ಎಸೆಸೆಲ್ಸಿ, ಪಿಯುಸಿ ಮೌಲ್ಯಮಾಪಕರ ಎಡವಟ್ಟು; ಗಳಿಸಿದ್ದು 114 ಅಂಕ; ನೀಡಿದ್ದು 22 ಅಂಕ!
Team Udayavani, Aug 21, 2020, 6:14 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ಮೌಲ್ಯಮಾಪಕರ ಎಡವಟ್ಟಿನಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಇನ್ನೋರ್ವ ವಿದ್ಯಾರ್ಥಿನಿ ಅನುತ್ತೀರ್ಣಳಾಗಿದ್ದಾಳೆ. ಪ್ರಥಮ ಭಾಷೆ ಕನ್ನಡದಲ್ಲಿ 114 ಅಂಕ ಪಡೆದಾಕೆಗೆ ಆಕೆ ಬರೆದ ಒಟ್ಟು ಪುಟ ಸಂಖ್ಯೆ 22ನ್ನು ಅಂಕವನ್ನಾಗಿ ನೀಡಲಾಗಿದೆ!
ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾದಾಗ ಆತೂರು ಬದ್ರಿಯಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಗೆ ಕನ್ನಡದಲ್ಲಿ ಕೇವಲ 22 ಅಂಕ ಬಂದಿತ್ತು. ಹೆಚ್ಚಿನ ಅಂಕ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿನಿಗೆ ಈ ಅಂಕ ನೋಡಿ ಆಘಾತವಾಯಿತು. ಇದರಿಂದ ಆಕೆ ಅನುತ್ತೀರ್ಣಗೊಂಡಿದ್ದಾಳೆ. ಈ ಹಿನ್ನೆಲೆ
ಯಲ್ಲಿ ಉತ್ತರ ಪತ್ರಿಕೆಯ ಛಾಯಾಪ್ರತಿಯನ್ನು ತರಿಸಿಕೊಂಡಾಗ ಆಕೆ ಕನ್ನಡದಲ್ಲಿ 114 ಅಂಕ ಗಳಿಸಿದ್ದಾಳೆ. ಆದರೆ ಒಟ್ಟು 22 ಪುಟಗಳ ಉತ್ತರ ಬರೆದಿದ್ದು, ಪುಟ ಸಂಖ್ಯೆ ಕಾಲಂನಲ್ಲಿ 22 ಎಂದು ನಮೂದಾಗಿತ್ತು. ಇದೇ ಸಂಖ್ಯೆಯನ್ನು ಆಕೆಯ ಅಂಕ ಎಂದು ಪರಿಗಣಿಸಿ ಮೌಲ್ಯ ಮಾಪಕರು ಆಕೆಯನ್ನು ಅನುತ್ತೀರ್ಣಗೊಳಿಸಿದ್ದಾರೆ.
ಅಸ್ಪತ್ರೆಗೆ ದಾಖಲು
ಮೌಲ್ಯಮಾಪಕರ ಎಡವಟ್ಟಿನಿಂದ ನೊಂದು ಮಾನಸಿಕವಾಗಿ ಕುಗ್ಗಿದ್ದ ವಿದ್ಯಾರ್ಥಿನಿಯನ್ನು ಕೆಲವು ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು ಎಂದು ಆಕೆಯ ಶಿಕ್ಷಕರು ತಿಳಿಸಿದ್ದಾರೆ. ಮೌಲ್ಯಮಾಪಕರ ಎಡವಟ್ಟಿನಿಂದ ಮಂಗಳೂರಿನ ಪ್ರೌಢಶಾಲೆಯೊಂದರ ವಿದ್ಯಾರ್ಥಿನಿಗೆ ವಿಜ್ಞಾನದಲ್ಲಿ 36ರ ಬದಲಾಗಿ 17 ಅಂಕ ಬಂದಿರುವ ಬಗ್ಗೆ “ಉದಯವಾಣಿ’ ಆ. 19ರಂದು ವರದಿ ಪ್ರಕಟಿಸಿತ್ತು. ಈ ವಿಚಾರದಲ್ಲಿಯೂ ವಿದ್ಯಾರ್ಥಿ ಬರೆದ ಒಟ್ಟು ಪುಟ ಸಂಖ್ಯೆಯನ್ನೇ ಮೌಲ್ಯಮಾಪಕರು ಅಂಕ ಎಂದು ಪರಿಗಣಿಸಿ ಷರಾ ಎಳೆದು ಬಿಟ್ಟಿದ್ದರು. ಆ ಮೂಲಕ ಉತ್ತೀರ್ಣರಾಗಬೇಕಿದ್ದ ಇಬ್ಬರೂ ವಿದ್ಯಾರ್ಥಿಗಳು ಮೌಲ್ಯಮಾಪಕರ ಬೇಜವಾಬ್ದಾರಿಯಿಂದಾಗಿ ಅನುತ್ತೀರ್ಣಗೊಳ್ಳುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
MUST WATCH
ಹೊಸ ಸೇರ್ಪಡೆ
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…