ಬಲೆಗೆ ಬೀಳುತ್ತಿದೆ ಟನ್ಗಟ್ಟಲೆ ಕಾರ್ಗಿಲ್ ಮೀನು
ತಿನ್ನಲು ಯೋಗ್ಯವಲ್ಲದ ಕಾರಣ ಫಿಶ್ಮೀಲ್ಗಳಿಗೆ ಕಡಿಮೆ ಬೆಲೆಗೆ ಮಾರಾಟ
Team Udayavani, Oct 1, 2020, 4:04 AM IST
ಮಲ್ಪೆ: ಕಳೆದ ಋತುವಿನಲ್ಲಿ ಭಾರೀ ಸುದ್ದಿ ಮಾಡಿದ ಕಾರ್ಗಿಲ್ ಮೀನುಗಳು ಈ ಸಲವೂ ಭಾರೀ ಪ್ರಮಾಣದಲ್ಲಿ ಮೀನುಗಾರರ ಬಲೆಗೆ ಬಿದ್ದಿವೆ. ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟುಗಳಿಗೆ ಅಪಾರ ಪ್ರಮಾಣದಲ್ಲಿ ಕಾರ್ಗಿಲ್ ಮೀನು ಗಳು ಬಲೆಗೆ ಬೀಳುತ್ತಿವೆ. ಇವುಗಳು ತಿನ್ನಲು ಯೋಗ್ಯವಿಲ್ಲದ್ದರಿಂದ ಫಿಶ್ಮೀಲ್ಗೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ.
10 ರಿಂದ 40 ಟನ್ ಮೀನು
ಪ್ರಸ್ತುತ ಮಲ್ಪೆ ಬಂದರಿನಲ್ಲಿ ಇದು ಕೆ.ಜಿ.ಗೆ 15 ರೂ.ಗೆ ಮಾರಾಟವಾಗುತ್ತಿವೆ. ಬೋಟುಗಳಿಗೆ 10ರಿಂದ 40 ಟನ್ಗಳಷ್ಟು ಮೀನುಗಳು ದೊರೆಯುತ್ತಿವೆ. ಒಂದೆರಡು ಬೋಟಿಗೆ 70 ಟನ್ ದೊರೆತಿದ್ದೂ ಇದೆ. ವಿಪರೀತ ವಾಸನೆ ಹೊಂದಿರುವ ಕಪ್ಪು ಬಣ್ಣದ ಮೀನನ್ನು ಬೇರೆ ಮೀನುಗಳ ಜತೆ ಸೇರಿಸಿದರೆ ಅದರ ಬಣ್ಣ ಮತ್ತು ರುಚಿಯನ್ನು ಕಳೆದುಕೊಳ್ಳುತ್ತದೆ. ವಾರದ ಹಿಂದೆ ಅರಬೀ ಸಮುದ್ರದಲ್ಲಿ ಗಾಳಿಯ ರಭಸ ಹೆಚ್ಚಾಗಿತ್ತು. ಹೀಗಾಗಿ ಲಕ್ಷ ದ್ವೀಪಗಳಲ್ಲಿರುವ ಕಾರ್ಗಿಲ್ ಮೀನುಗಳು ಉತ್ತರ ದಿಕ್ಕಿನತ್ತ ಚಲಿಸಿರುವುದರಿಂದ ಇವು ಹೆಚ್ಚು ಲಭ್ಯವಾಗಲು ಕಾರಣ ಎನ್ನಲಾಗಿದೆ.
ಹವಳ ಬಂಡೆಯಡಿ ಇವುಗಳ ವಾಸ
ಈ ಮೀನಿನ ವೈಜ್ಞಾನಿಕ ಹೆಸರು ಒಡನಸ್ ನಿಗರ್, 1999ರ ಕಾರ್ಗಿಲ್ ಯುದ್ದದ ಸಮಯದಲ್ಲಿ ಹೊಸದಾಗಿ ಕಾಣಸಿಕ್ಕಿದ್ದರಿಂದ ಸ್ಥಳೀಯವಾಗಿ “ಕಾರ್ಗಿಲ್’ ಎಂದು ಕರೆಯುತ್ತಾರೆ. ಇವುಗಳು ಸಮುದ್ರದಲ್ಲಿ 30ರಿಂದ 40 ಮೀ. ಆಳದಲ್ಲಿರುವ ಹವಳದ ಬಂಡೆಯಡಿ ವಾಸವಾಗಿದ್ದು ಅಲ್ಲಿಯೇ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ನಡೆಸುತ್ತವೆ. ಹವಳದ ಬಂಡೆಗಳು ಮಹಾರಾಷ್ಟ್ರ, ಗೋವಾ, ಗುಜರಾತ್, ಕೇರಳ, ಲಕ್ಷದ್ವೀಪ ಮತ್ತು ಕರ್ನಾಟಕ ಭಾಗದ ಸಮುದ್ರದಲ್ಲೂ ಕಂಡುಬರುತ್ತದೆ.
ಆಹಾರ ಅರಸುತ್ತ ಬರುವ ಮೀನುಗಳು
ಜೂಪ್ಲಾನ್ಟನ್ ಎನ್ನುವ ಸೂಕ್ಷ್ಮ ಸಮುದ್ರ ಜೀವಿ ಇದರ ಮುಖ್ಯ ಆಹಾರ. ಬಂಗುಡೆ, ಬೂತಾಯಿ ಮೀನುಗಳು ಕೂಡ ಈ ಆಹಾರವನ್ನೇ ಸೇವಿಸುತ್ತವೆ. ಆದರೆ ಇದೀಗ ಸಮುದ್ರದಲ್ಲಿ ಬಂಗುಡೆ, ಬೂತಾಯಿ ಮೀನುಗಳ ಸಂಖ್ಯೆ ತೀರ ಇಳಿಮುಖವಾಗಿದ್ದರಿಂದ ಅವುಗಳ ಆಹಾರ ಕಾರ್ಗಿಲ್ ಮೀನಿನ ಪಾಲಾಗುತ್ತಿದ್ದು ದೊಡ್ಡ ಪ್ರಮಾಣದಲ್ಲಿ ಗುಂಪಾಗಿ ಆಹಾರವನ್ನು
ಅರಸುತ್ತ ಬರುತ್ತವೆ.
-ಡಾ| ಶಿವಕುಮಾರ್ ಹರಗಿ, ಸಹಾಯಕ ಪ್ರೊಫೆಸರ್, ಕಡಲಶಾಸ್ತ್ರ ವಿಭಾಗ, ಕಾರವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?