ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಬಂಧಿತರಿಬ್ಬರಿಗೆ ಪಿಎಫ್ಐ, ಎಸ್ಡಿಪಿಐ ನಂಟು?
ಎಸ್ಡಿಪಿಐ ಕಚೇರಿಯಲ್ಲಿ ಮಹಜರು ಪ್ರಕ್ರಿಯೆ!
Team Udayavani, Aug 9, 2022, 8:02 AM IST
ಪುತ್ತೂರು/ಸುಳ್ಯ : ದ.ಕ. ಬಿಜೆಪಿ ಜಿಲ್ಲಾ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿ ರವಿವಾರ ಬಂಧಿಸಲಾದ ಇಬ್ಬರು ಆರೋಪಿಗಳಿಗೆ ಪಿಎಫ್ಐ, ಎಸ್ಡಿಪಿಐ ಸಂಘಟನೆಯ ಸಂಪರ್ಕ ಇದೆಯೋ ಎನ್ನುವ ಶಂಕೆ ಮೂಡಿದೆ.
ಸೋಮವಾರ ಪೊಲೀಸರು ಆರೋಪಿ ಗಳಿಬ್ಬರನ್ನು ಸುಳ್ಯದ ಎಸ್ಡಿಪಿಐ ಕಚೇರಿಗೆ ಕರೆ ತಂದು ಮಹಜರು ನಡೆಸಿರುವುದು ಈ ಅನುಮಾನಕ್ಕೆ ಪುಷ್ಠಿ ನೀಡಿದೆ. ಲಭ್ಯ ಮಾಹಿತಿ ಪ್ರಕಾರ ಪಿಎಫ್ಐ ಸಂಘಟನೆಯಲ್ಲಿ ಈ ಇಬ್ಬರು ಗುರುತಿಸಿಕೊಂಡಿದ್ದು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಈಗಾಗಲೇ ಬಂಧಿತರಾಗಿರುವ ಶಫೀಕ್, ಜಾಕೀರ್, ಸದ್ದಾಂ, ಹಾರೀಸ್ ಪಿಎಫ್ಐ, ಎಸ್ಡಿಪಿಐಯಲ್ಲಿ ಗುರುತಿಸಿಕೊಂಡಿರುವುದು ದೃಢಪಟ್ಟಿದೆ. ರವಿವಾರ ಬಂಧಿಸಲ್ಪಟ್ಟವರು ಕೂಡ ಈ ಸಂಘಟನೆಯಲ್ಲಿ ಇರುವುದು ತನಿಖೆಯ ಮೇಲೂ°ಟದಲ್ಲಿ ಕಂಡು ಬಂದಿದೆ.
ಎಸ್ಡಿಪಿಐ ಕಚೇರಿಯಲ್ಲಿ ಮಹಜರು ಪ್ರಕ್ರಿಯೆ: ಹತ್ಯೆ ಪ್ರಕರಣ ದಲ್ಲಿ ಬಂಧಿತರಾದ ಸುಳ್ಯ ನಾವೂರು ನಿವಾಸಿ ಆಬಿದ್, ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಾಲ್ನನ್ನು ಸೋಮವಾರ ಬೆಳಗ್ಗೆ 8 ಗಂಟೆಗೆ ಡಿವೈಎಸ್ಪಿ ಗಾನ ಕುಮಾರಿ ನೇತೃತ್ವದ ಪೊಲೀಸ್ ತಂಡ ಸುಳ್ಯದ ಆಲೆಟ್ಟಿ ನಗರದ ಕ್ರಾಸ್ನಲ್ಲಿರುವ ಎಸ್ಡಿಪಿಐ ಕಚೇರಿಗೆ ಕರೆತಂದು ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮಾತ್ರವಲ್ಲದೇ ಸುಳ್ಯ ಮತ್ತು ಬೆಳ್ಳಾರೆಯ ವಿವಿಧ ಸ್ಥಳಗಳಲ್ಲಿಯೂ ಮಹಜರು ಪ್ರಕ್ರಿಯೆ ನಡೆಸಲಾಯಿತು.
ಕಚೇರಿಯಲ್ಲಿ ಕುಳಿತು ಮಾಹಿತಿ ಸಂಗ್ರಹ?
ಬಂಧಿತ ಆರೋಪಿಗಳಿಬ್ಬರು ಸುಳ್ಯದ ಕಚೇರಿಯಿಂದಲೇ ಪ್ರವೀಣ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಹತ್ಯೆಯ ಸಂಚು ಕೂಡ ರೂಪಿಸಿದ್ದರು ಎನ್ನುವ ಅನುಮಾನದ ನಡುವೆ ಈ ಮಹಜರು ಪ್ರಕ್ರಿಯೆ ಮಹತ್ವ ಪಡೆದಿದೆ. ಈಗಾಗಲೇ ಪ್ರವೀಣ್ ಹತ್ಯೆ ನಡೆಸಿ ಪರಾರಿ ಆಗಿರುವ ಪ್ರಮುಖ ಹಂತಕರ ಜತೆಗೆ ಈ ಇಬ್ಬರು ನಿರಂತರ ಸಂಪರ್ಕದಲ್ಲಿರುವುದ್ದು ಕೂಡ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಎಲ್ಲ ಕೋನಗಳಿಂದ ಪೊಲೀಸರು ತನಿಖೆ ಮುಂದುವರಿಸಿದ್ದು ಹತ್ಯೆ, ಹತ್ಯೆಗೆ ಕಾರಣವಾದ ಅಂಶದ ಇಡೀ ಚಿತ್ರಣವನ್ನು ಬೇಧಿಸುವಲ್ಲಿ ನಿರತರಾಗಿದ್ದಾರೆ.
ಇದನ್ನೂ ಓದಿ : ಆ.15ರಂದು “ಓಲಾ ಎಸ್1 ಪ್ರೋ’ ಅನಾವರಣ; ಗರಿಷ್ಠ ವೇಗ ಮಿತಿ 115 ಕಿ.ಮೀ.,10 ಬಣ್ಣಗಳಲ್ಲಿ ಲಭ್ಯ
ಅಜ್ಞಾತವಾಸದಲ್ಲಿ ಪ್ರಮುಖರು !
ಪ್ರವೀಣ್ ಹತ್ಯೆಯ ಬಳಿಕ ಕೆಲವು ಸಂಘಟನೆಗಳಲ್ಲಿ ಪ್ರಮುಖ ಸ್ಥಾನದಲ್ಲಿದ್ದ ಮುಖಂಡರು ಬೆಳ್ಳಾರೆಯನ್ನು ತೊರೆದಿದ್ದು ಅಜ್ಞಾತವಾಸದಲ್ಲಿರುವ ಬಗ್ಗೆ ಮಾಹಿತಿ ಹಬ್ಬಿದೆ. ಉದ್ವಿಗ್ನ ಸ್ಥಿತಿಯ ಕಾರಣದಿಂದಾಗಿ ಸುರಕ್ಷತೆಗೋಸ್ಕರ ಅಥವಾ ಬೇರೆ ಯಾವುದೋ ಕಾರಣದಿಂದ ಊರು ತೊರೆದಿರಬಹುದು ಎನ್ನುವ ಬಗ್ಗೆ ಸ್ಥಳೀಯವಾಗಿ ಶಂಕೆ ಮೂಡಿದೆ.
ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಮೂವರು ಹಂತಕರು ಸ್ಥಳೀಯ ಪರಿ ಸರದವರಾಗಿದ್ದು ಅವರು ಕೂಡ ಊರು ತೊರೆದಿದ್ದು ಪೊಲೀಸರು ಅವರು ಬೆನ್ನು ಬಿದ್ದಿದ್ದಾರೆ ಎನ್ನುವ
ಮಾಹಿತಿ ಲಭಿಸಿದೆ.
ನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನ
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಾಲ…, ಸುಳ್ಯ ನಾವೂರು ನಿವಾಸಿ ಆಬಿದ್ನನ್ನು ಸೋಮವಾರ ಸಂಜೆ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ಕಿರಿಯ ಸಿವಿಲ್ ನ್ಯಾಯಾಧೀಶೆ ಆರೋಪಿಗಳಿಗೆ ಆಗಸ್ಟ್ 12ರ ತನಕ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿ¨ªಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ