ಬಿ.ಸಿ.ರೋಡ್-ಶಿರಾಡಿ ರಾಷ್ಟ್ರೀಯ ಹೆದ್ದಾರಿ ಕಾಣಿಸಿಕೊಂಡ ಹೊಂಡ; ಜಲ್ಲಿಹುಡಿಯ ತೇಪೆ
Team Udayavani, Jun 24, 2021, 4:00 AM IST
ಬಂಟ್ವಾಳ: ಕಳೆದ ವರ್ಷ ಹೊಂಡ ಗುಂಡಿಗಳಿಂದ ತುಂಬಿ ಪೂರ್ತಿ ಹದಗೆಟ್ಟು ಸಂಚಾರ ದುಸ್ತರವಾಗಿದ್ದ ಬಿ.ಸಿ.ರೋಡ್-ಶಿರಾಡಿ ರಾಷ್ಟ್ರೀಯ ಹೆದ್ದಾರಿಗೆ ಕೆಲವು ತಿಂಗಳ ಹಿಂದೆ ಪೂರ್ತಿ ಡಾಮಾರು ಕಾಮಗಾರಿ ನಡೆದಿತ್ತು. ಆದರೆ ಮಳೆ ಆರಂಭ ವಾಗಿ ಕೆಲವೇ ದಿನಗಳಲ್ಲಿ ಅಲ್ಲಲ್ಲಿ ಹೊಂಡಗಳು ಕಾಣಿಸಿಕೊಂಡು ಮತ್ತೆ ಹಿಂದಿನ ಸ್ಥಿತಿಗೆ ಬರುವ ಸೂಚನೆ ನೀಡುತ್ತಿದೆ.
ಹೆದ್ದಾರಿ ಹೆಚ್ಚು ಹದಗೆಡುವ ಕಲ್ಲಡ್ಕ ಬಳಿಯ ನರಹರಿ ಪರ್ವತ ತಿರುವು ಸೇರಿದಂತೆ ಬಹುತೇಕ ಕಡೆಗಳಲ್ಲಿ ಹೊಂಡಗಳು ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಮಳೆಗೆ ಹೊಂಡಗಳ ಗಾತ್ರ ಹಿರಿದಾಗುವ ಸಾಧ್ಯತೆ ಹೆಚ್ಚಿದೆ. ಹೆದ್ದಾರಿ ಹೊಸದಾಗಿ ಡಾಮಾರು ನಡೆದಂತೆ ಹೊಳೆಯುತ್ತಿದ್ದು, ವೇಗವಾಗಿ ಬಂದರೆ ಅಪಾಯದ ಸಾಧ್ಯತೆ ಹೆಚ್ಚಿದೆ.
ಹೆದ್ದಾರಿ ಅವ್ಯವಸ್ಥೆಯ ವಿರುದ್ಧ ಹಲವು ಹೋರಾ ಟಗಳು ನಡೆದು, ಬಳಿಕ ಡಾಮರು ಕಾಮಗಾರಿ ನಡೆದಿತ್ತು. ಡಾಮರು ಕಾಮಗಾರಿ ನಡೆದ ಬಳಿಕ ಹೆದ್ದಾರಿ ಸುಸಜ್ಜಿತಗೊಂಡು ವಾಹನಗಳ ಓಡಾಟದ ವೇಗವೂ ಹೆಚ್ಚಿತ್ತು. ಆದರೆ ಇದೀಗ ಹೊಂಡಗಳು ಕಾಣಿಸಿಕೊಳ್ಳುವ ಮುನ್ಸೂಚನೆ ಲಭಿಸಿದೆ.
ತೇಪೆ ಉಳಿಯುವ ಸಾಧ್ಯಯೂ ಕಡಿಮೆ :
ಈಗ ಹೊಂಡಕ್ಕೆ ಡಾಮಾರು ಹಾಕಿದರೆ ಬಿಸಿಲು ಬೀಳದೇ ಹೋದಲ್ಲಿ ತೇಪೆ ಉಳಿಯುವ ಸಾಧ್ಯಯೂ ಕಡಿಮೆ ಇದೆ.
ಡಸ್ಟ್ ಹಾಕಿ ಗುಂಡಿ ಮುಚ್ಚುವ ಕಾರ್ಯ : ಪ್ರಸ್ತುತ ಕಾಣಿಸಿಕೊಂಡಿರುವ ಗುಂಡಿ ಯನ್ನು ಇಲಾಖೆಯು ಜಲ್ಲಿ ಹುಡಿ (ಡಸ್ಟ್) ಹಾಕಿ ಮುಚ್ಚುವ ಕಾರ್ಯ ನಡೆಸಿದ್ದು, ಬುಧವಾರ ಉಪ್ಪಿನಂಗಡಿ ಭಾಗದಿಂದ ಕಲ್ಲಡ್ಕ-ಮೆಲ್ಕಾರ್ವರೆಗೆ ಹೊಂಡಗಳಿಗೆ ಜಲ್ಲಿ ಹುಡಿ ಹಾಕಲಾಗಿದೆ. ಈ ಹಿಂದೆಯೂ ಅನೇಕ ಬಾರಿ ಜಲ್ಲಿ ಹುಡಿ ಹಾಕಿ ಹೊಂಡ ಮುಚ್ಚುವ ಪ್ರಯತ್ನ ಮಾಡಲಾಗಿತ್ತು. ಆದರೆ ಅದು ಒಂದೆರಡು ಮಳೆಯಲ್ಲೇ ಪೂರ್ತಿ ಎದ್ದು ಹೋಗುತ್ತದೆ.
ಈಗ ಹೊಂಡಕ್ಕೆ ಡಾಮಾರು ಹಾಕಿದರೆ ಬಿಸಿಲು ಬೀಳದೇ ಹೋದಲ್ಲಿ ತೇಪೆ ಉಳಿಯುವ ಸಾಧ್ಯಯೂ ಕಡಿಮೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ