ಕುಂದಾಪುರ: ಫೋರ್ಜರಿ ಮಾಡಿ ಬ್ಯಾಂಕಿಗೆ ವಂಚನೆ: ದೂರು
Team Udayavani, Feb 25, 2023, 5:30 AM IST
ಕುಂದಾಪುರ: ಇಲ್ಲಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಕುಂದಾಪುರ ಇಲ್ಲಿ 10 ಲಕ್ಷ ರೂ. ಸಾಲ ಪಡೆದು, ಬಳಿಕ ಮರು ಪಾವತಿಸದೇ, ಅನಂತರ ಸಾಲ ಚುಕ್ತಾ ದೃಢೀಕರಣ ಪತ್ರವನ್ನು ಫೋರ್ಜರಿ ಮಾಡಿಸಿ ಸಾಲ ಸಂದಾಯ ಮಾಡಿದ್ದೇವೆಂದು ವಂಚಿಸಿರುವುದಾಗಿ ರತ್ನಾ ಮೋಗೇರ್ತಿ, ಚೈತ್ರಾ, ಮೇಘನಾ, ಪ್ರಜ್ವಲ್ ಹಾಗೂ ಉದಯ ಅವರ ವಿರುದ್ಧ ಶಾಖಾಧಿಕಾರಿ ಪದ್ಮಾ ವಿ. ಶೆಟ್ಟಿ ದೂರು ನೀಡಿದ್ದಾರೆ.
ಅದರಂತೆ ಈ ಐವರ ವಿರುದ್ಧ ಕುಂದಾಪುರ ಠಾಣೆಯಲ್ಲಿ ಮೋಸ ಹಾಗೂ ವಂಚನೆ ಮಾಡಿರುವುದಾಗಿ ಪ್ರಕರಣ ದಾಖಲಾಗಿದೆ.