ಹೊಸದಾಗಿ ಡಾಮರುಗೊಂಡ ರಸ್ತೆಗೆ ಮತ್ತೆ ತೇಪೆ…!
ಕಳಪೆ ಕಾಮಗಾರಿ: ಊರವರಿಂದ ಆರೋಪ
Team Udayavani, Apr 12, 2022, 11:40 AM IST
ಗೋಳಿಯಂಗಡಿ: ಕೋಟ್ಯಂತರ ರೂ. ವೆಚ್ಚದಲ್ಲಿ ಹೊಸದಾಗಿ ಕೆಲವು ದಿನದ ಹಿಂದಷ್ಟೇ ಡಾಮರು ಕಾಮಗಾಯಾದ ರಸ್ತೆಯಿದು. ಅದಾಗಲೇ ಈ ರಸ್ತೆಯ ಅಲ್ಲಲ್ಲಿ ಡಾಮರು ಎದ್ದು ಹೋಗಿ ಹೊಂಡ ಕಾಣಿಸಿಕೊಂಡಿದ್ದು, ಅಲ್ಲಿಗೆ ತೇಪೆ ಹಾಕಲಾಗಿದೆ. ಹೊಸ ರಸ್ತೆಗೆ ತೇಪೆ ಹಾಕುವ ಪರಿಸ್ಥಿತಿ ಬಂದಿರುವುದು ಮಡಾಮಕ್ಕಿ ಗ್ರಾ.ಪಂ. ವ್ಯಾಪ್ತಿಯ ಗುಡ್ಡೆಯಂಗಡಿಯಿಂದ ಬೆಪ್ಡೆಗೆ ಸಂಚರಿಸುವ ರಸ್ತೆಗೆ. ಊರವರಿಂದ ಕಳಪೆ ಕಾಮಗಾರಿ ಆರೋಪ ಕೇಳಿ ಬಂದಿದೆ.
ಮಡಾಮಕ್ಕಿ ಗ್ರಾ.ಪಂ. ವ್ಯಾಪ್ತಿಯ ಮಾಂಡಿ ಮೂರುಕೈ ಬಳಿಯ ಜಂಕ್ಷನ್ನಿಂದ ಗುಡ್ಡೆಯಂಗಡಿ ಮಾರ್ಗವಾಗಿ ಬೆಪ್ಡೆಗೆ ತೆರಳುವ ಮಾರ್ಗದ ಸುಮಾರು 3 ಕಿ.ಮೀ. ದೂರದ ರಸ್ತೆಗೆ ಡಾಮರು ಕಾಮಗಾರಿಯಾಗಿದೆ. ಈ ಪೈಕಿ ಅಲ್ಲಲ್ಲಿ ಕೆಲವೆಡೆ ಡಾಮರು ಎದ್ದು ಹೋಗಿ, ಈಗ ಅಲ್ಲಿಗೆ ಮತ್ತೆ ತೇಪೆ ಹಾಕಲಾಗಿದೆ.
ಗ್ರಾಮ ಸಡಕ್ ಯೋಜನೆ
ಈ ಗುಡ್ಡೆಯಂಗಡಿ – ಬೆಪ್ಡೆ ರಸ್ತೆಯನ್ನು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಅಂದಾಜು 4.48 ಕೋ. ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ. ಒಟ್ಟು 5 ಕಿ.ಮೀ. ದೂರದ ರಸ್ತೆಯ ಪೈಕಿ 2 ಕಿ.ಮೀ. ಕಾಂಕ್ರೀಟಿಕರಣ ಹಾಗೂ ಇನ್ನುಳಿದ 3 ಕಿ.ಮೀ. ದೂರದವರೆಗೆ ಡಾಮರು ಕಾಮಗಾರಿ ನಡೆಸಲಾಗಿದೆ. ಕಳೆದ ವರ್ಷದ ಜು.5ಕ್ಕೆ ಕಾಮಗಾರಿ ಆರಂಭಗೊಂಡಿದ್ದು, ಈ ವರ್ಷದ ಜು. 5ರ ವರೆಗೆ ಕಾಮಗಾರಿ ಪೂರ್ಣಗೊಳಿಸಲು ಕಾಲಾವಕಾಶವಿದೆ.
100ಕ್ಕೂ ಮಿಕ್ಕಿ ಮನೆ
ಇದು ಮಾಂಡಿಮೂರುಕೈಯಿಂದ ಗುಡ್ಡೆಯಂಗಡಿಯಾಗಿ ಬಡಾಬೆಪ್ಡೆ, ಕುಂಟುಹೊಳೆ ಮೂಲಕ ಮಾಯಾ ಬಜಾರ್ಗೆ ಹೋಗುವ ರಸ್ತೆಯಾಗಿದೆ.
ಈ ಮಾರ್ಗದಲ್ಲಿ ನಿತ್ಯ ನೂರಾರು ವಾಹನಗಳು ಓಡಾಟ ನಡೆಸುತ್ತವೆ. 100 ಕ್ಕೂ ಅಧಿಕ ಮನೆ ಮಂದಿ ಇದೇ ಮಾರ್ಗವನ್ನು ಆಶ್ರಯಿಸಿದ್ದಾರೆ. ಈ ರಸ್ತೆಗೆ ಅನೇಕ ವರ್ಷಗಳ ಹಿಂದೆ ಕಾಮಗಾರಿಯಾಗಿತ್ತು. ಆ ಬಳಿಕ ಮರು ಡಾಮರು ಕಾಮಗಾರಿಗೆ ಈ ಭಾಗದ ಜನ ಒತ್ತಾಯಿಸುತ್ತಲೇ ಇದ್ದರು.
ತನಿಖೆ ನಡೆಸಿ, ಕ್ರಮ ಕೈಗೊಳ್ಳಿ
ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆಯೊಂದು ಈ ರೀತಿಯಾಗಿ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಕಳಪೆಯಾಗಿರುವುದು ದುರದೃಷ್ಟಕರ. ಅದನ್ನೀಗ ಮುಚ್ಚಿ ಹಾಕಲು ಅದರ ಮೇಲೆಯೇ ತೇಪೆ ಹಾಕಲಾಗಿದೆ. ಇದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಕೂಡಲೇ ಗ್ರಾ.ಪಂ. ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಸರಿಯಾದ ತನಿಖೆ ನಡೆಸಿ, ಕಳಪೆ ಕಾಮಗಾರಿ ನಡೆಸಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎನ್ನುವುದಾಗಿ ಊರವರು ಆಗ್ರಹಿಸಿದ್ದಾರೆ.
ಪರಿಶೀಲನೆ ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು ಶೀಘ್ರ ಅಧ್ಯಕ್ಷರ ನೇತೃತ್ವದಲ್ಲಿ ಪಂಚಾಯತ್ ನಿಯೋಗವು ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು. -ದಯಾನಂದ ಪೂಜಾರಿ, ಉಪಾಧ್ಯಕ್ಷರು, ಮಡಾಮಕ್ಕಿ ಗ್ರಾ.ಪಂ.
ಯಾರು ಹೊಣೆ ಗುಡ್ಡೆಯಂಗಡಿಯಿಂದ ಬೆಪ್ಡೆಗೆ ತೆರಳುವ ಮಾರ್ಗದ ಕಾಮಗಾರಿಯೂ ಕಳಪೆಯಾಗಿದ್ದು, ಮಾತ್ರವಲ್ಲದೆ ಕಿರಿದಾದ ರಸ್ತೆಯಾಗಿದೆ. ರಸ್ತೆಯ ಬದಿಯ ಕಾಮಗಾರಿ ಸಹ ಪೂರ್ಣಗೊಳಿಸಿಲ್ಲ. ಈ ಕಳಪೆ ಕಾಮಗಾರಿಗೆ ಯಾರು ಹೊಣೆ. ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡು, ಸರಿಪಡಿಸಲಿ. – ಕೃಷ್ಣ ಶೆಟ್ಟಿ ಶೇಡಿಮನೆ, ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್ ಅಡಿಕೆ ತೋಟಕ್ಕೆ ಹಾನಿ
MUST WATCH
ಹೊಸ ಸೇರ್ಪಡೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ