ಬಸ್ರೂರು: ಇನ್ನೂ ಉದ್ಘಾಟನೆಯಾಗದ ಹಟ್ಟಿಕುದ್ರು ಸೇತುವೆ
ಪ್ರಸ್ತುತ ಸೇತುವೆಯ ಮೇಲೆ ವಾಹನಗಳು ಸರಾಗವಾಗಿ ಚಲಿಸುತ್ತವೆ
Team Udayavani, Jan 17, 2023, 4:25 PM IST
ಬಸ್ರೂರು: ಸರಿ ಸುಮಾರು 7 ದಶಕಗಳ ಬೇಡಿಕೆಯಾಗಿದ್ದ ಹಟ್ಟಿಕುದ್ರು ಸೇತುವೆ ಕಾಮಗಾರಿ ಪೂರ್ಣಗೊಂಡು ಹಲವು ಸಮಯಗಳೇ ಕಳೆದರೂ, ಇನ್ನೂ ಸೇತುವೆ ಉದ್ಘಾಟನೆಗೆ ಮಾತ್ರ ಕಾಲ ಕೂಡಿ ಬಂದಂತಿಲ್ಲ. ಮಾಜಿ ಸಭಾಪತಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿಯವರ ಶಿಫಾರಸಿನ ಮೇರೆಗೆ 14.59 ಕೋ.ರೂ. ಮಂಜೂರಾಗಿ, ಕಾಮಗಾರಿಯೂ ಪೂರ್ಣಗೊಂಡಿದೆ.
320 ಮೀ. ಉದ್ದದ 18 ಪಿಲ್ಲರ್ಗಳು ಹಾಗೂ ಎರಡೂ ಕಡೆ ಅಪಾರ್ಟ್ಮೆಂಟ್ಗಳು ಸೇರಿದಂತೆ ಸೇತುವೆಯ ಮೇಲ್ಭಾಗದ ಕಾಮಗಾರಿಯೂ ಈಗ ಮುಗಿದಿದೆ. ಆದರೆ ಸ್ಥಳೀಯರ ಕೆಲವೊಂದು ಸಣ್ಣ ಬೇಡಿಕೆಗಳು ಮಾತ್ರ ಉಳಿದುಕೊಂಡಿದೆ.
ಪ್ರಸ್ತುತ ಸೇತುವೆಯ ಮೇಲೆ ವಾಹನಗಳು ಸರಾಗವಾಗಿ ಚಲಿಸುತ್ತವೆ. ಹಟ್ಟಿಕುದ್ರು ದ್ವೀಪವಾಸಿಗಳ ಹಲವು ವರ್ಷಗಳ ಕನಸು ನನಸಾದ ಕಾರಣ ಈ ಸೇತುವೆಯನ್ನು ಉದ್ಘಾಟಿಸಬೇಕೆಂಬ ಮಾತುಗಳು ಕೇಳಿ ಬರುತ್ತಿತ್ತು. ಬಸ್ರೂರು ಮಂಡಿಕೇರಿಯ ತುದಿಯಲ್ಲಿ ಸ್ವಲ್ಪ ಜಾಗದಲ್ಲಿ ಮಣ್ಣನ್ನು ತುಂಬಿಸುವ ಮತ್ತಿತರ ಸಣ್ಣ ಪುಟ್ಟ ಕಾರ್ಯಗಳಷ್ಟೆ ನಡೆಯಬೇಕಾಗಿದೆ. ಇವೆಲ್ಲದರ ನಡುವೆ ಹಟ್ಟಿಕುದ್ರು ಸೇತುವೆಯ ಉದ್ಘಾಟನೆ ಯಾವಾಗ? ಎಂಬ ಪ್ರಶ್ನೆಗೆ ಯಾರಿಂದಲೂ ಉತ್ತರ ಸಿಗುತ್ತಿಲ್ಲ.
ಶೀಘ್ರದಲ್ಲಿ ಉದ್ಘಾಟನೆ
ಕೆಲವೊಂದು ಸಣ್ಣ- ಪುಟ್ಟ ಕಾರ್ಯಗಳು ಬಾಕಿಯಿದ್ದು ಆದಷ್ಟು ಶೀಘ್ರ ಹಟ್ಟಿಕುದ್ರು ಸೇತುವೆಯ ಉದ್ಘಾಟನೆಯನ್ನು ನೆರವೇರಿಸಲಾಗುವುದು.
ಬಿ. ರಾಮ್ ಕಿಶನ್ ಹೆಗ್ಡೆ,
ತಾ.ಪಂ. ಮಾಜಿ ಉಪಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapur: ಕುಸಿದು ಬಿದ್ದು ಸಾವು
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ
MUST WATCH
ಹೊಸ ಸೇರ್ಪಡೆ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ