ಇದುವರೆಗೂ ದೊರೆಯದ ಶಾಶ್ವತ ಪರಿಹಾರ

ಕುಂದಾಪುರ: ಮದ್ದುಗುಡ್ಡೆ ವಾರ್ಡ್‌- ಉಪ್ಪು ನೀರಿನ ಸಮಸ್ಯೆ

Team Udayavani, Sep 12, 2022, 12:27 PM IST

7

ಕುಂದಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯ ಮದ್ದುಗುಡ್ಡೆ ವಾರ್ಡ್‌ನಲ್ಲಿ ಉಪ್ಪುನೀರು ಹರಿದು ಬರುವ ಸಮಸ್ಯೆಗೆ ಶಾಶ್ವತ ಪರಿಹಾರ ಇನ್ನೂ ದೊರೆತಿಲ್ಲ. ಜನರ ಸಮಸ್ಯೆಗೆ ಪುರಸಭೆಯೇನೋ ಸ್ಪಂದಿಸಿದೆ. ಆಂಶಿಕ ಪರಿಹಾರವನ್ನೂ ಒದಗಿಸಿದೆ; ಆದರೆ ಪೂರ್ಣ ಪ್ರಮಾಣದ ಪರಿಹಾರ ಕಾಮಗಾರಿ ನಡೆಯದ ಹೊರತು ಪ್ರತೀ ಬಾರಿ ಮಳೆ ಬಂದಾಗಲೂ, ಉಬ್ಬರ ಇಳಿತದ ಸಂದರ್ಭಗಳಲ್ಲೂ ಇಲ್ಲಿ ನೀರಿನ ಸಮಸ್ಯೆಗೆ ಕೊನೆಯಿಲ್ಲ ಎಂದಾಗಿದೆ.

ಪರಿಹಾರ

ರಿಂಗ್‌ ರೋಡ್‌ಗೆ ಟೆಂಡರ್‌ ಆಗಿದೆ. ಮಳೆಗಾಲದ ಬಳಿಕ ಕಾಮಗಾರಿ ಆಗಲಿದೆ. ಮದ್ದುಗುಡ್ಡೆಯಲ್ಲಿ ಪ್ರಕಾಶ್‌ ಸಾ ಮಿಲ್‌ ಬಳಿ ಎಡ ಬಲ ಎರಡೂ ಕಡೆ ಉಪ್ಪುನೀರು ಬರುವ ಜಾಗ. ಆದ್ದರಿಂದ ಇಲ್ಲಿ ಶಾಶ್ವತ ಕಾಮಗಾರಿಯ ಅಗತ್ಯವಿದೆ. ಆಗ ಜನರಿಗೆ ರಸ್ತೆಯೂ ಆಗುತ್ತದೆ. ನೀರಿನ ಸಮಸ್ಯೆಯಿಂದ ಮುಕ್ತಿಯೂ ದೊರೆಯುತ್ತದೆ.

ಸಮಸ್ಯೆ

ರಿಂಗ್‌ರೋಡ್‌ನಿಂದ ಸಂಪರ್ಕ ಕಲ್ಪಿಸುವ ಐವತ್ತಕ್ಕೂ ಅಧಿಕ ಮನೆಯವರದ್ದು ತೋಡಿನ ಸಮಸ್ಯೆ. ಪ್ರಕಾಶ್‌ ಮಿಲ್‌ ಬಳಿ ಕೆಲ ವರ್ಷದ ಹಿಂದೆ ತೋಡಿನ ಬದಿಕಟ್ಟುವ ಕಾಮಗಾರಿ ಸ್ವಲ್ಪ ಆಗಿದ್ದು 3.8 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್‌ ಕಾಮಗಾರಿ ನಡೆದಿದೆ. ಒಟ್ಟು ಎರಡು ಬಾರಿ 8 ಲಕ್ಷ ರೂ. ಪುರಸಭೆಯಿಂದ ಹಾಕಿ 46 ಮೀ. ಕಾಮಗಾರಿ ಆಗಿದ್ದು ಇನ್ನೂ ಸುಮಾರು 500 ಮೀ.ಗಳಷ್ಟು ಕಾಮಗಾರಿ ಆಗಬೇಕಿದೆ. ಅನುದಾನದ ಕೊರತೆಯಿಂದ ಕಾಮಗಾರಿ ನಡೆದಿರಲಿಲ್ಲ. ಇದರಿಂದಾಗಿ ಹೊಸಕೇರಿ ಮದ್ದುಗುಡ್ಡೆಯಲ್ಲೂ ಮಳೆಗಾಲದಲ್ಲಿ ನೀರು ಮನೆಯೊಳಗೆ ನುಗ್ಗುವ ಸಮಸ್ಯೆಯಿದೆ. ಇಲ್ಲಿ ಮನೆಗಳಿಗೆ ನೀರು ನುಗ್ಗುವ ಸಮಸ್ಯೆಯನ್ನು ಸರಿಪಡಿಸಬೇಕೆಂದು ಬೇಡಿಕೆ ಇಟ್ಟಿದ್ದು ಅದನ್ನು ಪುರಸಭೆಗೆ ಆಗಾಗ ನೆನಪಿಸುತ್ತಿದ್ದಾರೆ. ಇಲ್ಲಿನ ತೋಡಿನ ಕಾಮಗಾರಿಯ ಉಳಿದ ಭಾಗವೂ ನಡೆಯದೇ ಇದ್ದರೆ ಮಳೆಗಾಲದಲ್ಲಿ ನಲುವತ್ತಕ್ಕೂ ಅಧಿಕ ಮನೆಗಳ ಅಂಗಳ ತುಂಬೆಲ್ಲ ಚರಂಡಿ ನೀರು ಸೇರಬಹುದು. ಮನೆಯೊಳಗೂ ಹೋಗುವ ಆತಂಕವಿರು ತ್ತದೆ. ಅನಿವಾರ್ಯವಾಗಿ ಗದ್ದೆಯಲ್ಲಿ ಮನೆ ಕಟ್ಟಿರುವುದು, ಪಂಚಾಂಗ ಎತ್ತರ ಮಾಡದ ಕಾರಣ ಮನೆಯೊಳಗೂ ಆಗಾಗ ನೀರು ಹೋಗುತ್ತದೆ. ಪುಟ್ಟ ಮಕ್ಕಳು ಅಂಗಳಕ್ಕೆ ಇಳಿದಾಗ ಆತಂಕ ಇದ್ದದ್ದೇ. ಏಕೆಂದರೆ ಎದುರಿನ ಗದ್ದೆ, ಮನೆಯಂಗಳದಲ್ಲಿ, ಮನೆಯೊಳಗೂ ನೀರು ನುಗ್ಗುವ ಆತಂಕ ಇದ್ದೇ ಇರುತ್ತದೆ.

ಕನಸು

ಶಾಶ್ವತ ಕಾಮಗಾರಿಗೆ ಅನುದಾನ ದೊರೆತರೆ, ಉಪ್ಪುನೀರು ಹಿನ್ನೀರಾಗಿ ಕಡಲ ಉಬ್ಬರ ಇಳಿತದ ಸಂದರ್ಭ ಇಲ್ಲಿಗೆ ನೀರು ಒಸರುವ ಸಮಸ್ಯೆಗೆ ತಡೆ ದೊರೆತಂತಾಗುತ್ತದೆ. ತೋಡಿಗೆ ಸರಿಯಾದ ತಡೆಗೋಡೆ ಇಲ್ಲದೆ ಜನರಿಗೆ ಸದಾ ಸಮಸ್ಯೆ ಆಗುತ್ತಿದೆ. ಅಷ್ಟಲ್ಲದೇ ಇಲ್ಲಿನ ಮನೆಗಳಿಗೆ ಸಂಪರ್ಕ ಕಲ್ಪಿಸಲು ಸೂಕ್ತ ರಸ್ತೆಯೂ ಇರಲಿಲ್ಲ. ಆದರೆ ಎರಡು ಬಾರಿಯ ಕಾಮಗಾರಿಯಿಂದ ಆಗಿದ್ದು ಇನ್ನುಳಿದ ಕಾಮಗಾರಿಗೆ ಅನುದಾನ ಮಂಜೂರಾದರೆ ಆ ಕನಸೂ ನನಸಾಗಲಿದೆ.

ಸುದಿನ ವರದಿ

“ವಾರ್ಡ್‌ನಲ್ಲಿ ಸುದಿನ ಸರಣಿ’ ಸಹಿತ ಅನೇಕ ಬಾರಿ ಇಲ್ಲಿನ ಸಮಸ್ಯೆಗಳ ಕುರಿತು ಉದಯವಾಣಿ ಸುದಿನ ವರದಿ ಮಾಡಿದೆ. ಆ ವರದಿಯ ಬಳಿಕ ಎರಡು ಬಾರಿ ಇಲ್ಲಿ ಪುರಸಭೆ ವತಿಯಿಂದ ಕಾಮಗಾರಿಗಳು ಆಗಿವೆ. ಆದರೆ ಇನ್ನುಳಿದ ಕಾಮಗಾರಿಗೆ ದೊಡ್ಡ ಮೊತ್ತದ ಅವಶ್ಯವಿದೆ. ಹಾಗಾಗಿ ಸ್ಥಳೀಯರು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಲ್ಲಿ ಮನವಿ ಮಾಡಿದ್ದಾರೆ. ಶಾಸಕರು ಭರವಸೆಯನ್ನೂ ನೀಡಿದ್ದು ಜನ ಅನುದಾನದ ನಿರೀಕ್ಷೆಯಲ್ಲಿದ್ದಾರೆ.

ಶಾಸಕರಿಗೆ ಮನವಿ ಮಾಡಿದ್ದೇವೆ: ಎರಡು ಬಾರಿ 8 ಲಕ್ಷ ರೂ. ಪುರಸಭೆಯಿಂದ ಹಾಕಿ 46 ಮೀ. ಕಾಮಗಾರಿ ಆಗಿದೆ. ಇನ್ನು ಒಟ್ಟು ಅರ್ಧ ಕಿಮೀ.ನಷ್ಟು ಕಾಮಗಾರಿ ಆದರೆ ಹೊಳೆ ನೀರೂ ಬರುವುದಿಲ್ಲ. ಆ ಭಾಗದ ಮನೆಯವರಿಗೆ ರಸ್ತೆಯೂ ಆಗುತ್ತದೆ. ಶಾಸಕರ ಮನೆಗೆ ನಿಯೋಗವೊಂದು ಹೋಗಿ ಮನವಿ ಮಾಡಿದ್ದೇವೆ. –ರಾಘವೇಂದ್ರ ಖಾರ್ವಿ, ಸದಸ್ಯರು, ಪುರಸಭೆ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.