ಅಂಗವಿಕಲರ ವಾಹನಕ್ಕೂ ಆದಾಯ ಮಿತಿ ಬರೆ
2 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಇದ್ದವರಿಗಿಲ್ಲ ಸೌಲಭ್ಯ
Team Udayavani, Jul 21, 2022, 6:25 AM IST
ಪುತ್ತೂರು: ಅಂಗವಿಕಲರ ಕಲ್ಯಾಣ ಇಲಾಖೆಯು ಅಂಗವಿಕಲರಿಗೆ ಉಚಿತವಾಗಿ ದ್ವಿಚಕ್ರ ವಾಹನ ನೀಡುತ್ತಿದ್ದರೂ ಆದಾಯ ಮಿತಿಯ ಕಾರಣದಿಂದ ಹಲವು ಅರ್ಹರಿಗೆ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ.
ಶೇ. 75ಕ್ಕೂ ಅಧಿಕ ಅಂಗವಿಕಲರಿಗೆ ಸ್ವಸಾಮರ್ಥ್ಯದಿಂದ ವಾಹನ ಚಲಾಯಿಸಲು ಸಾಧ್ಯವಿಲ್ಲದ ಕಾರಣ ದ್ವಿಚಕ್ರ ವಾಹನ ನೀಡಲಾಗುತ್ತದೆ. ಪ್ರತೀ ವರ್ಷ ಇಲಾಖೆ ರಾಜ್ಯಮಟ್ಟದಲ್ಲಿ ಇದಕ್ಕಾಗಿ ಗುರಿ ನಿಗದಿಪಡಿಸಿ ಅದನ್ನು ಜಿಲ್ಲಾವಾರು ಹಂಚಿಕೆ ಮಾಡುತ್ತದೆ.
ವಾರ್ಷಿಕ 2 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಇರುವವರಿಗೆ ಈ ಸೌಲಭ್ಯ ಸಿಗುತ್ತಿಲ್ಲ. ಪ್ರತ್ಯೇಕ 2 ಟಯರ್ ಅಳ ವಡಿಸಿದ ದ್ವಿಚಕ್ರ ವಾಹನ ಖರೀದಿಸ ಬೇಕಾದರೆ 1 ಲಕ್ಷ ರೂ.ಗಳಿಗೂ ಅಧಿಕ ಹಣ ಬೇಕಾಗುತ್ತದೆ. ಅಂಗವಿಕಲರಿಗೆ ಸಾಲ ನೀಡಲು ಬ್ಯಾಂಕ್ಗಳು ಕೂಡ ಮೀನಮೇಷ ಎಣಿಸುತ್ತವೆ. ಹೀಗಿರುವಾಗ ಸರಕಾರ ಇನ್ನೂ ಕೂಡ 2 ಲಕ್ಷ ರೂ. ಮಿತಿ ಇಟ್ಟುಕೊಂಡಿರುವುದು ಸರಿಯಲ್ಲ ಎನ್ನುತ್ತಾರೆ ಅಂಗವಿಕಲರು.
1,200 ವಾಹನ
2021-22ನೇ ಸಾಲಿನಲ್ಲಿ ರಾಜ್ಯದಲ್ಲಿ 1,200 ಅಂಗವಿಕಲರಿಗೆ ಉಚಿತ ದ್ವಿಚಕ್ರ ವಾಹನ ಮಂಜೂರು ಮಾಡಲಾಗಿತ್ತು. ಪುತ್ತೂರು-ಕಡಬಕ್ಕೆ 10, ಬೆಳ್ತಂಗಡಿ-4, ಸುಳ್ಯ-6, ಬಂಟ್ವಾಳ-6, ಉಳ್ಳಾಲ – 6, ಮಂಗಳೂರು ನಗರ- 5, ಮಂಗಳೂರು ಉತ್ತರ- 4, ಮೂಡು ಬಿದಿರೆ-5 ಮಂಜೂರಾಗಿದೆ. ದ.ಕ. ಜಿಲ್ಲೆಯಲ್ಲಿ 32 ವಾಹನಗಳ ಗುರಿ ನೀಡ ಲಾಗಿದ್ದು, ಗುರಿ ಮೀರಿ ಸಾಧನೆ ಮಾಡಿ 50 ವಾಹನ ವಿತರಿಸಲಾಗುತ್ತಿದೆ. 2022-23ನೇ ಸಾಲಿನಲ್ಲಿ ವಾಹನ ವಿತರಣೆಗೆ ಸಂಬಂಧಿಸಿ ಇಲಾಖೆಯಿಂದ ಇನ್ನೂ ಗುರಿ ನಿಗದಿ ಮಾಡಿ ಆದೇಶ ಬಂದಿಲ್ಲ.
1 ವಾಹನಕ್ಕೆ 92 ಸಾವಿರ ರೂ.
ದ.ಕ. ಜಿಲ್ಲೆಗೆ ಕಳೆದ ಆರ್ಥಿಕ ಸಾಲಿನಲ್ಲಿ ಮಂಜೂರಾದ 50 ದ್ವಿಚಕ್ರ ವಾಹನಗಳು ವಿಳಂಬವಾಗಿ ಪೂರೈಕೆಯಾದ ಕಾರಣ ಈಗ ವಿತರಿಸ ಲಾಗುತ್ತಿದೆ. ಅವುಗಳಿಗೆ ವಿಮೆ ಆಗ ಬೇಕಿದೆ. ಇನ್ನೊಂದು ವಾರ ದಲ್ಲಿ ಫಲಾ ನುಭವಿಗಳಿಗೆ ಆರ್ಸಿ ನೀಡಲಾಗು ವುದು. ವಿಶೇಷ ಚಕ್ರಗಳ ಅಳವಡಿಕೆ ಸೇರಿದಂತೆ 1 ವಾಹನಕ್ಕೆ 92 ಸಾವಿರ ರೂ. ಸರಕಾರ ನೀಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಚಿತ ವಾಹನ ಪಡೆಯಲು ಶೇ. 75 ಅಥವಾ ಅದಕ್ಕಿಂತ ಹೆಚ್ಚಿನ ವೈಕಲ್ಯ ಇರಬೇಕೆಂಬ ನಿಯಮವಿದ್ದು, ಅದನ್ನು ಪರಿಷ್ಕರಿಸಿ ಶೇ. 50ಕ್ಕೆ ಇಳಿಸಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಶೇ. 50 ವೈಕಲ್ಯ ಹೊಂದಿದವರೂ ಉಚಿತ ವಾಹನ ಪಡೆಯಬಹುದು. ಆದಾಯ ಮಿತಿ ಹೆಚ್ಚಳದ ಬಗ್ಗೆ ಇದುವರೆಗೂ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ.
– ಗೋಪಾಲಕೃಷ್ಣ ,
ಅಂಗವಿಕಲರ ಕಲ್ಯಾಣಾಧಿಕಾರಿ, ದ.ಕ. ಜಿಲ್ಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್