ಪಲಿಮಾರು: ದ.ಕ. ಸಂಪರ್ಕ ರಸ್ತೆಗೆ ಹಾಕಿದ್ದ ಮಣ್ಣು ತೆರವು
Team Udayavani, Jun 2, 2020, 5:21 AM IST
ಪಡುಬಿದ್ರಿ: ಉಡುಪಿ ಜಿಲ್ಲೆ ಹಾಗೂ ದ.ಕ. ಜಿಲ್ಲೆಗಳಿಗೆ ಸಂಪರ್ಕವನ್ನು ಕಲ್ಪಿಸುತ್ತಿದ್ದ ಕರ್ನಿರೆ ಸೇತುವೆಯ ಉಡುಪಿ ಜಿಲ್ಲಾ ಭಾಗದಲ್ಲಿ ಲಾಕ್ಡೌನ್ ಆದಿಭಾಗದಲ್ಲಿ ಮಣ್ಣು ಹಾಕಿ ಕಲ್ಪಿಸಲಾಗಿದ್ದ ಅಡೆತಡೆಯನ್ನು ರವಿವಾರ ಕಾಪು ತಹಶೀಲ್ದಾರ್ ಮಹಮ್ಮದ್ ಐಸಾಕ್ ಸೂಚನೆ ಮೇರೆಗೆ ತೆರವುಗೊಳಿಸಲಾಗಿದೆ.
ಎ. 12ರಂದು ಪಲಿಮಾರಿನ ಶಾಂಭವಿ ನದಿ ಸೇತುವೆ ಸಂಪರ್ಕ ರಸ್ತೆಯ ಉಡುಪಿ ಜಿಲ್ಲೆಯ ಗಡಿ ಭಾಗದಲ್ಲಿ ಮಣ್ಣು ತುಂಬಿಸಿ ಹಾಗೂ ಸಿಮೆಂಟ್ ಬ್ಲಾಕ್ಗಳನ್ನು ಹಾಕಿ ಸೀಲ್ಡೌನ್ ಮಾಡಲಾಗಿತ್ತು. ಹಾಗಾಗಿ ಈ ಮಾರ್ಗವಾಗಿ ಸರಾಗವಾಗಿ ಸಾಗುತ್ತಿದ್ದ ವಾಹನಗಳ ಸಂಚಾರಕ್ಕೆ ತಡೆವೊಡ್ಡಲಾಗಿತ್ತು. ಅಗತ್ಯ ವಸ್ತುಗಳಿಗಾಗಿ ಪಲಿಮಾರನ್ನೇ ಆಶ್ರಯಿಸಿರಬೇಕಾಗಿದ್ದ ಬಳುRಂಜೆ, ಕರ್ನಿರೆ ಭಾಗದ ಜನ ಸಾಮಗ್ರಿಗಳನ್ನು ಕಳೆದ ಸುಮಾರು 50 ದಿನಗಳಿಂದ ಹೊತ್ತುಕೊಂಡೇ ಅತ್ತಿಂದಿತ್ತ ಸಾಗುವಂತಾಗಿತ್ತು.
ಪಲಿಮಾರು ಕರ್ನಿರೆ ರಸ್ತೆಯನ್ನು ಬೈಪಾಸ್ ಮಾಡಿಕೊಂಡು ಉಡುಪಿಯಿಂದ ಮಂಗಳೂರಿಗೆ ಮತ್ತು ಮಂಗಳೂರಿನಿಂದ ನಮ್ಮ ಜಿಲ್ಲೆಗೆ ಇದೇ ದಾರಿಯಾಗಿ ವಾಹನಗಳು ಬರುತ್ತಿರುತ್ತವೆ.
ಇದರಲ್ಲಿ ಕ್ವಾರೆಂಟೆನ್ ತಪ್ಪಿಸಲು ಪ್ರಯತ್ನಿ ಸುವವರೂ ಲಾಭ ಪಡೆದು ಕೊಳ್ಳುತ್ತಿದ್ದರು. ಹಾಗಾಗಿ ಪರಿಸ್ಥಿತಿಯನ್ನು ಪರಾಮರ್ಶಿಸಿ ಈ ಸೇತುವೆಗೆ ಅಡ್ಡ ಹಾಕಲಾಗಿದ್ದ ಮಣ್ಣಿನ ರಾಶಿಯನ್ನು ತೆಗೆಯಲು ನಿರ್ಧರಿಸಲಾಗುತ್ತದೆ ಎಂದು ಕಾಪು ತಹಶೀಲ್ದಾರ್ ಮಹಮ್ಮದ್ಐಸಾಕ್ ಈ ಹಿಂದೆ ಹೇಳಿದ್ದರು. ಇಂದು ಈ ಕುರಿತಾಗಿ ಅವರನ್ನು ಪ್ರಶ್ನಿಸಿದಾಗ ತೆರವುಗೊಳಿಸಲು ಇಂದು ಮುಂಜಾನೆಯೇ ಪಲಿಮಾರು ಗ್ರಾ. ಪಂ. ಗ್ರಾಮ ಲೆಕ್ಕಿಗರಿಗೆ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ. ಅದರಂತೆ ಅಲ್ಲಿ ರಸ್ತೆಗೆ ಅಡ್ಡವಾಗಿ ಹಾಕಲಾಗಿದ್ದ ಮಣ್ಣಿನ ರಾಶಿ, ಸಿಮೆಂಟ್ ಬ್ಲಾಕ್ಗಳನ್ನು ಪಲಿಮಾರು ಗ್ರಾ. ಪಂಚಾಯತ್ ಅದ್ಯಕ್ಷ ಜಿತೇಂದ್ರ ಫುರ್ಟಾಡೋ ಸುಪರ್ದಿಯಲ್ಲಿ ತೆರವುಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ