ಮೇ 31ಕ್ಕೆ ಯಾಂತ್ರೀಕೃತ ಮೀನುಗಾರಿಕೆಗೆ ತೆರೆ
ಮಲ್ಪೆ ಮೀನುಗಾರಿಕೆ ಬಂದರು
Team Udayavani, May 21, 2020, 5:42 AM IST
ಮಲ್ಪೆ: ಸರಕಾರದ ಆದೇಶದಂತೆ ಈ ವರ್ಷವೂ ಮೇ 31ರಂದು ಯಾಂತ್ರೀಕೃತ ಮೀನುಗಾರಿಕೆ ಮುಕ್ತಾಯಗೊಳ್ಳಲಿದೆ.
ರವಿವಾರ ಮೀನುಗಾರರ ಸಂಘದ ನೇತೃತ್ವದಲ್ಲಿ ನಡೆದ ವಿವಿಧ ಮೀನುಗಾರರ ಸಂಘಟನೆಗಳ ಸಭೆಯಲ್ಲಿಯೂ ಈ ಬಗ್ಗೆ ಒಮ್ಮತದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಮೀನುಗಾರಿಕೆಗೆ ತೆರಳುತ್ತಿರುವ ದೋಣಿಗಳು ಮೇ 31ರೊಳಗೆ ಮೀನುಗಾರಿಕೆಗೆ ಮುಗಿಸಿ ಬಂದರು ಸೇರಿಕೊಳ್ಳಲಿವೆ ಎಂದು ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಕೃಷ್ಣ ಎಸ್. ಸುವರ್ಣ ತಿಳಿಸಿದ್ದಾರೆ.
ಪ್ರತೀ ವರ್ಷ ಮಾರ್ಚ್, ಎಪ್ರಿಲ್, ಮೇ ತಿಂಗಳವರೆಗೆ ಮೀನುಗಾರಿಕೆಗೆ ಉತ್ತಮ ಸಂಪಾದನೆ ತಂದು ಕೊಡುವ ಸೀಸನ್. ಈ ಬಾರಿ ಕೊರೊನಾದಿಂದಾಗಿ ಋತುವಿನ ಕೊನೆಯ ಮೂರು ತಿಂಗಳು ಮೀನುಗಾರಿಕೆಯನ್ನು ಕೈ ಬಿಡಬೇಕಾಗಿ ಬಂದಿತ್ತು. ಶೇ. 15ರಷ್ಟು ಯಾಂತ್ರಿಕ ದೋಣಿಗಳು ಮೇ 14ರಿಂದ ಮೀನುಗಾರಿಕೆ ತೆರಳಿದ್ದು ಉಳಿದ ಬಹುತೇಕ ದೋಣಿಗಳು ಅವಧಿಯ ಮೂರು ತಿಂಗಳ ಮೊದಲೇ ಬಂದರಿನಲ್ಲಿ ಲಂಗರು ಹಾಕಿದೆ.
3 ತಿಂಗಳ ಡೀಸೆಲ್ ಸಬ್ಸಿಡಿ
ಪ್ರಾಕೃತಿಕ ವೈಪರೀತ್ಯಾ, ಕೋವಿಡ್-19 ಮಹಾಮಾರಿಗೆ ತತ್ತರಿಸಿದ ಮೀನುಗಾರರಿಗೆ ಸರಕಾರ ಮೂರು ತಿಂಗಳ ಡಿಸೇಲ್ ಸಹಾಯಧನವನ್ನು ಪಾವತಿಸದೇ ಬಾಕಿ ಇಟ್ಟಿರುವುದು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಜನವರಿ, ಫೆಬ್ರವರಿ ಮತ್ತು ಮಾರ್ಚ್ ಸೇರಿದಂತೆ ಒಟ್ಟು ಮೂರು ತಿಂಗಳ ಡಿಸೇಲ್ ಸಬ್ಸಡಿ ಬಾಕಿ ಇದ್ದು, ಅತೀ ಶೀಘ್ರದಲ್ಲಿ ಪಾವತಿಸುವಂತೆ ಮೀನುಗಾರಿಕೆ ಇಲಾಖೆಯ ನಿರ್ದೇಶಕರಿಗೆ, ಸಚಿವ, ಸಂಸದರಿಗೆ ಮನವಿ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?