ಬಿರುವೆರ್‌ ಕುಡ್ಲದ ಸದಸ್ಯರಾದ ನಿತೇಶ್‌ ಮಾರ್ನಾಡ್‌ ಅವರು, ಉದಯ ಪೂಜಾರಿ ಬಲ್ಲಾಳ್‌ ಬಾಗ್‌ ನೇತೃತ್ವದಲ್ಲಿ ಅವರ ಸ್ನೇಹಿತರು, ಕಾರ್ಯಕರ್ತರು ತಮ್ಮ ಕೈಲಾದ ಸಹಾಯ ಮಾಡುತ್ತಾ ಹಾಗೂ ಇತರ ದಾನಿಗಳಿಂದ ಆರ್ಥಿಕ ನಿಧಿ ಸಂಗ್ರಹಿಸಿ ನೆರವು ನೀಡುತ್ತಿದ್ದಾರೆ. ಮೂರು ವರ್ಷಗಳಲ್ಲಿ 60 ಲಕ್ಷಕ್ಕೂ ಮಿಕ್ಕಿ ಸಹಾಯಧನ ವಿತರಿಸಿದೆ ಎಂದರು.

ಸೇವಾಂಜಲಿ ಚಾರಿಟೆಬಲ್‌ ಟ್ರಸ್ಟ್‌ನ ಬಿಂದು ಮಾಧವ ಶೆಣೈ, ನರಸಿಂಹ ಎಂ. ಕಾಮತ್‌, ಪಾಂಡುರಂಗ ನಾಯಕ್‌, ಹನುಮಂತ ಕಾಮತ್‌, ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಲ್ಲಾಳ್‌ ಬಾಗ್‌, ಗೌರವಾಧ್ಯಕ್ಷ ಪ್ರಮೋದ್‌ ಬಲ್ಲಾಳ್‌ ಬಾಗ್‌, ಅಧ್ಯಕ್ಷ ರಾಕೇಶ್‌ ಬಲ್ಲಾಳ್‌ ಬಾಗ್‌, ಅಭಿಷೇಕ್‌ ಅಮೀನ್‌, ಮಹೇಶ್‌ ಶೆಟ್ಟಿ ಚಾರ್ವಾಕ ಮುಂಬಯಿ, ಸದಾನಂದ ಪೂಜಾರಿ, ವೆಂಕಟೇಶ ಭಂಡಾರಿ ಮುಂಬಯಿ, ಯಶ್ವಿ‌ನ್‌, ದಿನೇಶ್‌ ಕಿರಣ್‌ ಉರ್ವ, ರೋಶನ್‌ ಪೂಜಾರಿ, ಗೌರವ್‌ ಕದ್ರಿ, ಧನ್‌ ರಾಜ್‌ ಕದ್ರಿ, ತುಕಾರಾಮ್‌ ಶೆಟ್ಟಿ, ರೋಶನ್‌ ಮಿನೇಜಸ್‌, ರಿನಿತ್‌ ರಾಜ್‌, ಲೋಕೇಶ್‌ ಶೆಟ್ಟಿ, ನಿತೇಶ್‌ ರಾಜ್‌, ಸೇಸುಪ್ರಸಾದ್‌, ಲತೇಶ್‌, ರಾಕೇಶ್‌ ಚಿಲಿಂಬಿ, ಗಣೇಶ್‌ ಚಿಲಿಂಬಿ, ರಾಜೇಶ್‌ ಬಲ್ಲಾಳ್‌ ಬಾಗ್‌, ಕಿಶೋರ್‌ ಬಾಬು, ಕಿರಣ್‌ ಶೆಟ್ಟಿ ಕುಂಜತ್ತ ಬೈಲ್‌, ಸದಸ್ಯರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ

PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?

PM Modi: ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಕಣ್ಮರೆಯಾಗಿದ್ದೇಕೆ?

IMD

IMD; ರಾಜ್ಯದ 19 ಜಿಲ್ಲೆಗಳಿಗೆ ಬಿಸಿ ಗಾಳಿ ಮುನ್ಸೂಚನೆ : ಬೆಂಗಳೂರಿನಲ್ಲಿ ಮಳೆ

Bommai BJP

Haveri; ಕಮಲ-ಕೈ ನಡುವೆ ನೇರ ಸ್ಪರ್ಧೆ: ಯಾರ ಕೊರಳಿಗೆ ಏಲಕ್ಕಿ ಹಾರ?

bjp-congress

Bagalkote: ಒಬ್ಬರಿಗೆ ಮೊದಲನೆಯದು, ಇನ್ನೊಬ್ಬರಿಗೆ ‘ಕಡೇ’ ಚುನಾವಣೆ!

vidhana-soudha

ಜೂ.3: ಶಿಕ್ಷಕ, ಪದವೀಧರ ಕ್ಷೇತ್ರಗಳಿಗೆ ಚುನಾವಣೆ : ಯಾವ ಕ್ಷೇತ್ರದಲ್ಲಿ ಯಾರಿದ್ದರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

1-24-friday

Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

19

Fraud: ಬೆಳಪು; ಹಣ ಪಡೆದು ಕಾಯಿಲ್‌ ನೀಡದೆ ವಂಚನೆ; ದೂರು ದಾಖಲು

CBI ಏಜೆನ್ಸಿ ನಮ್ಮ ನಿಯಂತ್ರಣದಲ್ಲಿಲ್ಲ: ಸುಪ್ರೀಂಗೆ ಕೇಂದ್ರ ಮಾಹಿತಿ

CBI ಏಜೆನ್ಸಿ ನಮ್ಮ ನಿಯಂತ್ರಣದಲ್ಲಿಲ್ಲ: ಸುಪ್ರೀಂಗೆ ಕೇಂದ್ರ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.