ಅಂಗವಿಕಲ ಪುನರ್ವಸತಿ ಕಾರ್ಯಕರ್ತರ ಮಾಸಿಕ ಗೌರವ ಧನಕ್ಕೆ ಕೋವಿಡ್ ಕಾಟ


Team Udayavani, Oct 19, 2020, 6:02 AM IST

ಅಂಗವಿಕಲ ಪುನರ್ವಸತಿ ಕಾರ್ಯಕರ್ತರ ಮಾಸಿಕ ಗೌರವ ಧನಕ್ಕೆ ಕೋವಿಡ್ ಕಾಟ

ಸಾಂದರ್ಭಿಕ ಚಿತ್ರ

ಕುಂದಾಪುರ: ರಾಜ್ಯದ ಪ್ರತಿ ಗ್ರಾಮ ಪಂ.ಗಳಲ್ಲಿರುವ ಅಂಗವಿಕಲ ಪುನರ್ವಸತಿ ಕಾರ್ಯಕರ್ತರು, ತಾಲೂಕು ಪುನರ್ವಸತಿ ಕಾರ್ಯಕರ್ತರು, ನಗರ ಪುನರ್ವಸತಿ ಕಾರ್ಯಕರ್ತರ ಮಾಸಿಕ ಗೌರವಧನ ಕೈ ಸೇರದೇ 6 ತಿಂಗಳಾದವು. ಕೋವಿಡ್ ಲಾಕ್‌ಡೌನ್‌ ಘೋಷಣೆ ಯಾದಂದಿನಿಂದ ಈವರೆಗೆ ಇವರಿಗೆ ಗೌರವಧನ ಬಂದಿಲ್ಲ. ಹೀಗೆ ಪುನರ್ವಸತಿ ಕಾರ್ಯಕರ್ತರಾಗಿರುವವರು ಕೂಡ ಅಂಗವಿಕಲರು ಎನ್ನುವುದು ಗಮನಾರ್ಹ. ಅಂತೆಯೇ ಹಿರಿಯ ನಾಗರಿಕರ ಹೆಲ್ಪ್ಲೈನ್‌ನ ಕಾರ್ಯಕರ್ತರಿಗೆ ಒಂದು ವರ್ಷದಿಂದ ವೇತನ ಬಿಡುಗಡೆಯಾಗಿಲ್ಲ.

ಎಷ್ಟು ಜನ
ರಾಜ್ಯದಲ್ಲಿ 6,022 ಗ್ರಾ. ಪಂ.ಗಳಲ್ಲಿ ಗ್ರಾಮ ಪುನರ್ವಸತಿ ಕಾರ್ಯ ಕರ್ತರು, 613 ಪುರಸಭೆ, ನಗರ ಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಗರ ಪುನರ್ವಸತಿ ಕಾರ್ಯಕರ್ತರು, 176 ತಾಲೂಕುಗಳಲ್ಲಿ ಬಹುವಿಧ ಪುನರ್ವಸತಿ ಕಾರ್ಯಕರ್ತರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಪಂಚಾಯತ್‌ಗಳು ಹಾಗೂ ತಾಲೂಕುಗಳ ಸಂಖ್ಯೆ ಹೆಚ್ಚಾಗಿದ್ದು 224 ತಾಲೂಕುಗಳಲ್ಲಿ ಹೆಚ್ಚುವರಿ ಯಾದ ಪಂಚಾಯತ್‌ಗಳಲ್ಲೂ ಕಾರ್ಯಕರ್ತರಿದ್ದಾರೆ.

ಸೌಕರ್ಯ
ಕಾರ್ಯಕರ್ತರಿಗೆ ಗೌರವಧನದ ಜತೆ ಓಡಾಟದ ಖರ್ಚನ್ನು ಪಂಚಾಯತ್‌ ಇದೇ ಮೀಸಲು ನಿಧಿ ಮೂಲಕ ಭರಿಸುತ್ತದೆ. ಶಾಸಕರು, ಸಂಸದರು, ವಿಧಾನಪರಿಷತ್‌ ಸದಸ್ಯರ ನಿಧಿ ಮೂಲಕ ಇವರಿಗೆ ಓಡಾಟಕ್ಕೆ ತ್ರಿಚಕ್ರ ವಾಹನ ಕೊಡಿಸ ಲಾಗುತ್ತದೆ. ಪ್ರತಿ ಗ್ರಾಮ ಪಂಚಾಯತ್‌ಗಳಲ್ಲಿ ಇವರಿಗೆ ಕಚೇರಿ ಸೌಲಭ್ಯ ನೀಡಬೇಕು, ತಾಲೂಕು ಮಟ್ಟವಾದರೆ ಸಂಪನ್ಮೂಲ ಕೇಂದ್ರ, ಕಚೇರಿ ನೀಡಬೇಕು ಎಂದು ನಿಯಮ ಇದೆ.

ಸಮೀಕ್ಷೆ
21 ವಿಧದ ಅಂಗವಿಕಲರ ಸಮೀಕ್ಷೆ ನಡೆಸಲಾಗಿದೆ. ದ್ವಿಪ್ರತಿ ದಾಖಲಾಗಿ ಮಾಸಾಶನ ಎರಡು ಬಾರಿ ಹೋಗುವ ಕಾರಣದಿಂದ ಈಗ ಸ್ಮಾರ್ಟ್‌ ಕಾರ್ಡ್‌ ನೀಡಲಾಗುತ್ತಿದೆ. 2011ರ ಗಣತಿಯಂತೆ ರಾಜ್ಯದಲ್ಲಿ 13.24 ಲಕ್ಷ ಜನ ಅಂಗವಿಕಲರಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 15 ಸಾವಿರ ಜನ ಅಂಗವಿಕಲರು ಇದ್ದು 7,481 ಜನ ಸ್ಮಾರ್ಟ್‌ ಕಾರ್ಡ್‌ಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಕುಂದಾಪುರದ 3,482 ಜನ ಅರ್ಜಿ ಸಲ್ಲಿಸಿದ್ದು 1,021 ಜನರಿಗೆ ಕಾರ್ಡ್‌ ನೀಡಲಾಗಿದೆ.

ಹಿರಿಯ ನಾಗರಿಕರ ಪ್ರತಿನಿಧಿ
ಹಿರಿಯ ನಾಗರಿಕರ ಹೆಲ್ಪ್ಲೈನ್‌ನ ಕಾರ್ಯಕರ್ತರಿಗೆ ಕಳೆದ 1 ವರ್ಷದಿಂದ ವೇತನ ಬಿಡುಗಡೆಯಾಗಿಲ್ಲ. ಉಡುಪಿ ಜಿಲ್ಲೆಯಲ್ಲಿ ನಾಲ್ವರಿದ್ದಾರೆ.

ಎಷ್ಟು ವೇತನ
ಗ್ರಾಮಗಳಲ್ಲಿ ಕಾರ್ಯ ನಿರ್ವಹಿಸು ವವರಿಗೆ ಈ ಮೊದಲು ಮಾಸಿಕ 750 ರೂ. ಗೌರವಧನ ನೀಡಲಾಗುತ್ತಿತ್ತು. 2017-18ರಲ್ಲಿ ಅದು 2 ಸಾವಿರ ರೂ. ಇದ್ದುದು 3 ಸಾವಿರ ರೂ.ವರೆಗೆ ಏರಿಕೆಯಾಯಿತು. ಈ ವರ್ಷ ಫೆ.12ಕ್ಕೆ ಹೊಸ ಆದೇಶ ಬಂದು ಮಾರ್ಚ್‌ನಿಂದ 6 ಸಾವಿರ ರೂ.ಗಳಂತೆ ಸಂಭಾವನೆ ಏರಿಕೆಯಾಗಿದೆ. ಇದೇ ಮಾದರಿಯಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಕಾಯನಿರ್ವಹಿಸುವ ಬಹುವಿಧ ಕಾರ್ಯಕರ್ತರಿಗೆ ಮಾಸಿಕ 12 ಸಾವಿರ ರೂ. ಗೌರವಧನ ಇದೆ. ಮಾರ್ಚ್‌ನಲ್ಲಿ ಕೊರೊನಾ ಲಾಕ್‌ಡೌನ್‌ ಘೋಷಣೆಯಾದಲ್ಲಿಂದಲೇ ಈ ವೇತನ ಹಳ್ಳಿ ಹಳ್ಳಿಗಳಲ್ಲಿರುವ ಅಂಗವಿಕಲರ ಕೈ ಸೇರಿಲ್ಲ. ಲಭ್ಯ ಮಾಹಿತಿ ಪ್ರಕಾರ ಮೂರು ತಿಂಗಳ ವೇತನ ಮಂಜೂರಾಗಿದ್ದು ಇನ್ನುಳಿದ ಮೂರು ತಿಂಗಳ ವೇತನಾನುದಾನಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

1 ವಾರದಲ್ಲಿ ಲಭ್ಯ
ಮಾರ್ಚ್‌ನಿಂದ ಜೂನ್‌ವರೆಗಿನ ಗೌರವಧನ ಪಾವತಿಗೆ ಅನುದಾನ ಬಿಡುಗಡೆಯಾಗಿದ್ದು 1 ವಾರದಲ್ಲಿ ಪಂಚಾಯತ್‌ ಹಾಗೂ ತಾಲೂಕು ಕಾರ್ಯಕರ್ತರಿಗೆ ದೊರೆಯಲಿದೆ. ಅದರ ಅನಂತರದ ಗೌರವಧನಕ್ಕೆ ಬೇಡಿಕೆ ಸಲ್ಲಿಸಲಾಗಿದೆ.
ರತ್ನಾ, ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆ ಅಧಿಕಾರಿ, ಉಡುಪಿ

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.