ಜಿಲ್ಲಾ ಪಂಚಾಯತ್ ರಸ್ತೆಗಳ ಚರಂಡಿ ಸುಸ್ಥಿತಿಗೆ ತರಲು ಮನವಿ
Team Udayavani, Jun 11, 2019, 5:50 AM IST
ಬೆಳ್ತಂಗಡಿ: ತಾಲೂಕಿನಲ್ಲಿರುವ ಪ್ರಮುಖ ರಸ್ತೆಗಳ ಚರಂಡಿಯ ಹೂಳೆತ್ತಿ ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಜೆಸಿಬಿ ಮಾಲಕರು ಸಮಾಜಕ್ಕೋಸ್ಕರ ಸಹಕರಿಸಬೇಕು ಎಂದು ಶಾಸಕ ಹರೀಶ್ ಪೂಂಜ ಮನವಿ ಮಾಡಿದರು. ಸೋಮವಾರ ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಜೆಸಿಬಿ ಮಾಲಕರು, ಪಿಡಬ್ಲ್ಯುಡಿ ಗುತ್ತಿಗೆದಾರರು ಹಾಗೂ ಎಂಜಿನಿಯರ್ಗಳ ಜತೆ ಕರೆದ ಸಭೆಯಲ್ಲಿ ಅವರು ಮಾತನಾಡಿದರು.
ಹೊಸ ಪ್ರಯೋಗ
ಮಳೆ ವಿಳಂಬವಿದ್ದರೂ ತಾಲೂಕಿನಲ್ಲಿ ಅತಿವೃಷ್ಟಿಯಾದಲ್ಲಿ ಮುನ್ನೆಚ್ಚರಿಕೆಯಾಗಿ ತಾಲೂಕಿನ ರಸ್ತೆ ಅಂಚಿನಲ್ಲಿರುವ ಚರಂಡಿ ಗಳ ಹೂಳೆತ್ತುವ ಕಾರ್ಯ ವಿಳಂಬವಾಗಿದೆ. ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲ ಜೆಸಿಬಿ ಮಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ಥಳೀಯವಾಗಿ ರಸ್ತೆ ಅಭಿವೃದ್ಧಿಗೆ ಸಹಕಾರ ನೀಡುವಂತೆ ಹೊಸ ಪ್ರಯೋಗವಾಗಿ ಸಭೆ ಕರೆಯಲಾಗಿದೆ ಎಂದರು. ಜೆಸಿಬಿ ಮಾಲಕರು ಆಯಾಯ ಭಾಗದಲ್ಲಿರುವ ಸ್ಥಳೀಯ ಒಂದು ಜಿ.ಪಂ. ರಸ್ತೆಯ ಚರಂಡಿ ದುರಸ್ತಿಗೊಳಿಸಿ, ಕಟ್ಟಿದ ಕಸ ಹಾಗೂ ಹೂಳು ಮೇಲೆತ್ತುವ ಮೂಲಕ ಸಾಮಾಜಿಕ ಸೇವೆ ನೀಡುವಂತೆ ವಿನಂತಿಸಿದರು.
ಕಾರ್ಯ ನಿರ್ವಹಿಸಲು ಬದ್ಧ
ಜೆಸಿಬಿ ಮಾಲಕರು ಸ್ಪಂದಿಸಿ, ಲೋಕೋಪಯೋಗಿ ಅಭಿಯಂತರರು ಪ್ರಮುಖ ರಸ್ತೆಯ ಮಾರ್ಗ ಸೂಚಿ ನಕ್ಷೆ ಸಿದ್ಧಪಡಿಸಿದಲ್ಲಿ ಅದಕ್ಕೆ ಆನುಗುಣವಾಗಿ ಕಾರ್ಯ ನಿರ್ವಹಿಸಲು ಬದ್ಧರೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನುಳಿ ದಂತೆ ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಜತೆಯಾಗಿ ಮಳೆ ಆರಂಭಕ್ಕೂ ಮುನ್ನ ಕೆಲಸ ನಿರ್ವಸಿದರೆ ಸೂಕ್ತ ಎಂಬ ಸಲಹೆಯೂ ಕೇಳಿ ಬಂತು. ಸಭೆಯಲ್ಲಿ ಬಂಟ್ವಾಳ ಹಿರಿಯ ಮೋಟರ್ ವಾಹನ ನಿರೀಕ್ಷಕ ಚರಣ್ ಕೆ., ಜಿ.ಪಂ. ಎಇಇ ಚೆನ್ನಪ್ಪ ಮೋಯ್ಲಿ, ಪಿಡಬ್ಲ್ಯುಡಿ ಗುತ್ತಿಗೆದಾರರು ಮತ್ತಿತರ ಅಧಿಕಾರಿಗಳು ಹಾಜರಿದ್ದರು.
ಮಾರ್ಗಸೂಚಿ
ಸ.ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್ ಅಜಿಲ ಪ್ರತಿಕ್ರಿಯಿಸಿ, ಸದ್ಯ ಜಿ.ಪಂ. ಒಳಪಡುವ 1,734 ಗ್ರಾಮೀಣ ರಸ್ತೆಗಳಲ್ಲಿ ಪ್ರಮುಖ ರಸ್ತೆ ಚರಂಡಿಗಳನ್ನು ಸುಸ್ಥಿತಿಗೆ ತರಲಾಗುವುದು. ಹೊಸಂಗಡಿ-ಬಡಕೊಡಿ- ಕಾಶಿಪಟ್ಣ, ಪಡ್ಡಂದಡ್ಕ- ಕಾಶಿಪಟ್ಣ, ಮಾಲಾಡಿ- ಪಡಂಗಡಿ, ಓಡಿಲಾ°ಳ- ಪಡಂಗಡಿ, ಕಾಪಿನಡ್ಕ-ಬಳೆಂಜ ಸೇರಿದಂತೆ ಮಾರ್ಗ ಸೂಚಿ ನೀಡಲಾಗುವುದು. ಜೆಸಿಬಿ ಮಾಲೀಕರು ಸಹಕರಿಸುವಂತೆ ಕೋರಿದರು.
ಅಧಿಕಾರಿಗಳ ಸಭೆ
15 ದಿನದೊಳಗೆ ರಸ್ತೆ ಚರಂಡಿ ಸುಸ್ಥಿಗೆ ತರುವಂತೆ ಕೆಲಸ ಮಾಡಿಕೊಡಲು ಜೆಸಿಬಿ ಮಾಲಕರೊಂದಿಗೆ ಚರ್ಚಿಸಲಾಗಿದೆ. ಮಳೆಗಾಲದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆಯಾಗಿ ಮುಂದಿನ ದಿನಗಳಲ್ಲಿ ಮೆಸ್ಕಾಂ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ಕರೆಯಲಾಗುವುದು.
-ಹರೀಶ್ ಪೂಂಜ, ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ