![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ಸಮಸ್ಯೆ ಕರಾವಳಿಯದ್ದು; ಪರಿಹಾರ ಚೆನ್ನೈಯಲ್ಲಿ!
ಮಂಗಳೂರಿನಲ್ಲಿ "ಎನ್ಸಿಎಸ್ಸಿಎಂ ಕೇಂದ್ರ' ಸ್ಥಾಪನೆಗೆ ಮೀನಮೇಷ
Team Udayavani, Nov 24, 2022, 10:19 AM IST
![4](https://www.udayavani.com/wp-content/uploads/2022/11/4-12-620x372.jpg)
ಮಹಾನಗರ: ರಾಜ್ಯದ ಕರಾವಳಿಯಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಚಟುವಟಿಕೆಗಳಿಗೆ ಸುಲಭದಲ್ಲಿ ಸಿಆರ್ಝಡ್ ಅನುಮತಿ ಪಡೆಯುವ ಉದ್ದೇಶದಿಂದ ಸುಸ್ಥಿರ ಕರಾವಳಿ ನಿರ್ವಹಣ ರಾಷ್ಟ್ರೀಯ ಕೇಂದ್ರವನ್ನು (ಎನ್ಸಿಎಸ್ ಸಿಎಂ) ಮಂಗಳೂರಿನಲ್ಲೇ ಸ್ಥಾಪಿಸುವ ಬಹುಕಾಲದ ಯೋಜನೆ ಆರಂಭಕ್ಕೆ ಸರಕಾರ ಇನ್ನೂ ಮೀನಮೇಷ ಎಣಿಸುತ್ತಿದೆ!
ಹೀಗಾಗಿ ಕರಾವಳಿ ಭಾಗದ ಹಲವು ಯೋಜನೆಗಳು ಸಿಆರ್ಝಡ್ ಅನುಮತಿ ಗಾಗಿ ಚೆನ್ನೈಯನ್ನೇ ಅವ ಲಂಬಿಸಬೇಕಾಗಿದೆ. ತಿಂಗಳುಗಟ್ಟಲೆ ಕಾಯಬೇಕಾಗಿದೆ.
ಕಡಲ ತೀರ ವ್ಯಾಪ್ತಿಯಲ್ಲಿ ಮನೆ ನಿರ್ಮಾಣ ಸಹಿತ ಸಣ್ಣ ಪುಟ್ಟ ನಿರ್ಮಾಣ ಕಾಮಗಾರಿಗೆ ಆಯಾ ಜಿಲ್ಲಾಡಳಿತ ಅನುಮತಿ ನೀಡುತ್ತದೆ. ಅದಕ್ಕೂ ಮಿಗಿಲಾದ ಕಾಮಗಾರಿಗೆ ಸಿಆರ್ಝಡ್ ಬೆಂಗಳೂರು ಕೇಂದ್ರ ಕಚೇರಿಯ ಅನುಮೋದನೆ ಬೇಕಾಗುತ್ತದೆ. ಅದರಲ್ಲಿಯೂ ಸೇತುವೆ ನಿರ್ಮಾಣ, ಕೈಗಾರಿಕೆ ಸ್ಥಾಪನೆ, ಉದ್ಯಮ ಸ್ಥಾಪನೆ ಸಹಿತ ವಿವಿಧ ಸಂದರ್ಭ ಸಿಆರ್ ಝಡ್ ಅನುಮೋದನೆಗೂ ಮುನ್ನ ಚೆನ್ನೈ ಕಚೇರಿಯ ಮ್ಯಾಪ್ ಅಂತಿಮ ಗೊಳಿಸಬೇಕಾಗುತ್ತದೆ. ಇದಕ್ಕೆ ಕೆಲವು ತಿಂಗಳು ಅಗತ್ಯವಿರುವ ಕಾರಣದಿಂದ ಸಂಬಂಧಪಟ್ಟವರು ಕಾಯುವ ಪ್ರಮೇಯವೇ ಅಧಿಕ.
ಹೀಗಾಗಿ ಚೆನ್ನೈ ಕೇಂದ್ರ ವನ್ನು ರಾಜ್ಯದ ಕರಾವಳಿ ಭಾಗಕ್ಕೆ ಅನ್ವಯವಾಗುವಂತೆ ಹೆಚ್ಚುವರಿಯಾಗಿ ತೆರೆಯಲು ಅವಕಾಶ ನೀಡುವಂತೆ ಸರಕಾರವೇ ಒಂದೊಮ್ಮೆ ಹೇಳಿಕೆ ನೀಡಿದ್ದರೂ ಇಲ್ಲಿಯವರೆಗೆ ಇದು ಜಾರಿಗೆ ಬಂದಿಲ್ಲ.
ಕಡತದಲ್ಲೇ ಬಾಕಿ ಸಚಿವರ ಹೇಳಿಕೆ!
ರಾಜ್ಯದ 320 ಕಿ.ಮೀ. ವ್ಯಾಪ್ತಿಯ ಕರಾವಳಿ ವಲಯದ ವಿವಿಧ ನಿರ್ವಹಣ ಯೋಜನೆಗಳಿಗೆ ಅನುಮತಿ ನೀಡುವ ಸುಸ್ಥಿರ ಕರಾವಳಿ ನಿರ್ವಹಣ ರಾಷ್ಟ್ರೀಯ ಕೇಂದ್ರ (ಎನ್ಸಿಎಸ್ಸಿಎಂ) ಅನ್ನು ಸುರತ್ಕಲ್ ಎನ್ಐಟಿಕೆ ಸಹಯೋಗದಲ್ಲಿ ಮಂಗಳೂರಿನಲ್ಲಿ ಆರಂಭಿಸುವ ಬಗ್ಗೆ ಸಚಿವ ಆನಂದ್ ಸಿಂಗ್ ತಿಳಿಸಿದ್ದರು. ಆದರೆ ಸಚಿವರ ಹೇಳಿಕೆ ಕಡತದಲ್ಲಿಯೇ ಬಾಕಿಯಾಗಿದೆ!
ಲಾಭವೇನು?
ಎನ್ಐಟಿಕೆ ಅಥವಾ ಕರ್ನಾಟಕ ಸ್ಟೇಟ್ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್ ಮುಖೇನ ಕರಾವಳಿಯಲ್ಲಿಯೇ ಎನ್ಸಿಎಸ್ಸಿಎಂ ಕೇಂದ್ರ ಸ್ಥಾಪಿಸಲು ಅವಕಾಶವಿದೆ. ಇದು ಜಾರಿಯಾದರೆ, ಕರಾವಳಿ ಭಾಗದಲ್ಲಿ ದೊಡ್ಡ ಯೋಜನೆ ಜಾರಿಗೊಳಿಸುವ ಆವಶ್ಯಕತೆಯಿದ್ದರೆ ಸಿಆರ್ ಝಡ್ ಸರ್ವೇ, ಮಾರ್ಕ್ ಮಾಡುವುದು, ಮ್ಯಾಪ್ ಮಾಡಿಕೊಡಲು ಅಧ್ಯಯನ ತಂಡ ಮಂಗಳೂರಿನಲ್ಲಿಯೇ ಇರಲಿದ್ದಾರೆ. ಈ ಮೂಲಕ ಸುಲಭ, ಕಡಿಮೆ ಅವಧಿಯಲ್ಲಿ ಮ್ಯಾಪ್ ಪಡೆಯಬಹುದು.
“ಕೆಎಸ್ಆರ್ಎಸ್ಎ’ ಅನುಮೋದನೆಗೆ ಒಲವು
ಹೊಸ ಸಿಆರ್ಝಡ್ ನಕ್ಷೆ ಲಭ್ಯವಾದ ಅನಂತರ, ರಾಜ್ಯದಲ್ಲಿರುವ “ಕರ್ನಾಟಕ ಸ್ಟೇಟ್ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್’ನವರಿಗೆ ಕೇಂದ್ರದಿಂದ ಅನುಮೋದನೆ ಪಡೆದು ನಕ್ಷೆಯನ್ನು ಸೆಂಟರ್ ಮುಖೇನವೇ ಜಾರಿಗೆ ಅನ್ವಯಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಈ ಮೂಲಕ ಚೆನ್ನೈ ಅಲೆದಾಟ ತಪ್ಪಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಉನ್ನತ ಮಟ್ಟದ ಅಧಿಕಾರಿಗಳ ತಂಡ ಈ ಬಗ್ಗೆ ಪರಾಮರ್ಶೆ ನಡೆಸುತ್ತಿದೆ. ಇದಕ್ಕೆ ಪ್ರತೀ ಗ್ರಾಮದ ಪ್ರತ್ಯೇಕವಾಗಿ ಜಿಯೋ ರೆಫರಿಂಗ್ ಮಾಡಬೇಕಾಗುತ್ತದೆ.
ಕರಾವಳಿಯಲ್ಲೇ ಆದರೆ ಅನುಕೂಲ: ರಾಜ್ಯದ ಕರಾವಳಿ ಭಾಗದಲ್ಲಿ ಯಾವುದಾದರೂ ಯೋಜನೆ ಜಾರಿಗೊಳಿಸುವುದಾದರೆ ಸಿಆರ್ ಝಡ್ ಸಹಿತ ವಿವಿಧ ಅನುಮತಿ ಪಡೆಯಲು ಚೆನ್ನೈನಲ್ಲಿರುವ ಕೇಂದ್ರ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಹೀಗಾಗಿ ಹಲವು ಯೋಜನೆ ಅನುಷ್ಠಾನ ಸಂದರ್ಭ ಚೆನ್ನೈಗೆ ತೆರಳಬೇಕಾಗಿದೆ. ಇದರ ಬದಲು ಕೇಂದ್ರ ಸರಕಾರದ ವಿಶೇಷ ಅನುಮತಿ ಪಡೆದುಕೊಂಡು ಎನ್ ಐಟಿಕೆ ಅಥವಾ ಕರ್ನಾಟಕ ಸ್ಟೇಟ್ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್ ಮುಖೇನ ಅನುಮೋದನೆ ಪಡೆಯುವ ಕಾರ್ಯ ನಡೆದರೆ ಹೆಚ್ಚು ಅನುಕೂಲವಾಗಲಿದೆ. – ಡಾ| ದಿನೇಶ್ ಕುಮಾರ್ ವೈ.ಕೆ. ಉಪಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು
ದಿನೇಶ್ ಇರಾ
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’](https://www.udayavani.com/wp-content/uploads/2024/07/POLICE-5-12-150x79.jpg)
New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’
![Taranga Ugadi Dhamaka2024; ಓದಿನಿಂದ ಜ್ಞಾನದ ವ್ಯಾಪ್ತಿ ವಿಸ್ತರಣೆ: ಡಾ| ಸಂಧ್ಯಾ ಎಸ್.ಪೈ](https://www.udayavani.com/wp-content/uploads/2024/07/Taranga-Ugadi-150x82.jpg)
Taranga Ugadi Dhamaka2024; ಓದಿನಿಂದ ಜ್ಞಾನದ ವ್ಯಾಪ್ತಿ ವಿಸ್ತರಣೆ: ಡಾ| ಸಂಧ್ಯಾ ಎಸ್.ಪೈ
![Mangaluru ನದಿ ದಡದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ](https://www.udayavani.com/wp-content/uploads/2024/07/man-a-4-150x86.jpg)
Mangaluru ನದಿ ದಡದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
![Mobile, ಗಾಂಜಾ ಪತ್ತೆ ಹಿನ್ನೆಲೆ: ಜಿಲ್ಲಾ ಕಾರಾಗೃಹಕ್ಕೆ ಬಂಧಿಖಾನೆ ಡಿಐಜಿ ಭೇಟಿ](https://www.udayavani.com/wp-content/uploads/2024/07/dg-150x83.jpg)
Mobile, ಗಾಂಜಾ ಪತ್ತೆ ಹಿನ್ನೆಲೆ: ಜಿಲ್ಲಾ ಕಾರಾಗೃಹಕ್ಕೆ ಬಂಧಿಖಾನೆ ಡಿಐಜಿ ಭೇಟಿ
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.