ಸಿಟಿ ಟ್ರಾಫಿಕ್‌ ಬೋರ್ಡ್‌ನಲ್ಲಿ ಹವಾಮಾನ ಮಾಹಿತಿ!

ನಗರದ 14 ಜಂಕ್ಷನ್‌ಗಳಲ್ಲಿರುವ ಸಿಸಿ ಕೆಮರಾ ಪೋಲ್‌ನ ಡಿಜಿಟಲ್‌ ಬೋರ್ಡ್‌

Team Udayavani, Mar 30, 2022, 11:51 AM IST

paint

ಮಹಾನಗರ: ನಗರದಲ್ಲಿ ಸದ್ಯ ಹವಾಮಾನ ಹೇಗಿದೆ, ವಾಯು ಮಾಲಿನ್ಯ ಯಾವ ಮಟ್ಟದಲ್ಲಿದೆ… ಮುಂತಾದ ಅಪ್‌ಡೇಟ್‌ಗಳನ್ನು ಸಾರ್ವಜನಿಕರಿನ್ನು ನಗರದ ಪ್ರಮುಖ ಜಂಕ್ಷನ್‌ಗಳಲ್ಲೇ ಪಡೆಯಬಹುದು! ಈ ನೂತನ ವ್ಯವಸ್ಥೆಯ ಪರಿಚಯಕ್ಕೆ ಸ್ಮಾರ್ಟ್ ಸಿಟಿ ಮುಂದಾಗಿದ್ದು, ನಗರದ 14 ಜಂಕ್ಷನ್‌ ಗಳಲ್ಲಿರುವ ಸಿಸಿ ಕೆಮರಾ ಪೋಲ್‌ನ ಡಿಜಿಟಲ್‌ ಬೋರ್ಡ್‌ನಲ್ಲಿ ಈ ಮಾಹಿತಿ ಬಿತ್ತರಿಸಲು ತೀರ್ಮಾನಿಸಲಾಗಿದೆ. ಜನರಿಗೆ ಸಕಾಲದ ಮಾಹಿತಿ ನೀಡುವ ಉದ್ದೇಶದಿಂದ ಈ ಸೇವೆ ಆರಂಭಿಸಲಾಗಿದ್ದು, ಸಿಟಿಯ ಮಂದಿ ಇದರ ಮಾಹಿತಿ ಪಡೆಯುತ್ತಿದ್ದಾರೆ. ಈಗಿನ, ನಗರದಲ್ಲಿ ವಾಯು ಮಾಲಿನ್ಯ ಎಷ್ಟು ಪ್ರಮಾಣ ದಲ್ಲಿದೆ, ಗರಿಷ್ಠ ಉಷ್ಣಾಂಶ, ಕನಿಷ್ಠ ಉಷ್ಣಾಂಶ ಎಷ್ಟಿದೆ ? ಎಂಬ ಮಾಹಿತಿ ಡಿಜಿಟಲ್‌ ಡಿಸ್‌ಪ್ಲೇಯಲ್ಲಿ ಲಭ್ಯವಾಗುತ್ತಿದೆ. ಸುಮಾರು 3 ಅಡಿ ಅಗಲ, 4 ಅಡಿ ಉದ್ದದ ಡಿಸ್‌ಪ್ಲೇಯನ್ನು ಇದು ಹೊಂದಿದೆ. ಈ ಮಾಹಿತಿ ಪಡೆಯ ಲೆಂದು ನಗರದ ಐದು ಕಡೆಗಳಲ್ಲಿ ವಾಯುಗುಣಮಟ್ಟ ಮಾಪನ ಟವರ್‌ ಅಳವಡಿಸಲಾಗಿದೆ. ಇದ ರಿಂದ ಮಾಹಿತಿ ಲಭ್ಯವಾಗುತ್ತಿದ್ದು, ಮತ್ತಷ್ಟು ಮಾಹಿತಿಯನ್ನು ಪೊಲೀಸ್‌ ಇಲಾಖೆಯಿಂದ ಪಡೆಯಲಾಗುತ್ತಿದೆ.

ಪೊಲೀಸ್‌ ಇಲಾಖೆಯಿಂದ ವಿಎಂಎಸ್‌

ಸ್ಮಾರ್ಟ್‌ ಟೆಕ್ನಾಲಜಿ ಆಧಾರದಲ್ಲಿ ನಿಭಾಯಿಸುವ ನಿಟ್ಟಿನಲ್ಲಿ ವಾಹನ ಚಾಲಕರಿಗೆ ದಿಕ್ಸೂಚಿಯಾಗಬಲ್ಲ ವೇರಿಯೆಬಲ್‌ ಮೆಸೇಜ್‌ ಸೈನೇಜ್‌ (ವಿ.ಎಂ. ಎಸ್‌.) ಎಂಬ ನೂತನ ವ್ಯವಸ್ಥೆಯನ್ನು ಪೊಲೀಸ್‌ ಇಲಾಖೆಯೂ ಸದ್ಯ ಅನುಷ್ಠಾನಗೊಳಿಸಲಾಗಿದೆ. ನಗರದ ನಂತೂರು, ಕೆಪಿಟಿ ಮತ್ತು ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಡಿಜಿಟಲ್‌ ಬೋರ್ಡ್‌ ಅಳವಡಿಸಲಾಗಿದೆ. ಸುಮಾರು 40ರಿಂದ 50 ಅಡಿ ಎತ್ತರದಲ್ಲಿ 4.7 ಮೀಟರ್‌ ಉದ್ದ ಮತ್ತು 2 ಮೀಟರ್‌ ಅಗಲದ ಡಿಜಿಟಲ್‌ ಸೂಚನ ಫಲಕ ಹಾಕಲಾಗಿದೆ. ವಾಹನ ಚಾಲಕರಿಗೆ ಈ ಸೂಚನ ಫಲಕವು ಅವರು ಸಾಗುತ್ತಿರುವ ರಸ್ತೆ, ಪ್ರಮುಖ ಜಂಕ್ಷನ್‌ ಗಳಿಗಿರುವ ದೂರವನ್ನು ತಿಳಿಸುತ್ತದೆ. ಯಾವ ಜಂಕ್ಷನ್‌ ಅಥವಾ ರಸ್ತೆಯಲ್ಲಿ ಸಂಚಾರ ದಟ್ಟಣೆಯಿದೆ, ಅಪಘಾತಗಳು ಎಲ್ಲಾದರೂ ಸಂಭವಿಸಿಯೇ, ಬಂದೋಬಸ್ತು ವ್ಯವಸ್ಥೆ, ಯಾವ ರಸ್ತೆಯಲ್ಲಿ ವಿಐಪಿಗಳ ಆಗಮನಕ್ಕಾಗಿ ಬ್ಲಾಕ್‌ ಮಾಡಲಾಗಿದೆ. ಇದಕ್ಕೆ ಯಾವ ಪರ್ಯಾಯ ರಸ್ತೆಯನ್ನು ಬಳಕೆ ಮಾಡಲು ಅನುಮತಿಸಲಾಗಿದೆ ಎಂಬ ಮಾಹಿತಿಯನ್ನೂ ಈ ಡಿಜಿಟಲ್‌ ಸೂಚನ ಫಲಕ ನೀಡುತ್ತಿದೆ.

ತುರ್ತು ಸಂದರ್ಭಕ್ಕೆಂದು ಪ್ಯಾನಿಕ್‌ ಬಟನ್‌

ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಉಪಯೋಗಕ್ಕೆಂದು ಸ್ಮಾರ್ಟ್‌ ಪೋಲ್‌ನಲ್ಲಿ ಪ್ಯಾನಿಕ್‌ ಬಟನ್‌ ಅನ್ನು ಅಳವಡಿಸಲಾಗಿದೆ. ಅಪಘಾತ ಸಹಿತ ಯಾವುದೇ ತುರ್ತು ಸಂದರ್ಭದಲ್ಲಿ ಈ ಬಟನ್‌ ಒತ್ತಬಹುದು. ಆಗ ಆ ಮಾಹಿತಿ ಲಾಲ್‌ಬಾಗ್‌ನ ಪಾಲಿಕೆ ಕಟ್ಟಡದಲ್ಲಿರುವ ಸ್ಮಾರ್ಟ್‌ಸಿಟಿ ಕಮಾಂಡ್‌ ಕಂಟ್ರೋಲ್‌ ಸೆಂಟರ್‌ ರವಾನೆಯಾಗುತ್ತದೆ. ಆಗ ಅಧಿಕಾರಿಗಳು ಇದೇ ಪೋಲ್‌ನಲ್ಲಿರುವ ಮೈಕ್‌ ಮುಖೇನ ಸಂಭಾಷಣೆ ನಡೆಸುತ್ತಾರೆ. ಜತೆಗೆ ಸೈರನ್‌ ವ್ಯವಸ್ಥೆಯನ್ನೂ ಈ ಪೋಲ್‌ ಹೊಂದಿದೆ.

ಎಲ್ಲೆಲ್ಲಿದೆ  ಸ್ಮಾರ್ಟ್‌ ಪೋಲ್‌?

ಮಂಗಳೂರು 14 ಕಡೆಗಳಲ್ಲಿ ಅತ್ಯುನ್ನತ ಗುಣಮಟ್ಟದ ಸಿಸಿ ಕೆಮರಾಗಳನ್ನು ಅಳವಡಿಸಲಾಗಿದೆ. ಬೆಂದೂರ್‌, ಬಂಟ್ಸ್‌ಹಾಸ್ಟೆಲ್‌, ಹ್ಯಾಮಿಲ್ಟನ್‌ ವೃತ್ತ, ಹಂಪನಕಟ್ಟೆ, ಕಾವೂರು, ಸರ್ಕೀಟ್ ಹೌಸ್‌, ಲೇಡಿಹಿಲ್‌, ಲಾಲ್‌ಬಾಗ್‌, ಮಲ್ಲಿಕಟ್ಟೆ, ಪದವಿನಂಗಡಿ, ಪಡೀಲ್‌, ಪಂಪ್‌ವೆಲ್‌, ಪಿವಿಎಸ್‌ ಜಂಕ್ಷನ್‌, ರಾವ್‌ ಆ್ಯಂಡ್‌ರಾವ್‌ ವೃತ್ತಗಳಲ್ಲಿ ಕೆಮರಾ ಅಳವಡಿಸಲಾಗಿದೆ.

ಸಾರ್ವಜನಿಕರಿಗೆ ಮಾಹಿತಿ

ನಗರದ 14 ಕಡೆಗಳಲ್ಲಿ ಸ್ಮಾರ್ಟ್‌ ಸಿಸಿ ಕೆಮರಾ ಅಳವಡಿಸಲಾಗಿದ್ದು, ಈ ಪೋಲ್‌ ನಲ್ಲಿನ ಡಿಸ್‌ಪ್ಲೇಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಮಂಗಳೂರಿನ ಹವಾಮಾನ, ಟ್ರಾಫಿಕ್‌, ವಾಯುಮಾಲಿನ್ಯದ ಮಾಹಿತಿಯನ್ನು ನೀಡಲಾಗುತ್ತಿದೆ. -ಅರುಣ್‌ ಪ್ರಭ, ಸ್ಮಾರ್ಟ್‌ಸಿಟಿ ಜನರಲ್‌ ಮ್ಯಾನೇಜರ್

 

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.