ಉಡುಪಿ: ಅಟಲ್ ಉತ್ಸವದಲ್ಲಿ “ವಿಜಯ’ ಗಾನದುಂದುಭಿ
ಗಾಯಕರ ಹಾಡಿಗೆ ಮನಸೋತ ಪ್ರೇಕ್ಷಕರು ವೇದಿಕೆಯ ಎದುರಿಗೆ ಬಂದು ಕುಣಿಯಲು ಆರಂಭಿಸಿದರು
Team Udayavani, Dec 27, 2022, 9:45 AM IST
ಉಡುಪಿ: ಅಟಲ್ ಉತ್ಸವದ ಪ್ರಯುಕ್ತ ಎಂಜಿಎಂ ಕ್ರೀಡಾಂಗಣದಲ್ಲಿ ರವಿವಾರದ ನಡೆದ ಬೂತ್ ಸಂಗಮದ ಬಳಿಕ ಗಾಯಕ ವಿಜಯ್ ಪ್ರಕಾಶ್ ಅವರ ಹಾಡುಗಳ ಕಾರ್ಯಕ್ರಮ “ವಿಜಯ’ ಗಾನದುಂದುಭಿ ರಂಜಿಸಿತು.
ಸೂಪರ್ ಹಿಟ್ ಪ್ರದರ್ಶನ ಕಂಡ ಕಾಂತಾರ ಸಿನೆಮಾದ ಸಿಂಗಾರ ಸಿರಿಯೇ ಹಾಡು…ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಸಿನೆಮಾದ ನೀನೇ ರಾಜಕುಮಾರ ಹಾಡುಗಳು ಜನರನ್ನು ಭಾವಪರವಶಗೊಳಿಸಿದವು. ಗಾಯಕಿ ಅನುರಾಧಾ ಭಟ್ ಸಾಥ್ ನೀಡಿದರು.
ಅಭಿಮಾನಿಗಳ ಸಂಭ್ರಮ ಗಾಯಕರ ಹಾಡಿಗೆ ಮನಸೋತ ಪ್ರೇಕ್ಷಕರು ವೇದಿಕೆಯ ಎದುರಿಗೆ ಬಂದು ಕುಣಿಯಲು ಆರಂಭಿಸಿದರು. ರವಿವಾರವಾದ ಕಾರಣ ಪ್ರೇಕ್ಷಕರ ಸಂಖ್ಯೆ ಅಧಿಕವಾಗಿತ್ತು. ವಿಜಯ ಪ್ರಕಾಶ್ ಅವರನ್ನು ಸಮ್ಮಾನಿಸಲಾಯಿತು.
ಶಾಸಕರಿಂದ “ಪ್ರೇಮದಕಾಣಿಕೆ’ ಹಾಡು
ರಸಮಂಜರಿಯಲ್ಲಿ ಶಾಸಕ ಕೆ. ರಘುಪತಿ ಭಟ್ ಮತ್ತು ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಅವರು ವಿಜಯ ಪ್ರಕಾಶ್ ಅವರೊಂದಿಗೆ ಡಾ| ರಾಜ್ಕುಮಾರ್ ನಟನೆಯ ಪ್ರೇಮದ ಕಾಣಿಕೆ ಸಿನೆಮಾದ “ಬಾನಿಗೊಂದು ಎಲ್ಲೆ ಎಲ್ಲಿದೆ…’ ಹಾಡಿಗೆ ದನಿಗೂಡಿಸಿದರು. ಪ್ರೇಕ್ಷಕರಿಂದ ಕರತಾಡನ ಮೊಳಗಿತು. ಮೈಕ್ ಹಿಡಿದು ಬಹಳಷ್ಟು ಭಾಷಣ ಮಾಡಿದ್ದೇನೆ. ಆದರೆ ಹಾಡಿರುವುದು ಇದೇ ಮೊದಲು ಎಂದು ಶಾಸಕರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?