ಥಿಯೇಟರ್ ಮಾಲಕರಿಂದಲೇ ತುಳು ಚಿತ್ರಕ್ಕೆ ಅನ್ಯಾಯ: ಕಾಪಿಕಾಡ್
Team Udayavani, Oct 28, 2017, 12:09 PM IST
ಮಂಗಳೂರು: ಬೊಳ್ಳಿ ಮೂವೀಸ್ ನಿರ್ಮಾಣದ “ಅರೆಮರೆಲರ್’ ಸಿನೆಮಾವನ್ನು ಪ್ರಭಾತ್ ಸಿನೆಮಾ ಮಂದಿರದಿಂದ ಥಿಯೇಟರ್ ಮಾಲಕರು ಎತ್ತಂಗಡಿ ಮಾಡುವ ಮೂಲಕ ತುಳು ಚಿತ್ರಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ನಟ, ನಿರ್ಮಾಪಕ ದೇವದಾಸ್ ಕಾಪಿಕಾಡ್ ದೂರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳು ನಾಟಕ ಮತ್ತು ಚಿತ್ರ ನನ್ನ ಉಸಿರು. ಆದರೆ ಥಿಯೇಟರ್ ಮಾಲಕರಿಂದ, ಪರಭಾಷಾ ಚಿತ್ರಗಳಿಂದ ನಿರಂತರ ಅನ್ಯಾಯವಾಗುತ್ತಿದೆ. ತುಳು ಭಾಷೆ ಮೇಲೆ ಅಭಿಮಾನದಿಂದ “ಅರೆಮರೆಲರ್’ ಚಿತ್ರ ಮಾಡಿದ್ದೇನೆ. ಆದರೆ ಬೇರೆ ಭಾಷೆಯ ಸಿನೆಮಾ ಇದೆ ಎಂದು ಚಿತ್ರ ತೆಗೆಯಲು ಪ್ರಭಾತ್ ಸಿನೆಮಾ ಥಿಯೇಟರ್ ಮಾಲಕರು ಒತ್ತಡ ಹಾಕುತ್ತಿದ್ದಾರೆ. ಉತ್ತಮ ಕಲೆಕ್ಷನ್ ಇರುವ ಸಿನೆಮಾ ತೆಗೆಯಿರಿ ಎಂದು ಥಿಯೇಟರ್ ಮಾಲಕರು ಹೇಳುವುದು ಸರಿಯಲ್ಲ ಎಂದರು.
ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ್ ಮಾತನಾಡಿ, ಸಿನೆಮಾವನ್ನು ತೆಗೆಯುವ ಮೊದಲು ಥಿಯೇಟರ್ ಮಾಲೀಕರು ನೋಟಿಸ್ ನೀಡಬೇಕಿತ್ತು.ಇದ್ಯಾವುದನ್ನು ಮಾಡದೇ ಸಿನಿಮಾವನ್ನು ಎತ್ತಂಗಡಿ ಮಾಡಿದ್ದಾರೆ. ಇದರ ವಿರುದ್ಧ ತುಳು ಚಿತ್ರ ನಿರ್ಮಾಪಕರು ಒಟ್ಟಾಗಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಈ ಸಂದರ್ಭ ಚಿತ್ರ ನಿರ್ಮಾಪಕರಾದ ಶರ್ಮಿಳಾ ಕಾಪಿಕಾಡ್, ಶರತ್ ಕದ್ರಿ ಮುಖೇಶ್ ಹೆಗ್ಡೆ, ಬಾಳ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ