Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು
Team Udayavani, Apr 23, 2024, 7:51 PM IST
ಕಾಣಿಯೂರು: ಕೆರೆಯಲ್ಲಿ ಕಸ ಹಾಗೂ ಸತ್ತಿರುವ ಮೀನುಗಳನ್ನು ತೆಗೆದು ಸ್ವಚ್ಛಗೊಳಿಸಲು ಕೆರೆಗೆ ಇಳಿದು ಕೆಲಸ ನಿರ್ವಹಿಸುತ್ತಿದ್ದಾಗ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಮುಳುಗಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಕಾಯಿಮಣ ಗ್ರಾಮದ ಅನವುಮೂಲೆಯಲ್ಲಿ ಎ. 22ರಂದು ನಡೆದಿದೆ.
ಅನವುಮೂಲೆ ನಿವಾಸಿ ಜಗದೀಶ (41) ಮೃತರು.
ಇವರು ತಮ್ಮ ತೋಡಿನಲ್ಲಿದ್ದ ಕೆಲ ಮೀನುಗಳನ್ನು ರವಿವಾರ ಕೆರೆಗೆ ತಂದು ಬಿಟ್ಟಿದ್ದರು. ಆದರೆ ಅವುಗಳು ಸೋಮವಾರ ಸತ್ತು ಹೋಗಿದ್ದವು. ಇವುಗಳನ್ನು ಹಾಗೂ ಕೆರೆಯಲ್ಲಿದ್ದ ಕಸಗಳನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಕೆರೆಗೆ ಇಳಿದಿದ್ದರು. ಆದರೆ ಆಕಸ್ಮಿಕವಾಗಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತರ ಪತ್ನಿ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.