ಉಪ್ಪೂರು: ಏಕಪವಿತ್ರ ನಾಗ ಮಂಡಲ ಸೇವೆ
Team Udayavani, Apr 4, 2019, 6:30 AM IST
ಬ್ರಹ್ಮಾವರ: ಉಪ್ಪೂರು ಕುದ್ರುಬೆಟ್ಟು ಶ್ರೀ ನಾಗ ಮೂಲಸ್ಥಾನದಲ್ಲಿ ಬುಧವಾರ ಏಕಪವಿತ್ರ ನಾಗ ಮಂಡಲ ಸೇವೆ ಜರಗಿತು.
ಬೆಳಗ್ಗೆ ಪ್ರಾಯಶ್ಚಿತ್ತಾದಿಗಳು, ಆಯುತ ಸಂಖ್ಯೆ, ತಿಲಯಾಗ, ಕೂಷ್ಮಾಂಡ ಹೋಮ, ಪವಮಾನ ಹೋಮ, ಉದ್ಯಾಪನಾ ಹೋಮ, ಅಷ್ಟೋತ್ತರ ಶತಕಲಶ, ಬ್ರಹ್ಮಕುಂಭ ಸ್ಥಾಪನಾ ಅಧಿವಾಸ ಹೋಮ, ಕಲಶಾಭಿಷೇಕ, ಪಂಚಾಮೃತ ಸಹಿತ ಸೀಯಾಳ ಅಭಿಷೇಕ, ಪ್ರಸನ್ನ ಪೂಜೆ, ಬಾಹ್ಮಣ ವಟು ಆರಾಧನೆ, ಆಚಾರ್ಯ ಪೂಜೆ, ದಂಪತಿ ಪೂಜೆ, ಸುವಾಸಿನಿ ಆರಾಧನೆ, ಕನ್ನಿಕಾ ಆರಾಧನೆ ನಡೆಯಿತು.
ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಮಂಗಳೂರು ಜೋಕಟ್ಟೆ ಶ್ರೀ ವಿಜಯ ವಿಠಲ ಭಜನಾ ಮಂಡಳಿ ಮತ್ತು ಸುರತ್ಕಲ್ ಗುಡ್ಡೆಕೊಪ್ಲ ಶ್ರೀ ರಾಮ ಭಜನಾ ಮಂಡಳಿ ಅವರಿಂದ ಕುಣಿತ ಭಜನೆ ಜರಗಿತು.
ಬಳಿಕ ನಾಗದೇವರಿಗೆ ಹಾಲಿಟ್ಟು ಸೇವೆ, ಪ್ರಸನ್ನ ಪೂಜೆ, ಏಕಪವಿತ್ರ ನಾಗ ಮಂಡಲ ಸೇವೆ, ಪ್ರಸಾದ ವಿತರಣೆ ನೆರವೇರಿತು.
ವೇ| ಮೂ| ಭಾಸ್ಕರ ಅಡಿಗ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಜರಗಿತು.
ನಾಗಮಂಡಲೋತ್ಸವ ಸಮಿತಿ ಗೌರವಾಧ್ಯಕ್ಷ ಶ್ರೀನಿವಾಸ ಜಿ. ಪದ್ಮಶಾಲಿ, ಅಧ್ಯಕ್ಷ ಗುರುರಾಜ್ ಜಿ. ಶೆಟ್ಟಿಗಾರ್, ಕಾರ್ಯದರ್ಶಿ ಬಿ. ಆನಂದ ಶೆಟ್ಟಿಗಾರ್, ಕೋಶಾಧಿಕಾರಿ ಬಿ.ಎಚ್. ಶೆಟ್ಟಿಗಾರ್, ಪದಾಧಿಕಾರಿಗಳು, ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ