Siddapura ಬೈಕ್ಗಳ ಢಿಕ್ಕಿ: ಸವಾರನಿಗೆ ಗಾಯ
Team Udayavani, Feb 27, 2024, 11:58 PM IST
ಸಿದ್ದಾಪುರ: ಹಳ್ಳಿಹೊಳೆ ಗ್ರಾಮದ ಚಕ್ರ ಮೈದಾನದ ಹತ್ರಖಂಡಿಗೆ ಯಲ್ಲಿ ಎರಡು ಬೈಕ್ಗಳು ಪರಸ್ಪರ ಢಿಕ್ಕಿ ಹೊಡೆದುಕೊಂಡ ಪರಿಣಾಮ ಸವಾರ ಮಂಜುನಾಥ ಅವರು ಗಂಭೀರವಾಗಿ ಗಾಯಗೊಂಡು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಿಂಬದಿ ಸವಾರ ನಾಗೇಂದ್ರ ಹಳ್ಳಿಹೊಳೆ ದೂರು ನೀಡಿದ್ದಾರೆ. ಇನ್ನೊಂದು ಬೈಕಿನ ಸವಾರ ಹಾಗೂ ಹಿಂಬದಿ ಸವಾರನನಿಗೂ ತರಚಿದ ಗಾಯಗಳಾಗಿವೆ. ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.