HIV ಮಾಸಾಶನಕ್ಕೆ ಎಚ್‌ಐವಿ ಬಾಧಿತರ ಬೇಡಿಕೆ: ವಸತಿ – ನಿವೇಶನ ಪಡೆಯಲು ತಪ್ಪದ ಅಲೆದಾಟ

ನಿಯಮ ಸಡಿಲಿಕೆಗೆ ಸಂತ್ರಸ್ತರ ಮನವಿ

Team Udayavani, Dec 4, 2023, 6:50 AM IST

HIV ಮಾಸಾಶನಕ್ಕೆ ಎಚ್‌ಐವಿ ಬಾಧಿತರ ಬೇಡಿಕೆ: ವಸತಿ – ನಿವೇಶನ ಪಡೆಯಲು ತಪ್ಪದ ಅಲೆದಾಟ

ಕುಂದಾಪುರ: ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಎಚ್‌ಐವಿ ಹರಡುವಿಕೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಆ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ. ಆದರೆ ಎಚ್‌ಐವಿ ಬಾಧಿತರಿಗೆ ವಸತಿ, ನಿವೇಶನ ಆದ್ಯತೆ ನೆಲೆಯಲ್ಲಿ ಒದಗಿಸಿಕೊಡುವಲ್ಲಿ ಮಾತ್ರ ಸರಕಾರ ಹಿಂದೆ ಬಿದ್ದಿದೆ. ಇದಲ್ಲದೆ ಇತರ ರಾಜ್ಯಗಳಲ್ಲಿ ಇರುವಂತೆ ಬಾಧಿತರಿಗೆ ಮಾಸಾಶನ ನೀಡುವ ಬೇಡಿಕೆಗೂ ಈವರೆಗೆ ಮನ್ನಣೆ ದೊರೆತಿಲ್ಲ.

ಆಂಧ್ರಪ್ರದೇಶ, ಕೇರಳ, ಗೋವಾ, ತಮಿಳುನಾಡುಗಳಲ್ಲಿ ಎಚ್‌ಐವಿ ಬಾಧಿತರಿಗೆ ಪ್ರತೀ ತಿಂಗಳು 2 ಸಾವಿರ ರೂ. ನೀಡುತ್ತಿದ್ದಾರೆ. ಆದರೆ ನಮ್ಮಲ್ಲಿ ಈ ಯೋಜನೆಯಿಲ್ಲ. ಬದಲಾಗಿ ಪತಿ ಮೃತಪಟ್ಟಿದ್ದರೆ ಅದರ ಆಧಾರದಲ್ಲಿ ವಿಧವಾ ವೇತನ ನೀಡಲಾಗುತ್ತಿದೆ ಅಷ್ಟೇ. ಇದರಿಂದ ಎಲ್ಲರಿಗೂ ಈ ಹಣ ಸಿಗುತ್ತಿಲ್ಲ. ಕರ್ನಾಟಕದಲ್ಲೂ ಜಾರಿಗೆ ತನ್ನಿ ಎನ್ನುವ ಬೇಡಿಕೆಯಿದೆ.

ಅನೇಕ ವರ್ಷಗಳಿಂದ ಸಿಕ್ಕಿಲ್ಲ
ಉಡುಪಿ ಜಿಲ್ಲೆಯಲ್ಲಿ 4,153, ದ.ಕ. ಜಿಲ್ಲೆಯಲ್ಲಿ 4,127 ಸೇರಿದಂತೆ ಪ್ರಸ್ತುತ ರಾಜ್ಯದಲ್ಲಿ 3 ಲಕ್ಷಕ್ಕೂ ಮಿಕ್ಕಿ ಎಚ್‌ಐವಿ ಬಾಧಿತರಿದ್ದಾರೆ. ಇವರಲ್ಲಿ 3-4 ವರ್ಷಗಳ ಹಿಂದೆ ಕೆಲವರಿಗೆ ಸರಕಾರದಿಂದ ನಿವೇಶನ ಹಾಗೂ ವಸತಿ ಸಿಕ್ಕಿದೆ. ಆದರೆ 2018-19ನೇ ಸಾಲಿನಿಂದ ವಸತಿ ಯೋಜನೆಗಳಿಗೆ ರಾಜ್ಯ ಸರಕಾರ ಅನುದಾನ ಹಂಚಿಕೆ ಮಾಡದ ಕಾರಣ ಆ ಬಳಿಕ ಯಾರಿಗೂ ವಸತಿ ಮಂಜೂರಾಗಿಲ್ಲ. 2022-23ನೇ ಸಾಲಿನಲ್ಲಿ ದ.ಕ.ದಲ್ಲಿ 280 ಮಂದಿ, ಉಡುಪಿಯಲ್ಲಿ 13 ಮಂದಿ (7 ಮಂದಿ ನಿವೇಶನ ಹಾಗೂ 6 ಮಂದಿ ವಸತಿ ಹಾಗೂ ನಿವೇಶನ ಎರಡಕ್ಕೂ) ಅರ್ಜಿ ಸಲ್ಲಿಸಿದ್ದಾರೆ.

ನಿಯಮದಿಂದ ಯಾಕೆ ಅಡ್ಡಿ ?
ವಸತಿ ಹಾಗೂ ನಿವೇಶನ ಪಡೆಯಲು ಎಚ್‌ಐವಿ ಬಾಧಿತರಿಗೆ ಪ್ರತ್ಯೇಕ ನಿಯಮವೇನಿಲ್ಲ. ಎಲ್ಲರಿಗೂ ಒಂದೇ ರೀತಿ ಇರುವುದರಿಂದ ಸಮಸ್ಯೆಯಾಗಿದೆ. ನಿವೇಶನ ಇದ್ದರೆ ಮಾತ್ರ ಇವರಿಗೆ ವಸತಿ ಯೋಜನೆಯಡಿ ಅನುದಾನ ಮಂಜೂರಾಗುತ್ತದೆ. ಕೆಲವರಲ್ಲಿ ನಿವೇಶನ ಇರುವುದಿಲ್ಲ. ನಿವೇಶನ ಹಾಗೂ ವಸತಿ ಎರಡೂ ಬೇಕಾಗುವವರಿಗೆ ಪ್ರತ್ಯೇಕ ಯೋಜನೆಯಿದ್ದರೂ ಅದರಡಿ ಮಂಜೂರಾಗದೆ 7-8 ವರ್ಷಗಳೇ ಕಳೆದಿವೆ. ಇನ್ನು ನಿವೇಶನ ಇದ್ದರೂ ಅದು ಅವರ ಹೆಸರಲ್ಲಿ ಇರುವುದಿಲ್ಲ. ತಂದೆ-ತಾಯಿ ಹೆಸರಲ್ಲಿ ಇರುವುದರಿಂದ ಅವರಿಗೆ ಮನೆ ಮಂಜೂರಾಗುವುದಿಲ್ಲ. ನಿವೇಶನ ಬೇಕು ಅಂದರೂ ಇವರ ಹೆಸರು ತಂದೆ-ತಾಯಿ ಹೆಸರಿನ ಆರ್‌ಟಿಸಿಯಲ್ಲಿರುವುದರಿಂದ ಅದು ಸಹ ಸಿಗುವುದು ಕಷ್ಟ. ಗ್ರಾ.ಪಂ., ತಾಲೂಕು ಕಚೇರಿ, ಜಿಲ್ಲಾ ಕೇಂದ್ರಗಳಿಗೆ ಅರ್ಜಿ ಹಿಡಿದುಕೊಂಡು ಅಲೆದಾಡಿದರೂ ಸಿಗುತ್ತಿಲ್ಲ ಎನ್ನುವ ಅಳಲು ಸಂತ್ರಸ್ತರದ್ದು. ಹಾಗಾಗಿ ಅವರನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಈ ನಿಯಮಗಳನ್ನು ಸಡಿಲಿಸಿ, ನಿವೇಶನ ಹಾಗೂ ವಸತಿ ಯೋಜನೆಯಡಿ ಸೌಲಭ್ಯ ಒದಗಿಸಬೇಕು ಎನ್ನುವುದು ಸಂತ್ರಸ್ತರ ಬೇಡಿಕೆಯಾಗಿದೆ.

ಪ್ರಸ್ತಾವನೆ ಸಲ್ಲಿಕೆ
ವಸತಿ ಹಾಗೂ ನಿವೇಶನಕ್ಕಾಗಿ ಎಚ್‌ಐವಿ ಬಾಧಿತರಿಂದ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ಸರಕಾರಕ್ಕೆ ಸಲ್ಲಿಸಲಾಗಿದೆ. ಮಾಸಾಶನ ನೀಡುವ ಬಗ್ಗೆ ಸರಕಾರದ ಮಟ್ಟದಲ್ಲಿಯೇ ಬೆಳವಣಿಗೆಗಳು ಆಗಬೇಕಾಗಿದೆ. ಎಚ್‌ಐವಿ ಸೋಂಕು ಈಗ ನಿಯಂತ್ರಣದಲ್ಲಿದ್ದು, ಔಷಧಗಳು ಸಹ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ ಎನ್ನುವುದಾಗಿ ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿಗಳಾದ ಉಡುಪಿಯ ಡಾ| ಚಿದಾನಂದ ಸಂಜು ಎಸ್‌.ವಿ. ಉಡುಪಿ ಹಾಗೂ ದ.ಕ.ದ ಡಾ| ಬದ್ರುದ್ದೀನ್‌ ಎಂ.ಎನ್‌. ತಿಳಿಸಿದ್ದಾರೆ.

ಎಚ್‌ಐವಿ ಬಾಧಿತರು ವಸತಿ, ನಿವೇಶನ ಪಡೆಯಲು ಪ್ರಯಾಸಪಡುವಂತಾಗಿದೆ. ಬೇರೆ ರಾಜ್ಯಗಳಂತೆ ಮಾಸಾಶನ ಹಾಗೂ ಬಾಧಿತರ ಮಕ್ಕಳಿಗೆ ಉದ್ಯೋಗ ಮೀಸಲಾತಿ ನೀಡಿದರೆ ಅನುಕೂಲ ಆಗಲಿದೆ. ಹಿಂದೆ ಎಆರ್‌ಟಿ ಔಷಧ ತೆಗೆದುಕೊಂಡು ಬರಲು ಪ್ರಯಾಣ ವೆಚ್ಚ ನೀಡಲಾಗುತ್ತಿತ್ತು, ಈಗ ರದ್ದಾಗಿದೆ. ಧನಶ್ರೀ ಯೋಜನೆಯಡಿ ಅರ್ಜಿ ಸಲ್ಲಿಕೆ ವೇಳೆ ಗೌಪ್ಯತೆ ಕಾಪಾಡಿದರೆ ಉತ್ತಮ.
– ಸಂಜೀವ ವಂಡ್ಸೆ , ಅಧ್ಯಕ್ಷರು, ಆಸರೆ ಚಾರಿಟೆಬಲ್‌ ಟ್ರಸ್ಟ್‌ ವಂಡ್ಸೆ

ಸದನದಲ್ಲಿ ಪ್ರಸ್ತಾವ
ಎಚ್‌ಐವಿ ಬಾಧಿತರಿಗೆ ಆದ್ಯತೆ ನೆಲೆಯಲ್ಲಿ ವಸತಿ ಹಾಗೂ ನಿವೇಶನ ಒದಗಿಸಿಕೊಡುವ ಬಗ್ಗೆ, ಅದಕ್ಕಿರುವ ನಿಯಮಗಳನ್ನು ಸಡಿಲಿಕೆ ಮಾಡುವ ಕುರಿತಂತೆ, ಪ್ರತೀ ತಿಂಗಳು ಅವರಿಗೆ ಜೀವನ ನಡೆಸಲು ಅನುಕೂಲ ಆಗುವಂತೆ ಮಾಸಾಶನ ಯೋಜನೆ ಜಾರಿ ಮಾಡುವಂತೆ ಮುಂಬರುವ ಅಧಿವೇಶನದಲ್ಲಿ ಪ್ರಸ್ತಾವಿಸಿ, ಸರಕಾರದ ಗಮನಸೆಳೆಯಲಾಗುವುದು.
– ಗುರುರಾಜ ಗಂಟಿಹೊಳೆ, ಬೈಂದೂರು ಶಾಸಕ

– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.