ಕುಂದಾಪುರ: ಮದುವೆಯಾಗುವುದಾಗಿ ನಂಬಿಸಿ ವಂಚನೆ; ದೂರು
Team Udayavani, Sep 22, 2022, 6:23 PM IST
ಕುಂದಾಪುರ: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ವಂಚಿಸಿರುವುದಾಗಿ ಶಿರಿಯಾರ ಗ್ರಾಮದ ಹರ್ಷ ಎಂಬಾತನ ವಿರುದ್ಧ ಕಾಳಾವರ ಗ್ರಾಮದ ಸುಣ್ಣಾರಿಯ ಯುವತಿಯೊಬ್ಬರು ದೂರು ನೀಡಿದ್ದಾರೆ.
8 ವರ್ಷದ ಹಿಂದೆ ಪರಿಚಯ ಆಗಿದ್ದು, ಪರಸ್ಪರ ಪ್ರೀತಿಸುತ್ತಿದ್ದೇವು. ಮದುವೆಯಾಗುವುದಾಗಿ ನಂಬಿಸಿ, ಕೆಲ ಕಡೆ ಸುತ್ತಾಡಿಸಿದ್ದು, ಈಗ ಮದುವೆ ನಿರಾಕರಿಸಿ, ವಂಚಿಸಿರುವುದಾಗಿ ಯುವತಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.