ಪ್ರವಾಹ ಪ್ರದೇಶದ ಅಡಿಕೆ ತೋಟಗಳು ವಿನಾಶದತ್ತ
Team Udayavani, May 22, 2020, 5:23 AM IST
ಮುಂಡಾಜೆ: ಕಳೆದ ಮಳೆಗಾಲದಲ್ಲಿ ಭೀಕರ ಪ್ರವಾಹದೊಂದಿಗೆ ಅಡಿಕೆ ತೋಟಗಳಿಗೆ ಬಂದು ಬಿದ್ದಿರುವ ಮರಳು ಅಡಿಕೆ ಮರಗಳ ವಿನಾಶಕ್ಕೆ ಕಾರಣವಾಗಿದೆ. ತೋಟವಿಡೀ ಮರಳುಮಯ ವಾಗಿರುವ ನಡುವೆ ಮೃತ್ಯುಂಜಯ ನದಿಯ ಪ್ರವಾಹ ಬೆಳ್ತಂಗಡಿ ತಾ| ನ ಕಲ್ಮಂಜ ಗ್ರಾಮದ ಕುಡೆಂಚಿ ಮತ್ತು ಮೂಲಾರಿನಲ್ಲಿ ಕೆಲವು ಮನೆಗಳು, ಪಂಪ್ಶೆಡ್ ಇತ್ಯಾದಿ ಕೂಡ ಪ್ರವಾಹದ ಹೊಡೆತಕ್ಕೆ ಸಿಲುಕಿದವು. ಈ ಪ್ರವಾಹದಲ್ಲಿ ಅಡಿಕೆ ತೋಟಗಳಿಗೆ ಸುಮಾರು 4ರಿಂದ 5 ಅಡಿ ಮರಳು ಎಕ್ರೆಗಟ್ಟಲೆ ಪ್ರದೇಶಕ್ಕೆ ಬಂದು ಬಿದ್ದಿತ್ತು.ಕೃಷಿಕರು ಲಕ್ಷಾಂತರ ರೂ. ಖರ್ಚು ಮಾಡಿ ತೋಟದ ಮರಳು ತೆಗೆದಿದ್ದರು. ಅದು ನೀರಿನ ಮೇಲೆ ಹೋಮ ಮಾಡಿದಂತಾಗಿದೆ.
ಅಡಿಕೆ ಮರಗಳಿಗೆ ವಿನಾಶ
ಮರಳಿನ ಪ್ರಕೋಪಕ್ಕೆ ಪ್ರದೇಶದ ಸುಮಾರು 1,650 ಮರ ಗಳು ತುತ್ತಾಗಿ ಒಣಗಿ ಸಾಯುತ್ತಿವೆ. ಇಲ್ಲಿನ ಜನರಿಗೆ ಮುಂದಿನ ದಿನಗಳ ಕುರಿತ ಯೋಚನೆ ಆರಂಭವಾಗಿದೆ. ಇನ್ನು ಕೆಲವರ ಅಡಿಕೆ ತೋಟಗಳಲ್ಲಿ ಬಿದ್ದಿದ್ದ ಮರಳನ್ನು ತೆಗೆಸಿ ದ್ದರೂ ಕೂಡ 2ರಿಂದ 5 ವರ್ಷದ ಅಡಿಕೆ ಸಸಿಗಳು ನಾಶವಾಗಿ ವೆ. ಸರಕಾರದಿಂದ ಶೇ. 5 ರಿಂದ 10ರಷ್ಟು ಮಾತ್ರ ಪ್ರವಾಹ ಪರಿಹಾರ ಬಂದಿದ್ದು ಈ ಮೊತ್ತ ಸಾಲುವುದಿಲ್ಲ. ಅಡಿಕೆ ಕೃಷಿಗೆ ಬ್ಯಾಂಕ್ಗಳಲ್ಲಿ ಸಾಲಗಳಿದ್ದು ಬಿದ್ದಿರುವ ಮರಳಿನಿಂದಾಗಿ ಅಡಿಕೆ ತೋಟಗಳು ನಾಶವಾಗುತ್ತಿರುವುದರಿಂದ ತೀವ್ರ ಸಂಕಷ್ಟ ಎದುರಾಗಿದೆ.
ವರದಿ ನೀಡಲಾಗುವುದು
ಅಡಿಕೆ ಮರಗಳು ಸಾಯು ತ್ತಿರುವ ಬಗ್ಗೆ ಗ್ರಾಮ ಲೆಕ್ಕಿಗರ ಗಮನಕ್ಕೆ ತಂದು, ಸ್ಥಳಗಳನ್ನು ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು.
- ಸಫಾನಾ, ಪಿಡಿಒ, ಕಲ್ಮಂಜ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ