ನಿರ್ಲಕ್ಷ್ಯಕ್ಕೊಳಗಾದ ಕೊಯ್ಯೂರು ಗ್ರಾಮ: ಆದುರ್‌ಪೆರಾಲ್‌-ಪರಪ್ಪು ರಸ್ತೆ; ಸಂಚಾರ ದುಸ್ತರ


Team Udayavani, Aug 21, 2020, 3:16 AM IST

ನಿರ್ಲಕ್ಷ್ಯಕ್ಕೊಳಗಾದ ಕೊಯ್ಯೂರು ಗ್ರಾಮ: ಆದುರ್‌ಪೆರಾಲ್‌-ಪರಪ್ಪು ರಸ್ತೆ; ಸಂಚಾರ ದುಸ್ತರ

ಕೊಯ್ಯೂರು ಗ್ರಾಮದ ಪರಪ್ಪು-ಆದುರ್‌ಪೆರಾಲ್‌ ರಸ್ತೆಯ ನೋಟ.

ಬೆಳ್ತಂಗಡಿ: ಗ್ರಾಮೀಣ ಅಭಿವೃದ್ಧಿಗೆ ಸರಕಾರ ಯೋಜನೆಗಳನ್ನು ಹಮ್ಮಿ ಕೊಂಡರೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸವಲತ್ತುಗಳಿಂದ ವಂಚಿತವಾಗುತ್ತಲೇ ಇದೆ ಎಂಬುದಕ್ಕೆ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮ ನಿದರ್ಶನ.

ಕೊಯ್ಯೂರು ಗಾಮದ ಆದುರ್‌ಪೆರಾಲ್‌ನಿಂದ ಪರಪ್ಪು ಸಾಗುವ 4 ಕಿ. ಮೀ. ಜಿ.ಪಂ. ರಸ್ತೆಯು ಹೊಂಡಗಳಿಂದ ಕೂಡಿದ್ದು, ಸಂಚಾರ ಕಷ್ಟಸಾಧ್ಯವಾಗಿದೆ. ಬಾಡಿಗೆ ವಾಹನಗಳು, ರಿಕ್ಷಾ ಚಾಲಕರು ಈ ರಸ್ತೆಯಾಗಿ ಬರಲು ಹಿಂದೇಟು ಹಾಕುತ್ತಿದ್ದಾರೆ. ಕೊಯ್ಯೂರು ಮಂದಿಗೆ ಉಪ್ಪಿನಂಗಡಿಯಾಗಿ ಮತ್ತು ಗುರುವಾಯನಕೆರೆಯಾಗಿ ಮಂಗಳೂರಿಗೆ ತೆರಳಲು ಈ ರಸ್ತೆ ಅತ್ಯವಶ್ಯ. ಇಲ್ಲವಾದಲ್ಲಿ ಬೆಳ್ತಂಗಡಿಯಾಗಿ 15 ಕಿ. ಮೀ. ಸುತ್ತಿಬಳಸಿ ಬರಬೇಕಿದೆ. ಹೈನುಗಾರಿಕೆ, ಶಿಕ್ಷಣ, ಕೃಷಿ ಸಲಕರಣೆ ಸಾಗಾಟ, ಆರೋಗ್ಯ ದೃಷ್ಟಿಯಿಂದ ಕೊಯ್ಯೂರು ಬಡವಾಗಿದೆ.

ಕೊಯ್ಯೂರು ಗ್ರಾಮವನ್ನು ಉಜಿರೆ, ಬೆಳ್ತಂಗಡಿ, ಬೆಳಾಲು, ಉಪ್ಪಿನಂಗಡಿ ನಾಲ್ಕು ಕಡೆಗಳಿಂದ ಸಂಪರ್ಕಿಸುವ ರಸ್ತೆಗಳಿದ್ದರೂ ಅಭಿವೃದ್ಧಿಯಾಗಿಲ್ಲ. ಗ್ರಾಮಸ್ಥರು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಿದ್ದರೂ ಸ್ಪಂದನೆ ಸಿಕ್ಕಿಲ್ಲ.  ಕೊಯ್ಯೂರು ಕ್ರಾಸ್‌ನಿಂದ ಬಜಿಲ ವರೆಗೆ ಸುಮಾರು 15 ಕಿ. ಮೀ. ದೂರ ವಿದ್ದು, ಕಳೆದ ಬಾರಿ ಕೊಯ್ಯೂರು ಕ್ರಾಸ್‌ನಿಂದ ಬಾಸಮೆವರೆಗೆ 6 ಕಿ. ಮೀ. ರಸ್ತೆಯನ್ನು 4.30 ಕೋ. ರೂ. ವೆಚ್ಚದಲ್ಲಿ 12 ಮೀ. ವಿಸ್ತರಣೆ ಮಾಡಿ ಡಾಮರು ಹಾಕಲಾಗಿದೆ. ಉಳಿದಂತೆ ಬಾಸಮೆಯಿಂದ ಬಜಿಲವರೆಗೆ 9 ಕಿ. ಮೀ. ರಸ್ತೆ ತೀರಾ ಹದಗೆಟ್ಟಿದೆ.

ಇತರ ರಸ್ತೆಗಳಲ್ಲೂ ಹೊಂಡ
ಕೊಯ್ಯೂರು ಗ್ರಾಮದ ಒಳ ರಸ್ತೆ
ಗಳು ಕಚ್ಚಾರಸ್ತೆಯಾಗಿದ್ದು, ಪ್ರಮುಖ
ವಾಗಿ ಮಲೆಬೆಟ್ಟು ನಿನ್ನಿಕಲ್ಲು 3 ಕಿ. ಮೀ., ಬಾಸಮೆ-ಬಜಿಲ 9 ಕಿ. ಮೀ., ಆದುರ್‌ಪೆರಾಲ್‌-ಎರುಕಡಪು 4 ಕಿ.ಮೀ. ಅಗತ್ಯವಾಗಿ ಅಭಿವೃದ್ಧಿ ಆಗಬೇಕಾಗಿದೆ.

ಅಭಿವೃದ್ಧಿಗೆ ತೊಡಕು
ಗ್ರಾಮ ಅಭಿವೃದ್ಧಿಗೆ ಅಸಮರ್ಪಕ ರಸ್ತೆ ಸಂಪರ್ಕವೇ ಮೂಲ ತೊಡಕಾಗಿ ಪರಿಣಮಿಸಿದೆ. ಗ್ರಾಮೀಣ ಪ್ರದೇಶ ವಾದರೂ ಇಲ್ಲಿಂದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಉಜಿರೆ, ಮಂಗಳೂರು ಸಹಿತ ಇತರೆಡೆಗೆ ತೆರಳುತ್ತಿದ್ದಾರೆ. ಇದರೊಂದಿಗೆ ಆರೋಗ್ಯ ಸಮಸ್ಯೆಯಾದಲ್ಲಿ ಆಸ್ಪತ್ರೆಗೆ ತೆರಳಲು ಆ್ಯಂಬುಲೆನ್ಸ್‌, ವಾಹನ ಸಂಚಾರ ಬಹುದೊಡ್ಡ ಸವಾಲಾಗಿದೆ.

ಮಳೆಗಾಲ ಬಳಿಕ ಕಾಮಗಾರಿ
ಪರಪ್ಪು-ಆದುರ್‌ಪೆರಾಲ್‌ ರಸ್ತೆ ಅಭಿವೃದ್ಧಿಗೆ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಒಟ್ಟು 5 ಕೋ. ರೂ. ಟೆಂಡರ್‌ ಕರೆದು ಅಭ್ಯುದಯ ಕನ್‌ಸ್ಟ್ರಕ್ಷನ್‌ಗೆ ಗುತ್ತಿಗೆ ನೀಡಲಾಗಿದೆ. 5 ಕಿ. ಮೀ. ರಸ್ತೆಯು 7 ಮೀ. ವಿಸ್ತರಣೆ ಜತೆಗೆ ಸಂಪೂರ್ಣ ಹೊಸ ಮೋರಿಗಳನ್ನು ಅಳವಡಿಸಲಾಗುವುದು. 5 ವರ್ಷ ನಿರ್ವಹಣೆ ಗುತ್ತಿಗೆಯನ್ನೂ ನೀಡಲಾಗಿದೆ. ಮಳೆಗಾಲದ ಬಳಿಕ ಕಾಮಗಾರಿ ಆರಂಭಿಸಲಾಗುವುದು.
– ಹರೀಶ್‌ ಪೂಂಜ, ಶಾಸಕರು

ಟಾಪ್ ನ್ಯೂಸ್

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.