ಕೋಟ: ಪ್ರೇಮ ವೈಫಲ್ಯ; ಗೆಳತಿಗೆ ಹಲ್ಲೆಗೈದು ಆತ್ಮಹತ್ಯೆಗೆ ಶರಣಾದ ಯುವಕ
Team Udayavani, Dec 30, 2021, 11:30 AM IST
ಕೋಟ : ಪ್ರೇಮ ವೈಫಲ್ಯದಿಂದ ಮನನೊಂದು ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಶಿರಿಯಾರ ಸಮೀಪ ಹೆಸ್ಕಾತ್ತೂರಿನಲ್ಲಿ ಡಿ. 29ರಂದು ಸಂಭವಿಸಿದೆ.
ಸ್ಥಳೀಯ ಯುವಕ, ರಿಕ್ಷಾ ಚಾಲಕ ರಾಘವೇಂದ್ರ ಕುಲಾಲ್ (35) ಆತ್ಮಹತ್ಯೆಗೆ ಶರಣಾದ ಯುವಕ. ಆತ ಸ್ಥಳೀಯ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದು, ಆ ಪ್ರೇಮ ವೈಫಲ್ಯಗೊಂಡಿದ್ದರಿಂದ ಮನನೊಂದಿದ್ದನು.
ಬುಧವಾರ ಯುವತಿಯ ಮೇಲೂ ಮರಣಾಂತಿಕ ಹಲ್ಲೆ ನಡೆಸಿದ್ದು, ಯುವತಿ ಅದೃಷ್ಟವಶಾತ್ ಹೆಚ್ಚಿನ ಅಪಾಯವಿಲ್ಲದೆ ಪಾರಾಗಿದ್ದಾಳೆ. ಅನಂತರ ಮನೆಗೆ ತೆರಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಯ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.