Kundapura ಜುಗಾರಿ ಅಡ್ಡೆಗೆ ದಾಳಿ; 5 ಮಂದಿ ಬಂಧನ
Team Udayavani, Aug 18, 2023, 6:16 PM IST
ಕುಂದಾಪುರ: ಕೋಟೇಶ್ವರ ಗ್ರಾಮದ ಅಂಕದಕಟ್ಟೆ ಗೋಪಲಾಡಿ ರಸ್ತೆಯ ಬಳಿ ಹಾಡಿಯಲ್ಲಿ ಅಂದರ್ ಬಾಹರ್ ಜುಗಾರಿ ಅಡ್ಡೆಗೆ ಪ್ರೊಬೆಷನರಿ ಡಿವೈಎಸ್ಪಿ ರವಿ ದಾಳಿ ನಡೆಸಿದ್ದಾರೆ.
ಜೂಜಾಟ ಆಡುತ್ತಿದ್ದ ದಯಾನಂದ ಶೆಟ್ಟಿ(47), ಸಂದೀಪ (37), ಗಣಪತಿ ಆಚಾರ್ (45), ಅಜಯ ಖಾರ್ವಿ (29), ಚಂದ್ರಶೇಖರ (43) ಅವರನ್ನು ವಶಕ್ಕೆ ಪಡೆದು ಸೊತ್ತು ಹಾಗೂ ನಗದನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.ಪ್ರಕರಣ ದಾಖಲಾಗಿದೆ.