“ಅವರು ಊರಿಗೆ, ನಾನು ಸಂಸಾರಕ್ಕೆ ಹೆಗಲು ಕೊಟ್ಟೆವು’


Team Udayavani, Apr 4, 2018, 7:30 AM IST

1.jpg

ಕುಂದಾಪುರ: ನಮ್ಮವರ ಯಾವ ಕಾರ್ಯವೂ ಸಾಂಸಾರಿಕ ಜೀವನಕ್ಕೆ ಅಡ್ಡಿಯಾಗಿಲ್ಲ. ಅವರು ಶಾಸಕರಾಗಿ ಊರಿನ ಅಭಿವೃದ್ಧಿಗೆ ಹೆಗಲು ಕೊಟ್ಟರೆ, ಅವರ ಮಡದಿಯಾಗಿ ನಾನು ಮಕ್ಕಳ, ಕುಟುಂಬದ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದೆ. ಅವರು ಜನಪ್ರತಿನಿಧಿಯಾಗಿ ಜನರ ಸೇವೆ ಮಾಡಿರುವ ಬಗ್ಗೆ ತುಂಬಾ ಖುಷಿಯೂ ಇದೆ; ಹೆಮ್ಮೆಯೂ ಇದೆ. 

ಇದು ಬೈಂದೂರಿನ ಮಾಜಿ ಶಾಸಕ, “ಬಸ್ರೂರಿನ ಹೆಗ್ಡೆ’ ಎಂದೇ ಖ್ಯಾತಿ ಗಳಿಸಿರುವ, ಸಕ್ರಿಯ ರಾಜಕಾರಣ ದಿಂದ ಹಿಂದೆ ಸರಿದು ಬಹಳಷ್ಟು ವರ್ಷಗಳಾದರೂ ಧಾರ್ಮಿಕ, ಸಾರ್ವಜನಿಕ ರಂಗದಲ್ಲಿ ಈಗಲೂ ಸಕ್ರಿಯರಾಗಿರುವ ಬಿ. ಅಪ್ಪಣ್ಣ ಹೆಗ್ಡೆ ಅವರ ಪತ್ನಿ ನಾಗರತ್ನ ಅವರ ಅಭಿಮಾನದ ನುಡಿಗಳು. ಅವರು 1983ರಲ್ಲಿ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಆಗ ರಾಮಕೃಷ್ಣ ಹೆಗಡೆ, ಎಂ.ಪಿ.  ಪ್ರಕಾಶ್‌, ಅಬ್ದುಲ್‌ ನಾಸೀರ್‌ ಸಹಿತ ಅನೇಕ ಮಂದಿ ಪ್ರಭಾವಿ ರಾಜಕೀಯ ನಾಯಕರು ಮನೆಗೆ ಬರುತ್ತಿದ್ದರು. ಶಾಸಕರಾದ ಅನಂತರ ಮನೆಗೆ ಬರುವ ಜನರ ಸಂಖ್ಯೆಯೂ ಹೆಚ್ಚಿತ್ತು. ಬಂದವರೆಲ್ಲರನ್ನು ಆತಿಥ್ಯ ನೀಡಿ ಉಪಚರಿಸುವುದರಲ್ಲಿ ನಮಗೆ ಖುಷಿ ಸಿಗುತ್ತಿತ್ತು. 

ಕೋರ್ಟು, ಪೊಲೀಸ್‌ ಎನ್ನದೆ ಊರಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಯಾವುದೇ ಗೊಂದಲಗಳಿಲ್ಲದೆ ಬದುಕಬೇಕು ಎಂದು ಅವರು ಯಾವಾಗಲೂ ಹೇಳುತ್ತಿರುತ್ತಾರೆ. ಅದರಂತೆ ಮನೆಗೆ ಯಾವುದಾದರೂ ವ್ಯಾಜ್ಯಗಳನ್ನು ಹಿಡಿದುಕೊಂಡು ಬಂದ ಎರಡೂ ಕಡೆಯವರ ಮನಸ್ಸಿಗೆ ಒಪ್ಪಿಗೆ ಆಗುವಂತಹ ಪರಿಹಾರವನ್ನು ನೀಡಿ ಕಳುಹಿಸುತ್ತಿದ್ದರು. ಅವರ ನ್ಯಾಯ ಪಂಚಾಯ್ತಿಗೆ ಊರಿನಲ್ಲಿ ಎಲ್ಲರೂ ಗೌರವ ಕೊಡುತ್ತಾರೆ. ಅದೇ ರೀತಿ ಮನೆಯಲ್ಲಿ ಏನೇ ತೊಂದರೆ ಬಂದರೂ ಎಲ್ಲರಲ್ಲೂ ಧೈರ್ಯ ತುಂಬುತ್ತಿದ್ದರು. ಅವರು ಶಾಸಕರಾಗಿ ಸದನದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಹೋದಾಗ ನಾನು ಹೋಗುತ್ತಿರಲಿಲ್ಲ. ಮನೆಯಲ್ಲೇ ಇದ್ದು ಸಂಸಾರದ ಜವಾಬ್ದಾರಿ ನಿಭಾಯಿಸುತ್ತಿದ್ದೆ. ಆದರೆ ಅವರು ಬೈಂದೂರಿನಲ್ಲಿ ಚುನಾವಣೆಗೆ ನಿಂತಾಗ ನಾನು ಪ್ರಚಾರಕ್ಕೆ ಹೋಗಿದ್ದೆ. ಗೆದ್ದ ಬಳಿಕವೂ ಸಮಾರಂಭಗಳಿಗೆಲ್ಲ ಹೋಗುತ್ತಿದ್ದೆ ಎನ್ನುವುದನ್ನು ನೆನಪು ಮಾಡಿಕೊಳ್ಳುತ್ತಾರೆ ನಾಗರತ್ನಾ. ಅಪ್ಪಣ್ಣ ಹೆಗ್ಡೆ ದಂಪತಿಗೆ ಮೂವರು ಪುತ್ರಿಯರು, ಇಬ್ಬರು ಪುತ್ರರು, 7 ಮಂದಿ ಮೊಮ್ಮಕ್ಕಳು.

 ಸೋಲು-ಗೆಲುವು ಸಮನಾಗಿ ಸ್ವೀಕಾರ
1994-95ರಲ್ಲಿ ಅಪ್ಪಣ್ಣ ಹೆಗ್ಡೆ ಬೈಂದೂರಿನಿಂದ ಸ್ಪರ್ಧಿಸಿದ್ದರು. ಅಂದು ಫ‌ಲಿತಾಂಶದ ದಿನ. ಮತ ಎಣಿಕೆ ನಡೆಯುತ್ತಿದ್ದಾಗ ಮನೆಯಲ್ಲೇ ಕುಳಿತಿದ್ದರು. ಎಣಿಕೆ ಮುಗಿಯುತ್ತಿದ್ದಂತೆ ಸೋಲುವುದು ಖಚಿತವಾದಾಗ ಮನೆಯಲ್ಲಿದ್ದ ನಮಗೆಲ್ಲ ತುಂಬಾ ಬೇಸರವಾಯಿತು. ಆದರೆ ಆಗ ನಮ್ಮನ್ನೆಲ್ಲ ಸಮಾಧಾನ ಪಡಿಸಿದ ಹೆಗ್ಡೆಯವರು, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದ್ದು, ಸೋಲಿನಲ್ಲೂ ಗೆಲುವು ಕಂಡಷ್ಟು ಖುಷಿಯಾಯಿತು ಎಂದು ನೆನಪು ಮಾಡಿಕೊಳ್ಳುತ್ತಾರೆ ಅವರ ಮನೆಯವರು.

ನೆರೆ ಸಂತ್ರಸ್ತರ ರಕ್ಷಣೆಗೆ ಸ್ವತಃ ತೆರಳಿದ್ದರು …
1982ರ ಮಳೆಗಾಲದಲ್ಲಿ ನೆರೆ ಬಂದು ಹಟ್ಟಿಕುದ್ರು ಸಂಪೂರ್ಣ ಮುಳುಗಿತ್ತು. ಸಂತ್ರಸ್ತರ ರಕ್ಷಣೆ ಮಾಡಲು ಅಪ್ಪನೇ ದೋಣಿಯವರೊಂದಿಗೆ ತೆರಳಿ ಜನರನ್ನು ಈಚೆ ದಡಕ್ಕೆ ಕರೆ ತಂದಿದ್ದರು ಎಂದು ಜನಸೇವಕರಾಗಿ ತಂದೆ ಮಾಡಿ ರುವ ಕಾರ್ಯದ ಕುರಿತು ಪುತ್ರಿ ಅನುಪಮಾ ಸುಭಾಶ್ಚಂದ್ರ ಶೆಟ್ಟಿ ನೆನಪು ಮಾಡಿಕೊಳ್ಳುತ್ತಾರೆ.

1983ರಲ್ಲಿ ಅಪ್ಪ ಶಾಸಕರಾದ ಬಳಿಕ ಮನೆಗೆ ಬರುವ ಜನರ ಸಂಖ್ಯೆ ದಿನೇ ದಿನೇ ಹೆಚ್ಚಿತು. ಬೆಳಗ್ಗೆ 5ರಿಂದ ತಡರಾತ್ರಿಯ ವರೆಗೂ  ಕಷ್ಟ ಹೇಳಿಕೊಂಡು ಜನ ಬರುತ್ತಿದ್ದರು. ತಂದೆ ಬೆಂಗಳೂರಿಗೆ ಹೋದಾಗ ಮಾತ್ರ ಮನೆ ಬಿಕೋ ಅನ್ನುತ್ತಿತ್ತು. ಅವರು ರಾಜಕೀಯದಲ್ಲಿದ್ದಾಗ ಅನೇಕ ಮಂದಿ ಖ್ಯಾತನಾಮ ರಾಜಕಾರಣಿಗಳು ಮನೆಗೆ ಬರುತ್ತಿದ್ದುದು ಖುಷಿ ಕೊಡುತ್ತಿತ್ತು ಎನ್ನುತ್ತಾರೆ ಪುತ್ರ ರಾಮಕಿಶನ್‌ ಹೆಗ್ಡೆ.

ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Iran President

Iran ಅಧ್ಯಕ್ಷ ಮೃತ್ಯು; ಭಾರತದಾದ್ಯಂತ ಒಂದು ದಿನದ ಶೋಕಾಚರಣೆ

1-wqeqeqwe

List ಅಲ್ಲಿ ಹೆಸರಿಲ್ಲದೆ ಮಮತಾ ಬ್ಯಾನರ್ಜಿ ಸಹೋದರನಿಗೆ ಮತ ಹಾಕಲು ಸಾಧ್ಯವಾಗಲಿಲ್ಲ!

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Bandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆBandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆ

Bandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆ

Parameshwar

CBI ಗೆ ಕೊಡುವ ಅಗತ್ಯವಿಲ್ಲ; ಅಂಜಲಿ ಪ್ರಕರಣ ಕೂಡ ಸಿಐಡಿಗೆ:ಡಾ.ಜಿ.ಪರಮೇಶ್ವರ್

1——-sdasd

Konaje; ಕಂಪೌಂಡ್ ವಾಲ್ ಕುಸಿದು ಹಾಜಬ್ಬರ ಶಾಲೆಯ ವಿದ್ಯಾರ್ಥಿನಿ ಮೃತ್ಯು

Heavy rain ಮಲೆನಾಡಲ್ಲಿ ಮುಂದುವರೆದ ಮಳೆಯ ಅಬ್ಬರ: ಜನಜೀವನ ಅಸ್ತವ್ಯಸ್ತ

Heavy rain ಕಾಫಿನಾಡಲ್ಲಿ ಮುಂದುವರಿದ ಗಾಳಿ- ಮಳೆ ಅಬ್ಬರ: ಜನಜೀವನ ಅಸ್ತವ್ಯಸ್ತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

OTP ಹೇಳದಿದ್ದರೂ ಹಣ ಎಗರಿಸುತ್ತಾರೆ; ಎಚ್ಚರ! ರಾಷ್ಟ್ರೀಕೃತ ಬ್ಯಾಂಕ್‌ಗಳ ಹೆಸರಲ್ಲಿ ಸಂದೇಶ

ಕುಂದಾಪುರದ ವ್ಯಕ್ತಿ ಮುಂಬಯಿಯಲ್ಲಿ ಸಾವು

ಕುಂದಾಪುರದ ವ್ಯಕ್ತಿ ಮುಂಬಯಿಯಲ್ಲಿ ಸಾವು

Byndoor  ಶಿರೂರು: ಕಡಿದು ಬಿದ್ದಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಮೀನುಗಾರ ಮೃತ್ಯು

Byndoor ಶಿರೂರು: ಕಡಿದು ಬಿದ್ದಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಮೀನುಗಾರ ಮೃತ್ಯು

1-qweeqw

Kundapura; ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿಯೂ ವಿಧಿವಶ!

Kundapura ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿ!

Kundapura ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿ!

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Iran President

Iran ಅಧ್ಯಕ್ಷ ಮೃತ್ಯು; ಭಾರತದಾದ್ಯಂತ ಒಂದು ದಿನದ ಶೋಕಾಚರಣೆ

1-wqeqeqwe

List ಅಲ್ಲಿ ಹೆಸರಿಲ್ಲದೆ ಮಮತಾ ಬ್ಯಾನರ್ಜಿ ಸಹೋದರನಿಗೆ ಮತ ಹಾಕಲು ಸಾಧ್ಯವಾಗಲಿಲ್ಲ!

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್‌ಗೂ ಹಾನಿ

1-wqeqwewq

Goa:ಬೋಟ್ ನಲ್ಲಿ ಅಪಾಯಕ್ಕೆ ಸಿಲುಕಿದ್ದ 26 ಪ್ರವಾಸಿಗರ ರಕ್ಷಣೆ

Bandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆBandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆ

Bandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.