Goa ರೈಲಿನಲ್ಲಿ ನಿಡಿಗಲ್ ವಾಸಿಗೆ ಹೃದಯಾಘಾತ: ಸಾವು
Team Udayavani, Dec 23, 2023, 1:34 AM IST
ಬೆಳ್ತಂಗಡಿ: ಮಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಉಜಿರೆ ಕಾಲೇಜಿನ ಸಂಸ್ಕೃತ ವಿಭಾಗದ ನಿವೃತ್ತ ಮುಖ್ಯಸ್ಥ ದಿ| ಇ. ಮಹಾಬಲ ಭಟ್ ಅವರ ಪುತ್ರಚಕಲ್ಮಂಜ ಗ್ರಾಮದ ನಿಡಿಗಲ್ನ ಚಂದ್ರಶೇಖರ್ ಭಟ್ (46) ಮೃತ ವ್ಯಕ್ತಿ.
ರೈಲಿನಲ್ಲಿ ಗೋವಾಕ್ಕೆ ಪ್ರಯಾಣಿಸುತ್ತಿದ್ದ ಇವರು ಮಡಂಗಾವ್ ನಿಲ್ದಾಣದಲ್ಲಿ ಇಳಿಯಬೇಕಾಗಿದ್ದು, ಅವರು ಅಲ್ಲಿ ಇಳಿಯದೆ ಇರುವುದನ್ನು ಗಮನಿಸಿ ಮುಂದಿನ ವರ್ಣ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದಾಗ ಮೃತಪಟ್ಟಿರುವುದು ತಿಳಿದುಬಂದಿದೆ.
ಅಲ್ಲಿನ ಪೊಲೀಸರ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕುಟುಂಬಸ್ಥರು ಗೋವಾಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.