12 ಗ್ರಾ.ಪಂ.ಗಳಲ್ಲಿ ಶೇ.100ರಷ್ಟು ತೆರಿಗೆ ಸಂಗ್ರಹ
ಪುತ್ತೂರು-ಸುಳ್ಯ-ಕಡಬ: ಸರಾಸರಿ ಶೇ. 80ರಷ್ಟು ಸಾಧನೆ
Team Udayavani, Apr 7, 2022, 9:49 AM IST
ಪುತ್ತೂರು: 2021-22ನೇ ಆರ್ಥಿಕ ವರ್ಷಾಂತ್ಯಕ್ಕೆ ಗ್ರಾ.ಪಂ.ಗಳು ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿ ಪುತ್ತೂರಿನಲ್ಲಿ ಶೇ. 83.10, ಸುಳ್ಯದಲ್ಲಿ ಶೇ. 86, ಕಡಬದಲ್ಲಿ ಶೇ. 82 ಪ್ರಗತಿ ದಾಖಲಾಗಿದೆ. ಮೂರು ತಾಲೂಕುಗಳ ಸುಮಾರು 12 ಗ್ರಾ.ಪಂ.ಗಳು ಶೇ. 100ರಷ್ಟು ತೆರಿಗೆ ಸಂಗ್ರಹಿಸಿವೆ.
ಎ. 1ರಿಂದ ಮಾರ್ಚ್ 31ರ ಆರ್ಥಿಕ ವರ್ಷಾಂತ್ಯದಲ್ಲಿ ತೆರಿಗೆ ವಸೂಲಿ ಮಾಡಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಗ್ರಾ.ಪಂ.ಗಳು ನಿರಾಸಕ್ತಿ ತೋರುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವಾಗಲೇ ಪುತ್ತೂರು, ಕಡಬ ಸುಳ್ಯ ತಾಲೂಕಿನ ಹೆಚ್ಚಿನ ಗ್ರಾ.ಪಂ.ಗಳು ತೆರಿಗೆ ಸಂಗ್ರಹದಲ್ಲಿ ಗಣನೀಯ ಸಾಧನೆ ತೋರಿವೆ.
ಏನಿದು ತೆರಿಗೆ ಸಂಗ್ರಹ?
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ರಾಜ್ ಕಾಯ್ದೆ 1993ರ ಅನ್ವಯ ಗ್ರಾ.ಪಂ. ಗಳು ವ್ಯಾಪ್ತಿಯಲ್ಲಿ ಬರುವ ಕೃಷಿ ಯೇತರ ಆಸ್ತಿಗಳ ಮೇಲೆ ತೆರಿಗೆ ವಿಧಿಸಲು ಅವಕಾಶ ಕಲ್ಪಿ ಸಲಾಗಿದೆ. ಗ್ರಾ.ಪಂ.ಗಳು ಸ್ವಂತ ಸಂಪ ನ್ಮೂಲಗಳನ್ನು ಕ್ರೋಡೀಕರಿಸಿ ಸ್ವಾವಲಂಬಿಗಳಾಗ ಬೇಕು ಎಂಬುದು ಇದರ ಉದ್ದೇಶ. ಸ್ವಂತ ನಿಧಿ ಹೆಚ್ಚಾದಂತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಹಕಾರಿ ಆಗುತ್ತದೆ.
ತೆರಿಗೆ ಪರಿಷ್ಕರಣೆ ಕುಸಿತ
ತೆರಿಗೆ ಸಂಗ್ರಹಣೆಗೆ ವಿಶೇಷ ಒತ್ತು ನೀಡುವುದಕ್ಕಾಗಿ ಗ್ರಾ.ಪಂ.ಗಳಿಗೆ ಅಧಿಕಾರ ನೀಡಲಾಗಿತ್ತು. ಆದರೆ ಬಹುತೇಕ ಗ್ರಾ.ಪಂ. ಗಳು ಈ ಅಧಿಕಾರವನ್ನೂ ಬಳಸಿಕೊಂಡಿಲ್ಲ ಎಂಬ ಆರೋಪ ಹಲವು ವರ್ಷಗಳಿಂದ ಕೇಳಿ ಬಂದಿದೆ. 2015ನೇ ಸಾಲಿನಲ್ಲಿ ತಿದ್ದುಪಡಿ ತಂದಿದ್ದರೂ ಹೆಚ್ಚಿನ ಗ್ರಾ.ಪಂ. ಗಳು ಕೂಡ ತೆರಿಗೆ ಪರಿಷ್ಕರಣೆ ಮಾಡಿಲ್ಲ. ಹಳೆ ದರವನ್ನೇ ವಸೂಲಿ ಮಾಡುತ್ತಿರುವುದರಿಂದ ಸಂಗ್ರಹ ಕಡಿಮೆ, ವೆಚ್ಚ ಹೆಚ್ಚಾಗುತ್ತಿದೆ.
ಗುರಿ ಹಾಗೂ ವಸೂಲಿ
ಪುತ್ತೂರು ತಾಲೂಕಿನ 33 ಗ್ರಾ.ಪಂ.ಗಳಿಗೆ 217.94 ಲಕ್ಷ ರೂ. ತೆರಿಗೆ ಸಂಗ್ರಹದ ಗುರಿ ನಿಗದಿ ಪಡಿಸಲಾಗಿತ್ತು. ಇದರಲ್ಲಿ 179.21 ಲಕ್ಷ ರೂ. ವಸೂಲಿಯಾಗಿದೆ. 38.72 ಲಕ್ಷ ರೂ. ಹೊರ ಬಾಕಿ ಇದೆ. ಸುಳ್ಯ ತಾಲೂಕಿನ 25 ಗ್ರಾ.ಪಂ.ಗಳಿಗೆ ನೀಡಿದ 261.48 ಲಕ್ಷ ರೂ. ಗುರಿಯಲ್ಲಿ 224.77 ಲಕ್ಷ ರೂ. ವಸೂಲಿಯಾಗಿದೆ. 36.70 ಲಕ್ಷ ರೂ. ಹೊರ ಬಾಕಿ ಇದೆ. ಕಡಬ ತಾಲೂಕಿನ 18 ಗ್ರಾ.ಪಂ. ಗಳಿಗೆ 239 ಲಕ್ಷ ರೂ. ಗುರಿ ಇದ್ದು, 194.86 ಲಕ್ಷ ರೂ.ಸಂಗ್ರಹವಾಗಿದೆ. 45 ಲಕ್ಷ ರೂ. ಹೊರ ಬಾಕಿ ಇದೆ.
ಆರ್ಥಿಕ ಸ್ವಾವಲಂಬನೆಗೆ ಅನುಕೂಲ
ತೆರಿಗೆ ಸಂಗ್ರಹದಲ್ಲಿ ಹೆಚ್ಚಿನ ಗ್ರಾ.ಪಂ.ಗಳು ಉತ್ತಮ ಸಾಧನೆ ತೋರಿವೆ. ಆರ್ಥಿಕ ವರ್ಷಾಂತ್ಯದಲ್ಲಿ ತೆರಿಗೆ ವಸೂಲಿ ಮಾಡಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಗ್ರಾ.ಪಂ.ಗಳು ತೆರಿಗೆ ವಸೂಲಾತಿಗೆ ಹೆಚ್ಚಿನ ಗಮನ ಹರಿಸಲು ನಿರ್ದೇಶಿಸಲಾಗಿತ್ತು. -ನವೀನ್ ಭಂಡಾರಿ, ಇಒ ಪುತ್ತೂರು, ಕಡಬ ತಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ