ನೆರೆ ಹಾನಿಯಿಂದ ಅಪಾರ ನಷ್ಟ ; ಹೆಚ್ಚುವರಿ ಪರಿಹಾರ ನಿರೀಕ್ಷೆಯಲ್ಲಿ ರೈತರು
Team Udayavani, Oct 14, 2020, 4:15 AM IST
ಉಡುಪಿ: ಜಿಲ್ಲೆಯಲ್ಲಿ ಭಾರೀ ಮಳೆ-ನೆರೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ತೊಡಕುಂಟಾಗಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಸುಮಾರು 65.59 ಹೆಕ್ಟೇರ್ಗಳಷ್ಟು ಕೃಷಿ ಬೆಳೆ ಹಾಗೂ 22.66 ಹೆಕ್ಟೇರ್ಗಳಷ್ಟು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದು ಒಟ್ಟು 26.46 ಲ.ರೂ.ನಷ್ಟ ಉಂಟಾಗಿದೆ. ನಷ್ಟದ ದಾಖಲೆಗಳು ಸಲ್ಲಿಕೆಯಾಗಿದ್ದು, ಶೀಘ್ರದಲ್ಲಿ ಪರಿಹಾರ ವಿತರಣೆ ನಡೆಯಲಿದೆ.
ತೋಟಗಾರಿಕೆ ಬೆಳೆಗಳು ಹಾಗೂ ಕೃಷಿ ಬೆಳೆಗಳಿಗೆ ಪರಿಹಾರ ಮೊತ್ತ ಭಿನ್ನವಾಗಿದೆ. ತೋಟಗಾರಿಕೆ ಇಲಾಖೆಯಲ್ಲಿ ಹೆಕ್ಟೇರ್ಗೆ 18 ಸಾವಿರ ರೂ. ಹಾಗೂ ಕೃಷಿ ಬೆಳೆಗಳಿಗೆ ಹೆಕ್ಟೇರ್ಗೆ 6,800 ರೂ.ಪರಿಹಾರ ಲಭಿಸುತ್ತದೆ. ಆದರೆ ಈ ಪ್ರಮಾಣದ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ ಎನ್ನುತ್ತಾರೆ ಕೃಷಿಕರು.
ಸಪ್ಟೆಂಬರ್ ತಿಂಗಳಿನಲ್ಲಿ ಸುರಿದ ವಿಪರೀತ ಮಳೆಯಿಂದ ಉಂಟಾದ ನೆರೆ ಹಾವಳಿ ಜಿಲ್ಲೆಯಲ್ಲಿ ಭತ್ತ ಕೃಷಿ ಸಂಪೂರ್ಣ ನೆಲಕಚ್ಚುವಂತೆ ಮಾಡಿದೆ. ತೆನೆ ತುಂಬಿಕೊಳ್ಳುತ್ತಿರುವ ಹೊತ್ತಲ್ಲೆ ಬಂದ ನೆರೆಯಿಂದ ಭತ್ತ ಸಣ್ತೀ ಕಳೆದುಕೊಂಡು ಜೊಳ್ಳು ಮಾತ್ರ ಉಳಿದು ಕೃಷಿಕರಿಗೆ ಬಹಳ ನಷ್ಟವಾಗಿದೆ. ಕೃಷಿ ನಷ್ಟಕ್ಕೊಳಗಾದ ರೈತರಿಗೆ ಎಕರೆಗೆ ಕನಿಷ್ಠ ಹತ್ತು ಸಾವಿರ ರೂ. ಗಳ ಪರಿಹಾರ ನೀಡಬೇಕು. ಇದಲ್ಲದೆ ಭತ್ತ ಕಟಾವು ಆರಂಭಗೊಳ್ಳುತ್ತಿರುವ ಈ ಹೊತ್ತಲ್ಲೇ ರೈತರಿಗೆ ಚೇತರಿಕೆ ನೀಡಲು ಬೆಂಬಲ ಬೆಲೆ ಘೋಷಣೆ ಮಾಡಿ ಭತ್ತ ಖರೀದಿ ಅತಿ ಶೀಘ್ರದಲ್ಲಿ ಆರಂಭಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಜಿಲ್ಲಾ ಕೃಷಿಕ ಸಂಘವು ರಾಜ್ಯದ ಮುಖ್ಯಮಂತ್ರಿಗಳನ್ನು ಆಗ್ರಹಿಸಿದೆ.
ಭಾಗಶಃ ಹಾನಿಯಾದವರಿಗೆ ಬಲು ತೊಂದರೆ
ಕೃಷಿ ಬೆಳೆಯಲ್ಲಿ ಭಾಗಶಃ ಹಾನಿ ಯಾದವರ ಪ್ರಮಾಣ ಅಧಿಕವಿದೆ. ಇದಕ್ಕೆ ಪರಿಹಾರದ ಪ್ರಮಾಣವನ್ನು ಕಂದಾಯ ಇಲಾಖೆಯ ಅಧಿಕಾರಿಗಳೇ ನಿರ್ಧರಿಸಲಿದ್ದಾರೆ. ಪರಿಶೀಲನೆ ಕೆಲಸ ನಡೆದಿದ್ದು, ಪರಿಹಾರ ಪಾವತಿ ಮಾತ್ರ ಬಾಕಿ ಇದೆ. ಭಾಗಶಃ ಹಾನಿಯಾದವರಿಗೆ ಎಷ್ಟು ಪ್ರಮಾಣದಲ್ಲಿ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಕೃಷಿಕರು.
ಮಟ್ಟುಗುಳ್ಳ: 3.44 ಲ.ರೂ. ನಷ್ಟ
ಮಟ್ಟುಗುಳ್ಳ ಬೆಳೆ ಸಂಪೂರ್ಣವಾಗಿ ಬೆಳೆದಿರಲಿಲ್ಲ. ಇದರಿಂದ ಈ ಬೆಳೆ ಹಾನಿ ಪರಿಹಾರಕ್ಕೆ ಪ್ರತ್ಯೇಕ ಪ್ರಸ್ತಾವನೆ ಕಳುಹಿಸಲಾಗಿದೆ. ಒಟ್ಟು 6.68 ಹೆಕ್ಟೇರ್ ಮಟ್ಟುಗುಳ್ಳ ಬೆಳೆ ನಾಶವಾಗಿದ್ದು, 3.44 ಲ.ರೂ.ನಷ್ಟ ಉಂಟಾಗಿದೆ.
ಪರಿಹಾರ ಮೊತ್ತ ಫಲಾನುಭವಿಗಳ ಖಾತೆಗೆ ಜಮೆ
ಕೃಷಿ ಹಾಗೂ ತೋಟಗಾರಿಗೆ ಬೆಳೆ ನಾಶವಾದವರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಎಲ್ಲ ಅರ್ಜಿಗಳನ್ನು ಕಳುಹಿಸಿಕೊಡಲಾಗಿದ್ದು, ಪರಿಹಾರದ ಮೊತ್ತ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆಯಾಗಲಿದೆ.
-ಕೆಂಪೇಗೌಡ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ
ಹೆಚ್ಚಿನ ನೆರವು ಅಗತ್ಯ
ನೆರೆ ಪರಿಹಾರದಿಂದಾಗಿ ಅಪಾರ ಪ್ರಮಾಣದಲ್ಲಿ ಕೃಷಿಕರಿಗೆ ನಷ್ಟ ಉಂಟಾಗಿದೆ. ಕೃಷಿಕರಿಗೆ ಈಗ ನಿಗದಿಪಡಿಸಿರುವ ವೇತನ ಅಲ್ಪಪ್ರಮಾಣದ್ದಾಗಿದೆ. ಸರಕಾರ ಮತ್ತಷ್ಟು ಹೆಚ್ಚು ನೆರವು ನೀಡಿ ಕೃಷಿಕರಿಗೆ ಆಸರೆಯಾಗಬೇಕಿದೆ.
-ಕುದಿ ಶ್ರೀನಿವಾಸ ಭಟ್, ಕೃಷಿಕರು
ನಾಶವಾದ ಬೆಳೆಗಳು
ಬೆಳೆ ಹೆಕ್ಟೇರ್ಗಳಲ್ಲಿ
ಅಡಕೆ 12.6
ತೆಂಗು 3.68
ಪೈನಾಪಲ್ 2.8
ಬಾಳೆ 1.91
ಮಟ್ಟುಗುಳ್ಳ 6.68
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ