ಲಾಕ್ಡೌನ್: ಸೌಪರ್ಣಿಕಾ ನದಿ ನೀರು ಮಲಿನ ಮುಕ್ತ
Team Udayavani, Apr 28, 2020, 5:06 AM IST
ಕೊಲ್ಲೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಕೊಲ್ಲೂರಿನಲ್ಲಿ ಹರಿಯುತ್ತಿರುವ ಸೌಪರ್ಣಿಕಾ ಹಾಗೂ ಕಾಶಿ ಹೊಳೆ ನೀರು ಸಂಪೂರ್ಣ ನಿರ್ಮಲವಾಗಿದ್ದು ಮಲಿನವಿಲ್ಲದೆ ಹರಿಯುತ್ತಿದೆ.
ಸೌಪರ್ಣಿಕಾ ಸ್ನಾನಘಟ್ಟದಲ್ಲಿ ಸ್ನಾನ ಮಾಡಿ ಮೂಕಾಂಬಿಕೆಯ ದರ್ಶನ ಮಾಡಿದರೆ ಚರ್ಮ ರೋಗ ಸಹಿತ ಇನ್ನಿತರ ರೋಗ ರುಜಿನಗಳು ಮಾಯವಾಗಿ ಭಕ್ತರು ಸ್ವಸ್ಥರಾಗುತ್ತಾರೆ ಎಂಬಷ್ಟರ ಮಟ್ಟಿಗೆ ಇರುವ ನಂಬಿಕೆಯಿಂದ ಜನರು ಹಾಗೆಯೇ ಮಾಡುತ್ತಿದ್ದರು. ಆದರೆ ಈಗ ನಿರ್ಬಂಧ ಇರುವುದರಿಂದ ಭಕ್ತರು ಬರುವಂತಿಲ್ಲ.
ತ್ಯಾಜ್ಯ ಇಳಿಕೆ
ಇಲ್ಲಿನ ಖಾಸಗಿ ವಸತಿಗೃಹ ಸಹಿತ ಕ್ಷೇತ್ರಕ್ಕೆ ಆಗಮಿಸುತ್ತಿರುವ ಭಕ್ತರು ಎಸೆಯುವ ಪ್ಲಾಸ್ಟಿಕ್ ಬಾಟಲಿ ಸಹಿತ ತ್ಯಾಜ್ಯ ನೀರು ನೇರವಾಗಿ ನದಿ ಸೇರುತ್ತದೆ. ವಸತಿ ಗೃಹಗಳ ಶೌಚಾಲಯದ ನೀರು ಕೂಡ ಸೌಪರ್ಣಿಕಾ ನದಿ ಸೇರುತ್ತಿರುವುದು ದುರ್ಗಂಧಯುತ ಕೊಳಚೆ ನೀರಾಗಿ ಮಾರ್ಪಾಡಾಗಲು ಕಾರಣವಾಗಿದೆ. ಈಗ ಯಾವುದೇ ತ್ಯಾಜ್ಯ ನೀರು ನದಿ ಸೇರುತ್ತಿಲ್ಲ.
ಸ್ವತ್ಛತೆಗೆ ಹೆಚ್ಚಿನ ಆದ್ಯತೆ
ಕೊಲ್ಲೂರು ಕ್ಷೇತ್ರದ ತೀರ್ಥಸ್ನಾನ ಘಟ್ಟದ ನದಿ ನೀರು ಶುದ್ದವಾಗಿದ್ದು, ಮುಂದೆಯೂ ಇದನ್ನು ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾ.ಪಂ. ಸಹಕಾರದೊಡನೆ ಕೊಲ್ಲೂರು ಕ್ಷೇತ್ರ ಪರಿಸರದಲ್ಲಿ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
-ಅರವಿಂದ ಎ.ಸುತಗುಂಡಿ,
ಕಾರ್ಯನಿರ್ವಹಣಾ ಧಿಕಾರಿ,ಶ್ರೀ ಕ್ಷೇತ್ರ ಕೊಲ್ಲೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ