ಮಾದಕ ವ್ಯಸನ ಪತ್ತೆಗೂ ಶ್ವಾನದಳ ; ಪೊಲೀಸ್ ಇಲಾಖೆಗೆ ಮತ್ತಷ್ಟು ಬಲ
Team Udayavani, Oct 24, 2020, 1:27 AM IST
ಸ್ನಿಫರ್ ಶ್ವಾನ.
ಉಡುಪಿ: ಹೆಚ್ಚುತ್ತಿರುವ ಮಾದಕ ವ್ಯಸನ ತಡೆಗೆ ಪೊಲೀಸ್ ಇಲಾಖೆ ಮುಂದಾಗಿದ್ದು, ಪತ್ತೆ ಕಾರ್ಯಕ್ಕೆ ಶ್ವಾನದಳಗಳನ್ನು ಬಳಸಿಕೊಳ್ಳಲು ಮುಂದಾ ಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಇದಕ್ಕೆಂದೇ ಪ್ರತ್ಯೇಕ ಶ್ವಾನದಳಗಳಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಇಲಾಖೆಯ ಶ್ವಾನಗಳಿಗೆ ತರಬೇತಿ ನೀಡಲು ಇಲಾಖೆ ಚಿಂತಿಸುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಡಾಬರ್ಮನ್, ಜರ್ಮನ್ ಶೆಫರ್ಡ್, ಲ್ಯಾಬ್ರೆಡಾರ್ ತಳಿ ಗಳಿದ್ದು, ಈ ಪೈಕಿ ಡಾಬರ್ಮನ್ ಶ್ವಾನಗಳು ಅಪರಾಧ ಪತ್ತೆಗೆ ಹಾಗೂ ಉಳಿದ ಎರಡು ತಳಿಗಳು ಸ್ಫೋಟಕ ವಸ್ತುಗಳನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತವೆ.
ಎರಡು ತಿಂಗಳ ಶ್ವಾನಕ್ಕೆ ಬೆಂಗಳೂರಿನಲ್ಲಿ ತರಬೇತಿ
ಶ್ವಾನದಳಕ್ಕೆ ಸೇರ್ಪಡೆಯಾಗಿರುವ ಡಾಬರ್ಮನ್ ತಳಿಯ ಸ್ನಿಫರ್ ಹೆಸರಿನ 2 ತಿಂಗಳ ಶ್ವಾನವು ಶೀಘ್ರದಲ್ಲಿಯೇ ಬೆಂಗಳೂರಿಗೆ ತೆರಳಲಿವೆ. ಅಲ್ಲಿ ಅಪರಾಧ ಪತ್ತೆಯೊಂದಿಗೆ ಮಾದಕ ವ್ಯಸನಗಳನ್ನು ಪತ್ತೆ ಹಚ್ಚುವ ಬಗ್ಗೆ ಇದಕ್ಕೆ ತರಬೇತಿ ನೀಡಲಾಗು ತ್ತದೆ. ಅಲ್ಲಿ ತರಬೇತಿ ಪಡೆದ ಬಳಿಕ ಉಡುಪಿಗೆ ಕರ್ತವ್ಯಕ್ಕೆ ಹಾಜರಾಗಲಿದೆ. ಅಗತ್ಯಬಿದ್ದರೆ ಇತರ ಜಿಲ್ಲೆಗಳಿಗೂ ಈ ಶ್ವಾನಗಳು ಕರ್ತವ್ಯಕ್ಕೆ ತೆರಳಲಿವೆ.
ಶ್ವಾನಕ್ಕೆ ದಿನಕ್ಕೆ 300 ರೂ.ವೆಚ್ಚ!
ಉಡುಪಿ ಜಿಲ್ಲೆಯಲ್ಲಿ ಶ್ವಾನಗೃಹದಲ್ಲಿ ಒಟ್ಟು 4 ಶ್ವಾನಗಳಿವೆ. ಒಂದು ಶ್ವಾನದ ನಿರ್ವಹಣೆಗೆ ದಿನವೊಂದಕ್ಕೆ ತಗಲುವ ವೆಚ್ಚ 300 ರೂ.ಗಳು. ಊಟ, ವೈದ್ಯ ಕೀಯ ಆರೈಕೆ ಸಹಿತ ಎಲ್ಲವೂ ಇದರಲ್ಲಿ ಒಳಗೊಂಡಿರುತ್ತವೆ. ಒಂದು ಶ್ವಾನವನ್ನು ಇಬ್ಬರು ಹ್ಯಾಂಡ್ಲರ್ಗಳು ಆರೈಕೆ ಮಾಡುತ್ತಿದ್ದಾರೆ.
2.5 ಕೋ.ರೂ.ವೆಚ್ಚದ ಯೋಜನೆ
ಶ್ವಾನದಳದ ಬಲವರ್ಧನೆಗಾಗಿ ರಾಜ್ಯ ಪೊಲೀಸ್ ಇಲಾಖೆಯು ಸುಮಾರು 2.5 ಕೋ.ರೂ.ವೆಚ್ಚದಲ್ಲಿ ಶ್ವಾನದಳಕ್ಕೆ 50 ಶ್ವಾನಗಳನ್ನು ಸೇರ್ಪಡಿಸುವ ಉದ್ದೇಶ ಹೊಂದಿದೆ. ಸ್ಫೋಟಕ, ಮಾದಕ ವಸ್ತುಗಳು ಹಾಗೂ ಅಪರಾಧಿಗಳ ಪತ್ತೆದಾರಿಕೆಯಲ್ಲಿ ಶ್ವಾನದಳವು ಮಹತ್ತರವಾದ ಪಾತ್ರ ವಹಿಸುತ್ತಿದೆ. ಸದ್ಯ ಬೆಂಗಳೂರಿನಲ್ಲಿ ಜರ್ಮನ್ ಶೆಫರ್ಡ್, ಲಾಬ್ರೆಡಾರ್, ಬೆಲ್ಜಿಯಂ ಮಾಲಿನೋಯಿಸ್, ಗೋಲ್ಡನ್ ರಿಟ್ರೇವರ್ ಹಾಗೂ ಡಾಬರ್ಮನ್ ತಳಿಗಳ 55 ಶ್ವಾನಗಳಿವೆ. ಮುಂದಿನ ದಿನಗಳಲ್ಲಿ ಮಹಿಳಾ ಪೇದೆಗಳನ್ನು ಈ ದಳಕ್ಕೆ ನೇಮಿಸಲು ಇಲಾಖೆ ಚಿಂತನೆ ನಡೆಸಿದೆ.
ಶ್ವಾನಕ್ಕೆ ತರಬೇತಿ
ಅಪರಾಧ ಪತ್ತೆಯೊಂದಿಗೆ ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಶ್ವಾನಗಳನ್ನು ಬಳಸಿಕೊಳ್ಳುವ ಚಿಂತನೆಯಿದೆ. ಉಡುಪಿ ಜಿಲ್ಲೆಯಿಂದ ಸ್ನಿಫರ್ ಹೆಸರಿನ ಶ್ವಾನವನ್ನು ತರಬೇತಿಗೊಳಿಸಿ ಸಿದ್ಧಗೊಳಿಸಲಾಗುವುದು.
-ಕುಮಾರಚಂದ್ರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ
Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ
Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್: ಮತ್ತೆ ನಕ್ಸಲರ ಸದ್ದು?
Hebri; ಸ್ಕೂಟಿಗೆ ಕಾರು ಢಿಕ್ಕಿ,ಸವಾರ ಸ್ಥಳದಲ್ಲೇ ಸಾವು
Temple History: ಶ್ರೀ ವಡಭಾಂಡೇಶ್ವರ ಬಲರಾಮ ದೇವಸ್ಥಾನ; ಹಿನ್ನೆಲೆ, ಇತಿಹಾಸ,ವಿಶೇಷಗಳು
MUST WATCH
ಹೊಸ ಸೇರ್ಪಡೆ
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ