ಉಡುಪಿ ಜಿಲ್ಲೆಯ ಗಡಿಭಾಗಗಳಲ್ಲಿ ತನಿಖೆ ಇನ್ನಷ್ಟು ಬಿಗಿ
ಚೆಕ್ಪೋಸ್ಟ್ಗಳ ಸ್ಥಳಾಂತರ,ಸಾರ್ವಜನಿಕರ ಸಹಕಾರ ಕೋರಿದ ಇಲಾಖೆ
Team Udayavani, Apr 29, 2020, 5:08 AM IST
ಬೆಳ್ಮಣ್: ಕೋವಿಡ್ 19 ನಿಯಂತ್ರಣದಲ್ಲಿ ಉಡುಪಿ ಜಿಲ್ಲೆ ಹಸಿರು ವಲಯದಲ್ಲಿ ಗುರುತಿಸಿಕೊಂಡ ಬೆನ್ನಲ್ಲೇ ಜಿಲ್ಲೆಯ ಗಡಿಭಾಗಗಳ ಚೆಕ್ಪೋಸ್ಟ್ಗಳಲ್ಲಿ ತಪಾಸಣೆಯ ಪ್ರಕ್ರಿಯೆ ಇನ್ನಷ್ಟು ಬಿಗಿಗೊಂಡಿದೆ.
ಮಂಗಳವಾರ ಕಾರ್ಕಳ ಡಿವೈಎಸ್ಪಿ ಭರತ್ ರೆಡ್ಡಿ ಕಾರ್ಕಳದ ಗಡಿಭಾಗಗಳಾದ ಜಾರಿಗೆಕಟ್ಟೆ, ಸಚ್ಚೇರಿಪೇಟೆಯ ಚೆಕ್ಪೋಸ್ಟ್ಗಳಿಗೆ ಭೇಟಿ ನೀಡಿ ಈ ಭಾಗದ ಒಳ ಮಾರ್ಗಗಳಲ್ಲಿ ವಾಹನ ಸಂಚಾರ ಅಧಿಕವಾಗಿರುವ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಠಿಯಿಂದ ಜಾರಿಗೆಕಟ್ಟೆಯ ಚೆಕ್ಪೋಸ್ಟ್ ಸಂಕಲಕರಿಯಕ್ಕೂ ಕಡಂದಲೆ ನದಿ ಬದಿಯ ಚೆಕ್ಪೋಸ್ಟ್ ಸಚ್ಚೇರಿಪೇಟೆ ರೈಸ್ಮಿಲ್ ಬಳಿಗೆ ಸ್ಥಳಾಂತರಿಸುವಂತೆ ಮುಂಡ್ಕೂರು ಗ್ರಾಮ ಪಂಚಾಯತ್ ಪಿಡಿಒ ರವಿರಾಜ್ರವರಿಗೆ ಆದೇಶ ತಿಳಿಸಿದರು.
ಈಗಾಗಲೇ ಮುಂಡ್ಕೂರು ಭಾಗದಲ್ಲಿ ಜನ ಸಂಚರಿಸುತ್ತಿರುವ ಹಲವು ವಾಮ ಮಾರ್ಗಗಳ ಸಂಪರ್ಕ ಕಡಿತಗೊಳಿಸಲಾಗಿದ್ದು ಭದ್ರತೆಯ ದೃಷ್ಠಿಯಿಂದ ಉಳಿದ ಸಣ್ಣ ಅಡ್ಡ ರಸ್ತೆಗಳ ಸಂಪರ್ಕಗಳನ್ನೂ ಕಡಿತಗೊಳಿಸುವಂತೆ ತಿಳಿಸಿದರು.
ಪೊಸ್ರಾಲು -ಮುಕ್ಕಡಪ್ಪು ರಸ್ತೆಯ ಸಂಪರ್ಕ ಕಡಿತಗೊಳಿಸಿದ ಬಗ್ಗೆ ಸ್ಥಳೀಯರ ಆಕ್ಷೇಪವಿದ್ದ ಹಿನ್ನೆಲೆಯಲ್ಲಿ ಆ ಸ್ಥಳಕ್ಕೂ ಭೇಟಿ ನೀಡಿದ ಭರತ್ ರೆಡ್ಡಿ ಸಾಮಾಜಿಕ ಹಿತದೃಷ್ಠಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು ವೃದ್ಧರಿಗೆ ತೊಂದರೆಯಾದಲ್ಲಿ, ಅಗತ್ಯ ಬಿದ್ದಲ್ಲಿ ಸಹಕರಿಸುವುದಾಗಿ ತಿಳಿಸಿದರು.
ಮುಂಡ್ಕೂರು ಗ್ರಾಮ ಪಂಚಾಯತ್ ಪಿಡಿಒ ರವಿರಾಜ್, ಗ್ರಾಮಕರಣಿಕ ಸುಖೇಶ್,ಸಿಬ್ಬಂದಿ ಪುರುಷೋತ್ತಮ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ